masthmagaa.com:
ಕನ್ನಡದ ಪವರ್ ಸ್ಟಾರ್ ನಮ್ಮೆಲ್ಲರ ಪ್ರೀತಿಯ ಅಪ್ಪು ಅವರ ಡ್ರೀಮ್ ಪ್ರೊಜೆಕ್ಟ್ ಗಂಧದ ಗುಡಿ Docudrama ಇವತ್ತು ರಾಜ್ಯಾದ್ಯಂತ ಬಿಡುಗಡೆ ಆಗಿದ್ದು ಚಿತ್ರಕ್ಕೆ ಕರ್ನಾಟಕದ ಎಲ್ಲ ಮೂಲೆಯಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ತಮ್ಮ ಪ್ರೀತಿಯ ಅಪ್ಪು ಅವರನ್ನ ಕೊನೆಯ ಬಾರಿ ಚಿತ್ರಮಂದಿರದಲ್ಲಿ ಕಣ್ಣು ತುಂಬಿಕೊಳ್ಳೋಕೆ ಥಿಯೇಟರ್ ಮುಂದೆ ಮುಗಿಬಿದ್ದಿರುವ ದೃಶ್ಯಗಳು ಎಲ್ಲೆಡೆ ಕಂಡುಬಂದಿವೆ. ಎಂದಿನಂತೆ ಹೆಚ್ಚಾಗಿ ಮಹಿಳೆಯರು ಮತ್ತು ಕುಟುಂಬ ಸಮೇತರಾಗಿ ಚಿತ್ರ ನೋಡೋಕೆ ಉತ್ಸುಕರಾಗಿರುವುದನ್ನ ನೋಡಬಹುದಾಗಿದೆ. ಭಾರತದ ನಾಲ್ಕು Biodiversity hot spot ಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟ ಮತ್ತು ಜೀವೈವಿದ್ಯತೆಯ ಶ್ರೀಮಂತಿಕೆಯನ್ನ ತೋರಿಸುವ ಮೂಲಕ ಅಪ್ಪು ಪ್ರಕೃತಿ ಮಾತೆಗೆ ಭೌತಿಕವಾಗಿ ಈ ಮೂಲಕ ವಿದಾಯ ಹೇಳಿದ್ದಾರೆ. ಇನ್ನು ಡಾ. ಪುನೀತ್ ರಾಜ್ಕುಮಾರ್ ಅವರಿಗೆ ನವೆಂಬರ್ 1ರಂದು ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಖ್ಯಾತ ನಟ ರಜನಿಕಾಂತ್, ತೆಲುಗು ಸೂಪರ್ ಸ್ಟಾರ್ ಜೂನಿಯರ್ NTR ಮತ್ತು ಖ್ಯಾತ ಕವಿ, ಸಾಹಿತಿ ಚಂದ್ರಶೇಖರ ಕಂಬಾರ ಅವರು ಆಗಮಿಸಲಿದ್ದಾರೆ ಅಂತ ಸಿಎಂ ಬೊಮ್ಮಾಯಿ ಹೇಳಿದ್ದಾರೆ.
-masthmagaa.com
Contact Us for Advertisement