masthmagaa.com:

ಗ್ರಾಹಕಿ ಮೇಲೆ ಜೊಮ್ಯಾಟೊ ಡೆಲಿವರಿ ಬಾಯ್​ ಹಲ್ಲೆ ನಡೆಸಿರೋ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್ ಸಿಕ್ಕಿದೆ. ಅಂದ್ಹಾಗೆ ಆನ್​ಲೈನ್​ನಲ್ಲಿ ಆರ್ಡರ್ ಮಾಡಿದ್ದ ಫುಡ್​ ಬರೋದು ಲೇಟಾಯ್ತು ಅಂತ ಪ್ರಶ್ನೆ ಮಾಡಿದ ಹಿತೇಶಾ ಚಂದ್ರಾನೀ ಎಂಬುವವರಿಗೆ ಡೆಲಿವರಿ ಬಾಯ್​ ಕಾಮರಾಜ್​ ಪಂಚ್ ಮಾಡಿದ್ದ ಅಂತ ಆರಂಭದಲ್ಲಿ ಸುದ್ದಿಯಾಗಿತ್ತು. ಹಿತೇಶಾ ಕೂಡ ವಿಡಿಯೋ ಮಾಡಿ ಇದನ್ನೇ ಹೇಳಿದ್ದಳು. ಆದ್ರೀಗ ಈ ಪ್ರಕರಣಕ್ಕೆ ಹೊಸ ಆಯಾಮವೊಂದು ಸಿಕ್ಕಿದೆ. ಅದೇ ಡೆಲಿವರಿ ಬಾಯ್​ ಕಾಮರಾಜ್​ ಹೇಳಿಕೆ.. ಹೌದು ಪ್ರಕರಣ ಸಂಬಂಧ ಹೇಳಿಕೆ ಕೊಟ್ಟಿರೋ ಡೆಲಿವರಿ ಬಾಯ್, ಅಂದು ಏನೇನಾಯ್ತು ಅಂತ ವಿವರಿಸಿದ್ದಾನೆ. ಆಕೆ ಮೇಲೆ ನಾನು ಹಲ್ಲೆ ಮಾಡಿಲ್ಲ. ಆಕೆಯೇ ಮೊದಲು ಕೆಟ್ಟ ಕೆಟ್ಟ ಪದಗಳನ್ನ ಬಳಸಿ ಬೈದಿದ್ದಾಳೆ. ನಂತರ ನನಗೆ ಚಪ್ಪಲಿಯಿಂದ ಹೊಡೆದಿದ್ದಾಳೆ ಎಂದಿದ್ದಾನೆ. ಅಲ್ಲದೆ ಆಕೆಯ ಮೂಗಿಗೆ ಗಾಯವಾಗಿದ್ದು ಹೇಗೆ ಅನ್ನೋದನ್ನ ಕೂಡ ವಿವರಿಸಿದ್ದಾನೆ. ಈತನ ಹೇಳಿಕೆ ಬೆನ್ನಲ್ಲೇ ಹಲವರು ಡೆಲಿವರಿ ಬಾಯ್​ ಪರ ನಿಂತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡ್ತಿದ್ದಾರೆ.

ಡೆಲಿವರಿ ಬಾಯ್ ಹೇಳಿದ್ದೇನು..?

ಹಿತೇಶಾ ಚಂದ್ರಾನೀ ಅವರ ಅಪಾರ್ಟ್​ಮೆಂಟ್​ಗೆ ಹೋದ ನಾನು ಫುಡ್​ ಡೆಲಿವರಿ ಮಾಡಿ, ದುಡ್ಡು ಕೊಡ್ತಾರೆ ಅಂತ ಕಾಯ್ತಿದ್ದೆ. ಯಾಕಂದ್ರೆ ಅದು ಕ್ಯಾಶ್ ಆನ್ ಡೆಲಿವರಿ ಆಗಿತ್ತು. ಜೊತೆಗೆ ಟ್ರಾಫಿಕ್ ಜಾಮ್ ಇದ್ದಿದ್ದರಿಂದ, ರಸ್ತೆ ಕಾಮಗಾರಿ ನಡೆಯುತ್ತಿದ್ದರಿಂದ ಲೇಟ್​ ಆಯ್ತು ಅಂತ ಕ್ಷಮೆ ಕೂಡ ಕೇಳ್ದೆ. ಆದ್ರೆ ಅವರು ತುಂಬಾ ಒರಟಾಗಿದ್ದರು. ಫುಡ್ ತೆಗೆದುಕೊಂಡು ದುಡ್ಡು ಕೊಡೋಕೆ ನಿರಾಕರಿಸಿದ ಅವರು ಜೊಮ್ಯಾಟೊ ಕಸ್ಟಮರ್ ಕೇರ್​ ಜೊತೆ ಮಾತನಾಡಿದ್ರು. ಇನ್ನು ಇವರು ದುಡ್ಡು ಕೊಡಲ್ಲ ಅಂತ ಚಿಂತೆಯಾಯ್ತು. ಮತ್ತೊಮ್ಮೆ ದುಡ್ಡು ಕೊಡಿ ಅಂತ ಕೇಳ್ದೆ. ಆಗ ನನ್ನನ್ನ ಗುಲಾಮ ಅಂತ ಬೈದ್ರು. ಅಷ್ಟರಲ್ಲಿ ಜೊಮ್ಯಾಟೊದಿಂದ ನಂಗೆ ಕಾಲ್ ಬಂತು. ಆರ್ಡರ್ ಕ್ಯಾನ್ಸಲ್ ಮಾಡಿದ್ದೇವೆ ಅಂತ ಹೇಳಿದ್ರು. ಹೀಗಾಗಿ ಫುಡ್​ ವಾಪಸ್ ಕೊಡುವಂತೆ ಕೇಳ್ದೆ. ಆದ್ರೆ ಹಿತೇಶಾ ಅದಕ್ಕೆ ಒಪಲಿಲ್ಲ. ಹೀಗಾಗಿ ವಾಪಸ್ ಹೋಗಲು ನಿರ್ಧರಿಸಿ ಲಿಫ್ಟ್ ಕಡೆ ಹೋದೆ. ಆಗ ಕೆಟ್ಟ ಕೆಟ್ಟ ಪದಗಳನ್ನ ಬಳಸಿ ಬೈಯಲು ಶುರು ಮಾಡಿದ್ರು. ನನ್ನ ಮೇಲೆ ಸ್ಲಿಪ್ಪರ್ ಎಸೆದ್ರು. ಹೊಡೆಯೋಕೆ ಶುರು ಮಾಡಿದ್ರು. ನನ್ನ ಕೈಯನ್ನ ಅಡ್ಡ ಹಿಡಿದೆ. ನನ್ನ ಕೈಯನ್ನ ಸೈಡಿಗೆ ಸರಿಸಲು ಯತ್ನಿಸಿದ್ರು. ಈ ವೇಳೆ ಆಕೆ ಉಂಗುರ ಹಾಕಿದ್ದ ಬೆರಳಿನಿಂದ ಮಿಸ್​ ಆಗಿ ಆಕೆಯ ಮೂಗಿಗೇ ಹೊಡೆದುಕೊಂಡಳು. ಇದರಿಂದ ಆಕೆಯ ಮೂಗಿನಲ್ಲಿ ರಕ್ತ ಬಂತು. ಆಕೆಯ ಮುಖವನ್ನ ನೋಡಿದ್ರೆ ಗೊತ್ತಾಗುತ್ತೆ, ಅದು ಪಂಚ್​ನಿಂದ ಆದ ಗಾಯ ಅಲ್ಲ ಅಂತ. ನಾನು ಉಂಗುರ ಹಾಕಿಲ್ಲ. ಹಿತೇಶಾ ಮಾಡಿರೋ ವಿಡಿಯೋದಲ್ಲಿ ಆಕೆ ಉಂಗುರ ಧರಿಸಿರೋದು ಕಾಣುತ್ತೆ. ಕೊನೆಗೆ ನಾನು ಲಿಫ್ಟೂ ಬೇಡ ಏನೂ ಬೇಡ ಅನ್ಕೊಂಡು ಮೆಟ್ಟಿಲು ಇಳಿದು ಓಡಿ ಹೋದೆ. ಜೊತೆಗೆ ಏನೆಲ್ಲಾ ನಡೀತು ಅನ್ನೋದನ್ನ ಜೊಮ್ಯಾಟೊಗೆ ವಿವರಿಸಿದೆ. ಸಮಸ್ಯೆ ಏನು ಅಂದ್ರೆ ನಾನು ಅಮಾಯಕ ಅನ್ನೋದನ್ನ ಸಾಬೀತು ಮಾಡೋಕೆ ಅಲ್ಲಿ ಯಾವುದೇ ಸಿಸಿ ಕ್ಯಾಮರಾ ಇರಲಿಲ್ಲ ಅಂತ ಡೆಲಿವರಿ ಬಾಯ್ ಕಾಮರಾಜ್ ಹೇಳಿದ್ದಾನೆ.

ಡೆಲಿವರಿ ಬಾಯ್ ಹೇಳ್ತಿರೋದು ಸುಳ್ಳು ಎಂದ ಮಹಿಳೆ

ಇದರ ಬೆನ್ನಲ್ಲೇ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರೋ ಮಹಿಳೆ, ನಾನು ಆತನಿಗೆ ಹೊಡೆದಿಲ್ಲ, ಡೆಲಿವರಿ ಬಾಯ್ ಹೇಳ್ತಿರೋದು ಸುಳ್ಳು ಅಂತ ಹೇಳಿದ್ದಾರೆ. ಫುಡ್​ ಲೇಟಾಗಿ ಬಂದಿದ್ದಕ್ಕೆ ನನ್ನ ಆರ್ಡರ್ ಕ್ಯಾನ್ಸಲ್ ಮಾಡಿ. ಇಲ್ಲಾಂದ್ರೆ ಫುಡ್​ ಫ್ರೀ ಕೊಡಿ ಅಂತ ಕಸ್ಟಮರ್​ ಕೇರ್​ಗೆ ಹೇಳ್ದೆ. ಅಂದ್ಹಾಗೆ ಜೊಮ್ಯಾಟೊದಲ್ಲಿ ಕೆಲವೊಂದುಸಲ, ಇಷ್ಟು ಟೈಮ್ ಒಳಗೆ ಫುಡ್​ ಡೆಲಿವರಿ ಮಾಡಿಲ್ಲ ಅಂದ್ರೆ ಆ ಅಮೌಂಟ್​ ರಿಫಂಡ್ ಆಗುತ್ತೆ. ಫುಡ್ ಕೂಡ​ ಫ್ರಿಯಾಗಿ ಸಿಗುತ್ತೆ. ಈ ಆಫರ್ ಬಗ್ಗೆ ನಾನು ಕಸ್ಟಮರ್ ಕೇರ್ ಬಳಿ ಮಾತಾಡ್ತಿದ್ದೆ. ಆಗ ನಿಂಗೇನಾದ್ರೂ ಜೊಮ್ಯಾಟೊದಿಂದ ಕಾಲ್ ಬಂತಾ ಅಂತ ಡೆಲಿವರಿ ಬಾಯ್​ಗೆ ಕೇಳ್ದೆ. ಆಗ ಸಿಟ್ಟಾದ ಆತ ಅದೆಲ್ಲಾ ನಂಗೆ ಗೊತ್ತಿಲ್ಲ. ನಾನೇನು ನಿಮ್ಮ ಗುಲಾಮನಾ? ನಾನ್​ ಹೋಗ್ಬೇಕು ದುಡ್ಡು ಕೊಡಿ ಅಂತ ಕೇಳಿದ್ದಾನೆ. ಒಂದ್​ರೀತಿ ಬೆದರಿಕೆ ಹಾಕೋ ಥರ ಮಾತಾಡಿದ್ದಾನೆ. ಬಳಿಕ ನಾನು ಜೋರಾಗಿ ಕಿರುಚಿ ಬಾಗಿಲು ಹಾಕೋಕೆ ಮುಂದಾದಾಗ, ಆತ ಬಾಗಿಲನ್ನ ತಳ್ಳಿ ಒಳಗೆ ಬಂದು, ನನಗೆ ಪಂಚ್ ಮಾಡಿ ಫುಡ್​ ತೆಗೆದುಕೊಂಡು ಹೋದ ಅಂತ ಹೇಳಿದ್ದಾರೆ.

https://twitter.com/HChandranee/status/1369486163140956160

-masthmagaa.com

Contact Us for Advertisement

Leave a Reply