ತಮಿಳುನಾಡು: ಹಿಂದಿ ಹೇರಿಕೆ ವಿರೋಧಿಸಿ ಆತ್ಮಹತ್ಯೆ ಮಾಡಿಕೊಂಡ ರೈತ!

masthmagaa.com:

ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ಧೋರಣೆ ವಿರೋಧಿಸಿ 85 ವರ್ಷ ವಯಸ್ಸಿನ ವೃದ್ಧ ತಂಗವೇಲ್‌ ಅನ್ನೋರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಡಿಎಂಕೆ ಕಚೇರಿ ಬಳಿ ಮೈಗೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಂಗವೇಲ್‌ ಅವ್ರು ಡಿಎಂಕೆಯ ಸಕ್ರಿಯ ಸದಸ್ಯರಾಗಿದ್ದು, ಶಿಕ್ಷಣ ಮಾಧ್ಯಮವಾಗಿ ಹಿಂದಿಯನ್ನ ಅನುಷ್ಠಾನಗೊಳಿಸೋ ಕೇಂದ್ರ ಸರ್ಕಾರದ ಕ್ರಮದಿಂದ ಆಘಾತಗೊಂಡಿದ್ದರು ಎನ್ನಲಾಗಿದೆ. ಹಾಗೂ ಆತ್ಮಹತ್ಯೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವ್ರನ್ನ ಉದ್ದೇಶಿಸಿ ಬರೆದ ಬ್ಯಾನರ್‌ ಹಿಡಿದಿದ್ರು. ಮೋದಿ ಸರ್ಕಾರವೇ, ಕೇಂದ್ರ ಸರ್ಕಾರವೇ ನಮಗೆ ಹಿಂದಿ ಬೇಡ. ನಮ್ಮ ಮಾತೃಭಾಷೆ ತಮಿಳು. ಹಿಂದಿ ವಿದೂಷಕರ ಭಾಷೆ. ಹಿಂದಿ ಹೇರಿಕೆಯಿಂದ ನಮ್ಮ ವಿದ್ಯಾರ್ಥಿಗಳ ಜೀವನಕ್ಕೆ ತೊಂದರೆಯಾಗಲಿದೆ. ಹಿಂದಿಯನ್ನ ತೊಲಗಿಸಿ ಅನ್ನೋ ಸಂದೇಶ ಬ್ಯಾನರ್‌ನಲ್ಲಿ ಇತ್ತು ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply