ಜೈಲಿಂದ ಮಣ್ಣು ತಂದು ಗೋಡ್ಸೆ ಪ್ರತಿಮೆ: ಹಿಂದೂ ಮಹಾಸಭಾ

masthmagaa.com:

ಹರಿಯಾಣದ ಅಂಬಾಲಾ ಸೆಂಟ್ರಲ್ ಜೈಲಿನಿಂದ ಮಣ್ಣನ್ನು ತಂದು ನಾಥುರಾಮ್ ಗೋಡ್ಸೆಯ ಪ್ರತಿಮೆ ನಿರ್ಮಿಸ್ತೀವಿ ಅಂತ ಹಿಂದು ಮಹಾಸಭಾ ತಿಳಿಸಿದೆ. ಮಹಾತ್ಮ ಗಾಂಧೀಜಿ ಹಂತಕ ಗೋಡ್ಸೆಯನ್ನು ಇದೇ ಜೈಲಿನಲ್ಲಿ 1949ರ ನವೆಂಬರ್​​ 15ರಂದು ಗಲ್ಲಿಗೇರಿಸಲಾಗಿತ್ತು. ಗೋಡ್ಸೆ ಡೆತ್ ಅನಿವರ್ಸರಿ ಸಂದರ್ಭದಲ್ಲಿ ಹಿಂದೂ ಮಹಾಸಭಾ ಈ ಹೇಳಿಕೆ ನೀಡಿದೆ. ಈಗಾಗಲೇ ಮಣ್ಣು ತರಲಾಗಿದ್ದು ಗೋಡ್ಸೆ ಮತ್ತು ಅವರೊಂದಿಗೆ ಗಲ್ಲಿಗೇರಿದ ನಾರಾಯಣ್ ಆಪ್ಟೆಯ ಪ್ರತಿಮೆ ನಿರ್ಮಿಸಲು ಬಳಸ್ತೀವಿ. ನಂತರ ಅವುಗಳನ್ನು ಗ್ವಾಲಿಯರ್​ನಲ್ಲಿರೋ ಹಿಂದೂ ಮಹಾಸಭಾ ಕಚೇರಿ ಮುಂದೆ ಅನಾವರಣಗೊಳಿಸ್ತೀವಿ ಅಂತ ಘೋಷಿಸಲಾಗಿದೆ. ಪ್ರತಿ ರಾಜ್ಯದಲ್ಲೂ ಬಲಿದಾನ್ ದಾಮ್ ಅಂತ ಮಾಡಿ, ಅಲ್ಲೂ ಇವರಿಬ್ಬರ ಪ್ರತಿಮೆಗಳನ್ನು ಅನಾವರಣಗೊಳಿಸ್ತೀವಿ ಅಂತಲೂ ಹಿಂದೂ ಮಹಾಸಭಾ ಘೋಷಿಸಿದೆ.

-masthmagaa.com

Contact Us for Advertisement

Leave a Reply