masthmagaa.com:
ಹರಿಯಾಣದ ಅಂಬಾಲಾ ಸೆಂಟ್ರಲ್ ಜೈಲಿನಿಂದ ಮಣ್ಣನ್ನು ತಂದು ನಾಥುರಾಮ್ ಗೋಡ್ಸೆಯ ಪ್ರತಿಮೆ ನಿರ್ಮಿಸ್ತೀವಿ ಅಂತ ಹಿಂದು ಮಹಾಸಭಾ ತಿಳಿಸಿದೆ. ಮಹಾತ್ಮ ಗಾಂಧೀಜಿ ಹಂತಕ ಗೋಡ್ಸೆಯನ್ನು ಇದೇ ಜೈಲಿನಲ್ಲಿ 1949ರ ನವೆಂಬರ್ 15ರಂದು ಗಲ್ಲಿಗೇರಿಸಲಾಗಿತ್ತು. ಗೋಡ್ಸೆ ಡೆತ್ ಅನಿವರ್ಸರಿ ಸಂದರ್ಭದಲ್ಲಿ ಹಿಂದೂ ಮಹಾಸಭಾ ಈ ಹೇಳಿಕೆ ನೀಡಿದೆ. ಈಗಾಗಲೇ ಮಣ್ಣು ತರಲಾಗಿದ್ದು ಗೋಡ್ಸೆ ಮತ್ತು ಅವರೊಂದಿಗೆ ಗಲ್ಲಿಗೇರಿದ ನಾರಾಯಣ್ ಆಪ್ಟೆಯ ಪ್ರತಿಮೆ ನಿರ್ಮಿಸಲು ಬಳಸ್ತೀವಿ. ನಂತರ ಅವುಗಳನ್ನು ಗ್ವಾಲಿಯರ್ನಲ್ಲಿರೋ ಹಿಂದೂ ಮಹಾಸಭಾ ಕಚೇರಿ ಮುಂದೆ ಅನಾವರಣಗೊಳಿಸ್ತೀವಿ ಅಂತ ಘೋಷಿಸಲಾಗಿದೆ. ಪ್ರತಿ ರಾಜ್ಯದಲ್ಲೂ ಬಲಿದಾನ್ ದಾಮ್ ಅಂತ ಮಾಡಿ, ಅಲ್ಲೂ ಇವರಿಬ್ಬರ ಪ್ರತಿಮೆಗಳನ್ನು ಅನಾವರಣಗೊಳಿಸ್ತೀವಿ ಅಂತಲೂ ಹಿಂದೂ ಮಹಾಸಭಾ ಘೋಷಿಸಿದೆ.
-masthmagaa.com
Contact Us for Advertisement