ಸಂಜಯ್‌ಗಾಂಧಿ ಬ್ರಿಗೇಡ್‌ ಸಿಕ್ಕವರನ್ನ ಕರೆದುಕೊಂಡು ಬಂದು ಕಟ್ ಮಾಡುತ್ತಿದ್ರು, ನಾವು ಹಾಗೆ ಮಾಡಲ್ಲ: ಸಿ.ಟಿ ರವಿ

masthmagaa.com:

RSS ಮುಖ್ಯಸ್ಥ ಮೋಹನ್‌ ಭಾಗವತ್‌ ತಮ್ಮ ವಿಜಯದಶಮಿ ಭಾಷಣದಲ್ಲಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಮಾತಾಡಿದ ಬೆನ್ನಲ್ಲೇ ಈಗ ಅದ್ರ ಬಗ್ಗೆ ಚರ್ಚೆ ಎದ್ದಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತಾಡಿ, ಕೋಳಿ ಕೇಳಿ ಮಸಾಲೆ ಅರೆಯುವುದಿಲ್ಲ ಎಂಬುದು ಹಳ್ಳಿ ಕಡೆಯಲ್ಲಿ ಚಾಲ್ತಿಯಿರೋ ಮಾತು. ಆದ್ರೆ, ನಾವು ಆ ರೀತಿ ವರ್ತಿಸೋದಿಲ್ಲ. ಈ ಬಗ್ಗೆ ಎಲ್ಲ ರಾಜ್ಯಗಳ ವಿಧಾನಸಭೆಗಳು ಮತ್ತು ಸಂಸತ್ತಿನಲ್ಲಿ ಚರ್ಚೆಯಾಗ್ಬೇಕು. ನಂತ್ರ ಕಾನೂನು ಜಾರಿಯಾಗಲಿ ಅನ್ನೋದು ನಮ್ಮ ಆಶಯ. ಇಂದಿರಾಗಾಂಧಿ ಕಾಲದಲ್ಲಿ ಸಂಜಯ್‌ಗಾಂಧಿ ಬ್ರಿಗೇಡ್‌ ಸಿಕ್ಕವರನ್ನ ಕರೆದುಕೊಂಡು ಬಂದು ಕಟ್ ಮಾಡುತ್ತಿದ್ರು ನಾವು ಹಾಗೆ ಮಾಡೋದಿಲ್ಲ ಅಂತ ಹೇಳಿದಾರೆ.

-masthmagaa.com

Contact Us for Advertisement

Leave a Reply