masthmagaa.com:
ಹಿಂದೂ ಸಮಾಜದ ಜಾತಿ ವ್ಯವಸ್ಥೆಗೆ ಪಂಡಿತರೇ ಕಾರಣ ಅಂತ ಹೇಳಿದ್ದ RSS ಮುಖ್ಯಸ್ಥ ಮೋಹನ್ ಭಾಗವತ್ ಅವರ ವಿರುದ್ದ ಕೇಸ್ ದಾಖಲಾಗಿದೆ. ಮೋಹನ್ ಭಾಗವತ್ ಬ್ರಾಹ್ಮಣರಿಗೆ ಅವಮಾನ ಮಾಡಿದ್ದಾರೆ ಅಂತೇಳಿ ಬಿಹಾರದ ಸುಧೀರ್ ಓಜಾ ಅನ್ನೋ ವಕೀಲರು ದಾವೆ ಹೂಡಿದ್ದಾರೆ. ಈ ಅರ್ಜಿ ವಿಚಾರಣೆ ಫೆಬ್ರವರಿ 20ಕ್ಕೆ ನಡೆಯಲಿದೆ. ಇತ್ತ ಭಾಗವತ್ ಅವರ ಹೇಳಿಕೆಗೆ ಪುರಿ ನಿಶ್ಚಲಾನಂದ ಸರಸ್ವತಿ ಸ್ವಾಮಿಗಳು ಆಕ್ರೋಶ ವ್ಯಕ್ತಪಡಿಸಿದ್ದು ʻವರ್ಣ ವ್ಯವಸ್ಥೆ ಬ್ರಾಹ್ಮಣರಿಗೆ ಸಿಕ್ಕಿರೋ ಗಿಫ್ಟು. ಆರ್ಎಸ್ಎಸ್ಗೆ ತನ್ನದೇ ಆದ ಪುಸ್ತಕವೂ ಇಲ್ಲ, ಪುಸ್ತಕದ ಜ್ಞಾನವೂ ಇಲ್ಲ. ಹೌದು, ವರ್ಣ ವ್ಯವಸ್ಥೆ ಪಂಡಿತರು ಸೃಷ್ಟಿಸಿರೋದೆ ಹೊರತು ಮೂರ್ಖರು ಮಾಡಿದ್ದಲ್ಲ. ಅಮೆರಿಕ, ಫ್ರಾನ್ಸ್ನಂತಹ ದೇಶಗಳಲ್ಲೂ ಸಹ ಈ ಪರೋಕ್ಷವಾಗಾದ್ರೂ ವರ್ಣ ವ್ಯವಸ್ಥೆಯನ್ನ ಸೃಷ್ಟಿಸುವ ಅಗತ್ಯವಿದೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement