masthmagaa.com
ತಾಜ್ಮಹಲ್ನಲ್ಲಿ ಬಂದ್ ಆಗಿರೋ 22 ಕೋಣೆಗಳಲ್ಲಿ ಹಿಂದೂ ದೇವರ ವಿಗ್ರಹಗಳಿರಬಹುದು. ವಿಗ್ರಹಗಳನ್ನ ಇಟ್ಟು ಕೋಣೆಗಳನ್ನ ಲಾಕ್ ಮಾಡಿರಬಹುದು. ಈ ಬಗ್ಗೆ ತನಿಖೆ ನಡೆಸಲು ಭಾರತೀಯ ಪುರಾತತ್ವ ಇಲಾಖೆಗೆ ನಿರ್ದೇಶಿಸಬೇಕು ಅಂತ ಅಲಹಾಬಾದ್ ಹೈಕೋರ್ಟ್ಗೆ ವ್ಯಕ್ತಿಯೊಬ್ರು ಅರ್ಜಿ ಸಲ್ಲಿಸಿದ್ದಾರೆ. ಕೆಲವು ಇತಿಹಾಸಕಾರರ ಪ್ರಕಾರ ತಾಜ್ಮಹಲ್ನಲ್ಲಿ ಶಾಶ್ವತವಾಗಿ ಬಂದ್ ಆಗಿರೋ 22 ಕೋಣೆಗಳಲ್ಲಿ ಶಿವನ ದೇಗುಲ ಇರಬಹುದು. ಹೀಗಾಗಿ ಸತ್ಯಶೋಧನಾ ಸಮಿತಿ ರಚಿಸಿ ತನಿಖೆ ನಡೆಸಬೇಕು ಅಂತ ಅರ್ಜಿದಾರರು ಕೇಳಿಕೊಂಡಿದ್ದಾರೆ. ಜೊತೆಗೆ ಇದುವರೆಗೆ ಆ ಕೋಣೆಗಳನ್ನ ಯಾಕೆ ಓಪನ್ ಮಾಡಿಲ್ಲ ಅಂತ ಮಾಹಿತಿ ಹಕ್ಕು ಅಡಿಯಲ್ಲಿ ಕೇಳಿದಾಗ, ಭದ್ರತಾ ಕಾರಣಗಳು ಅಂತ ಭಾರತೀಯ ಪುರಾತತ್ವ ಇಲಾಖೆಯಿಂದ ಉತ್ತರ ಬಂದಿದೆ ಅಂತಾನೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
-masthmagaa.com
Contact Us for Advertisement