masthmagaa.com:
ಮುಂಬೈ: ಕಂಗನಾ ಮುಂಬೈಗೆ ಬಂದ್ರೆ ಶಿವಸೇನೆಯ ಮಹಿಳಾ ಸದಸ್ಯರು ಕಪಾಳಮೋಕ್ಷ ಮಾಡ್ತಾರೆ ಎಂದಿದ್ದ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್ಗೆ ಸಂಕಷ್ಟ ಎದುರಾದಂತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ನಟಿ ಕಂಗನಾಗೆ ಪ್ರತಾಪ್ ಬೆದರಿಕೆ ಹಾಕಿದ್ದಾರೆ. ಹೀಗಾಗಿ ಮುಂಬೈ ಪೊಲೀಸರು ಕೂಡಲೇ ಸುಮೋಟೋ ಕೇಸ್ ದಾಖಲಿಸಿ, ಶಾಸಕರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತು ಬಾಲಿವುಡ್ ಕೈವಾಡವಿದೆ ಅಂತ ಕಂಗನಾ ಆರೋಪಿಸಿದ್ರು. ಇದ್ರ ಬೆನ್ನಲ್ಲೇ ತಿರುಗೇಟು ನೀಡಿದ್ದ ಶಿವಸೇನೆ ಸಂಸದ ಸಂಜಯ್ ರಾವತ್, ಕಂಗನಾ ಮುಂಬೈ ಪೊಲೀಸರಿಗೆ ಅವಮಾನ ಮಾಡಿದ್ದಾರೆ. ಹೀಗಾಗಿ ಕಂಗನಾ ಮುಂಬೈಗೆ ಬಂದ್ರೆ ಗೃಹ ಇಲಾಖೆಯಿಂದ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದಿದ್ರು. ರಾವತ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕಂಗನಾ, ಶಿವಸೇನೆ ನಾಯಕ ನಾನು ಮುಂಬೈಗೆ ಬರಬಾರದು ಅಂತ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ. ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತೆ ಯಾಕೆ ಅನ್ನಿಸುತ್ತಿದೆ ಅಂದಿದ್ರು. ಈ ವೇಳೆ ಒಂದು ಹೆಜ್ಜೆ ಮುಂದೆ ಹೋಗಿ ನಾಲಗೆ ಹರಿಬಿಟ್ಟಿದ್ದ ಶಿವಸೇನೆ ಶಾಸಕ ಪ್ರತಾಪ್ ಸರ್ನಾಯಕ್, ಕಂಗನಾ ಮುಂಬೈಗೆ ಬಂದ್ರೆ ಶಿವಸೇನೆ ಮಹಿಳಾ ಸದಸ್ಯರು ಕಪಾಳ ಮೋಕ್ಷ ಮಾಡ್ತಾರೆ ಅಂತ ಹೇಳಿದ್ರು.
-masthmagaa.com
Contact Us for Advertisement