ಶ್ರೀಪಾದ್​ ನಾಯಕ್​ ಅವರನ್ನ ದೆಹಲಿಯ ಏಮ್ಸ್​ಗೆ ಶಿಫ್ಟ್ ಮಾಡುವ ಸಾಧ್ಯತೆ

masthmagaa.com:

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಬಳಿ ಸೋಮವಾರ ರಾತ್ರಿ ನಡೆದ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಕೇಂದ್ರದ ರಕ್ಷಣಾ ಮತ್ತು ಆಯುಷ್ ಖಾತೆ ರಾಜ್ಯ ಸಚಿವ ಶ್ರೀಪಾದ್​ ನಾಯಕ್​ರಿಗೆ ಗೋವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದರ ಬೆನ್ನಲ್ಲೇ ರಕ್ಷಣಾ ಸಚಿವ ರಾಜನಾಥ್​ ಸಿಂಗ್ ಗೋವಾಕ್ಕೆ ದೌಡಾಯಿಸಿ ಶ್ರೀಪಾದ್​ ನಾಯಕ್ ಅವರ ಆರೋಗ್ಯ ವಿಚಾರಿಸಿದ್ದಾರೆ. ಶ್ರೀಪಾದ್​ ನಾಯಕ್​ ಅವರ ಆರೋಗ್ಯ ಸ್ಥಿರವಾಗಿದೆ. ಸದ್ಯ ಅವರಿಗೆ ಯಾವುದೇ ಅಪಾಯವಿಲ್ಲ ಅಂತ ವೈದ್ಯರು ಹೇಳಿದ್ದಾರೆ. ದೆಹಲಿ ಏಮ್ಸ್​ನ ವೈದ್ಯರ ತಂಡವೊಂದು ಗೋವಾಕ್ಕೆ ಬರಲಿದ್ದು, ಅಗತ್ಯಬಿದ್ರೆ ಏಮ್ಸ್​ಗೆ​ ಶಿಫ್ಟ್ ಮಾಡಲಾಗುತ್ತೆ ಅಂತ ರಾಜನಾಥ್ ಸಿಂಗ್ ಹೇಳಿದ್ದಾರೆ. ಅಂದ್ಹಾಗೆ ಅಪಘಾತದಲ್ಲಿ ಶ್ರೀಪಾದ್ ನಾಯಕ್​ ಅವರ ಪತ್ನಿ ವಿಜಯಾ ನಾಯಕ್‌ ಹಾಗೂ ಕಾರಿನಲ್ಲಿದ್ದ ಸಚಿವರ ಆಪ್ತ ಕಾರ್ಯದರ್ಶಿ ಮೃತಪಟ್ಟಿದ್ದರು.

-masthmagaa.com

Contact Us for Advertisement

Leave a Reply