masthmagaa.com:
ಗುಜರಾತ್ ಚುನಾವಣೆ ಮುಕ್ತಾಯವಾಗ್ತಿದ್ದಂತೆ ಉಳಿದ ರಾಜ್ಯಗಳಲ್ಲಿ ಪಕ್ಷವನ್ನ ಬಲಪಡಿಸೋಕೆ ಮುಂದಾಗಿರೊ ಬಿಜೆಪಿ ದಿಲ್ಲಿಯಲ್ಲಿ ರಾಷ್ಟ್ರೀಯ ಪದಾಧಿಕಾರಿಗಳ ಸಭೆ ಆಯೋಜಿಸಿದೆ. ನಿನ್ನೆ ಹಾಗೂ ಇವತ್ತು 2 ದಿನಗಳ ಕಾಲ ನಡೆದ ಸಭೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ಪಕ್ಷದ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಪ್ರಮುಖ ನಾಯಕರ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ತವರು ಚುನಾವಣೆ ಬಳಿಕ ಕರ್ನಾಟಕದತ್ತ ಮೋದಿ-ಅಮಿತ್ ಶಾ ಚಿತ್ತ ನೆಟ್ಟಿದ್ದು, ದಿಲ್ಲಿಯಲ್ಲಿ ನಡೆದ ಸಭೆಗೆ ವಿಶೇಷ ಮಹತ್ವ ಪಡೆದುಕೊಂಡಿದೆ.
-masthmagaa.com
Contact Us for Advertisement