ಸಿದ್ದು ಭಾಷಣಕ್ಕೆ ಅಡ್ಡಿ! ಜಮೀರ್ ಪರ ಘೋಷಣೆ: ಸಿದ್ದು, ಡಿಕೆ ಕೆಂಡ!

masthmagaa.com:

ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಷಣ ಮಾಡುವಾಗ ಕೆಲವರು ಅಡ್ಡಿಪಡಿಸಿದ್ದಾರೆ. ಜಮೀರ್ ಅಹ್ಮದ್​ ಖಾನ್​ ಫೋಟೋ ಇಟ್ಕೊಂಡು, ಅವರ ಪರ ಘೋಷಣೆಗಳನ್ನ ಕೂಗಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಸಿದ್ದರಾಮಯ್ಯ ಸುಮ್ನೆ ಕೂತ್ಕೊಳ್ಳಿ, ಸೈಲೆಂಟಾಗಿರರ್ಬೇಕು ಅಂದ್ರು.ಆದ್ರೆ ಯಾರೂ ಸುಮ್ಮನಾಗಲಿಲ್ಲ. ಕೊನೆಗೆ ಭಾಷಣವನ್ನ ಅರ್ಧಕ್ಕೆ ನಿಲ್ಲಿಸಿ ವೇದಿಕೆಯಿಂದ ಕೆಳಗಿಳಿದು ಹೋದ್ರು ಸಿದ್ದರಾಮಯ್ಯ. ಇದರಿಂದ ಸಿಟ್ಟಿಗೆದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​, ಇಲ್ಲಿ ವ್ಯಕ್ತಿ ಪೂಜೆಗೆ ಅವಕಾಶ ಕೊಡಲ್ಲ. ಇಲ್ಲಿ ಏನಿದ್ರೂ ಕಾಂಗ್ರೆಸ್​ ಪೂಜೆ. ನಿಮ್ಮ ಈ ಪುಂಡಾಟಿಕೆ ಎಲ್ಲಾ ಬಿಟ್​ಬಿಡ್ಬೇಕು. ಇಲ್ಲಾಂದ್ರೆ ಏನ್​ ಮಾಡ್ಬೇಕು ಅಂತ ನಂಗೆ ಗೊತ್ತಿದೆ ಅಂತ ವಾರ್ನಿಂಗ್ ಕೊಟ್ರು.
ಇನ್ನು ಘಟನೆ ಬಗ್ಗೆ ನಂತರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, ನಂಗೇನೂ ಅಡ್ಡಿ ಪಡಿಸಿಲ್ಲ. ನಂಗೆ ಟೈಮ್​ ಇರಲಿಲ್ಲ ಹೀಗಾಗಿ ಹೋದೆ. ನಾನು ಭಾಷಣ ಮಾಡಲ್ಲ, ಟೈಮ್​ ಇಲ್ಲ ಅಂತ ಮೊದಲೇ ಹೇಳಿದ್ದೆ ಅಂತ ಹೇಳಿದ್ರು. ಡಿಕೆ ಶಿವಕುಮಾರ್​ ಕೂಡ, ಸಿದ್ದರಾಮಯ್ಯಗೆ ಟೈಂ ಇರ್ಲಿಲ್ಲ ಅಂತ ಹೇಳ್ತಿದ್ರು.
ಇನ್ನು ಇಡೀ ಘಟನೆ ಬಗ್ಗೆ ಮಾತನಾಡಿದ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್​ ಖಾನ್​, ಕೂಗೋದ್ರಲ್ಲಿ ಏನ್​ ತಪ್ಪಿದೆ. ತಪ್ಪಿದ್ರೆ ನೋಟಿಸ್​ ಕೊಡ್ಲಿ. ಹೀಗೆ ಮುಂದೆ ಬಂದು ಕೂಗೋದಕ್ಕೆ ಸಿದ್ದರಾಮಯ್ಯ ಕೂಡ ಖುಷಿ ಪಡ್ತಾರೆ, ಬೇಜಾರ್ ಮಾಡ್ಕೊಳ್ಳಲ್ಲ. ಅದೇ ಕಾರಣಕ್ಕೆ ಸಿದ್ದರಾಮಯ್ಯ ಲೀಡರ್​ ಆಗಿರೋದು. ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ನೇಮಕದಿಂದ ನಂಗೇನು ಬೇಸರ ಇಲ್ಲ. ಕಾರಣಾಂತರಗಳಿಂದ ಆ ಸಭೆಗೆ ನಂಗೆ ಹೋಗಕ್ಕಾಗಿರಲಿಲ್ಲ ಅಂತ ಜಮೀರ್​ ಅಹ್ಮದ್​​ ಖಾನ್​ ಹೇಳಿದ್ದಾರೆ.

ಇನ್ನು ಇದೇ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಇಮ್ರಾನ್​ ಪ್ರತಾಪ್​ ಗಡಿ ಪ್ರಚೋದನಾಕಾರಿ ಹೇಳಿಕೆಯೊಂದನ್ನ ಕೊಟ್ಟಿದ್ದಾರೆ. ನೀವು ಟಿಪ್ಪು ಸುಲ್ತಾನ್ ನೆಲದವರು. ನಿಮ್ಗೆ ತಲೆ ತಗ್ಗಿಸೋದು ಗೊತ್ತಿಲ್ಲ, ತಲೆ ಕಡಿಯೋದು ಗೊತ್ತು, ತಲೆ ಕತ್ತರಿಸೋದು ಗೊತ್ತು ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply