‘ಸುಶಾಂತ್ ಸಾವಿಗೆ ಈಕೆಯೇ ಕಾರಣ’: ತಂದೆಯ ಕಂಪ್ಲೇಂಟ್​ನಲ್ಲಿದೆ ಬೆಚ್ಚಿಬೀಳಿಸುವ ಮಾಹಿತಿ

masthmagaa.com:

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಗರ್ಲ್​ ಫ್ರೆಂಡ್ ಆಗಿದ್ದ ರಿಹಾ ಚಕ್ರಬರ್ತಿ ವಿರುದ್ಧ ಸುಶಾಂತ್ ಅವರ ತಂದೆ ಕೆ.ಕೆ. ಸಿಂಗ್ ದೂರು ದಾಖಲಿಸಿದ್ದಾರೆ. ಇದರಲ್ಲಿ ರಿಹಾ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಲಾಗಿದ್ದು ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳಲು ಆಕೆಯೇ ಕಾರಣ ಅಂತ ಆರೋಪಿಸಲಾಗಿದೆ. ಬಿಹಾರದ ಪಾಟ್ನಾದ ರಾಜೀವ್​ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್​ಐಆರ್ ದಾಖಲಾಗಿದೆ.

ಎಫ್​ಐಆರ್​ನಲ್ಲಿ ಏನಿದೆ..?

ಸುಶಾಂತ್ ಸಿಂಗ್ ರಜಪೂತ್​ ಅವರ ಡೇ ಟು ಡೇ ಲೈಫ್​ನಲ್ಲಿ ರಿಹಾ ಚಕ್ರಬರ್ತಿ ಮತ್ತು ಆಕೆಯ ಕುಟುಂಬಸ್ಥರು ತುಂಬಾ ಇಂಟರ್​ಫಿಯರ್ ಮಾಡುತ್ತಿದ್ದರು. ಆತನನ್ನು ಭೇಟಿಯಾಗಲು ನಮಗೆ ಬಿಡುತ್ತಿರಲಿಲ್ಲ. ಆತ​ ವಾಸವಿದ್ದ ಮನೆಯಲ್ಲಿ ದೆವ್ವ, ಭೂತ ಇದೆ ಅಂತ ಆ ಮನೆಯನ್ನೇ ಖಾಲಿ ಮಾಡಿಸಿದ್ರು. ಬೇಕು ಅಂತಾನೆ ಸುಶಾಂತ್​ಗೆ ಹೆಚ್ಚು ಹೆಚ್ಚು ಔಷಧ, ಮಾತ್ರೆಗಳನ್ನ ನೀಡುತ್ತಿದ್ದಳು. ಆತನ ಜೊತೆಗಿದ್ದ ಸಿಬ್ಬಂದಿಯನ್ನ ಬದಲಿಸಿ ತನಗಿಷ್ಟ ಬಂದವರನ್ನ ನೇಮಿಸಿದ್ದಳು. ಅಷ್ಟೇ ಅಲ್ಲ ಆತನ ಕ್ರೆಡಿಟ್ ಕಾರ್ಡ್ ಇಟ್ಟುಕೊಂಡಿದ್ದ ಆಕೆ ಬ್ಯಾಂಕ್ ಅಕೌಂಟ್​ ಮೇಲೆ ಸಂಪೂರ್ಣ ಕಂಟ್ರೋಲ್ ಹೊಂದಿದ್ದಳು.

ಸಿನಿಮಾ ಇಂಡಸ್ಟ್ರಿ ಬಿಟ್ಟು ಕರ್ನಾಟಕದ ಕೊಡಗು ಜಿಲ್ಲೆಗೆ ಬಂದು ಕೃಷಿ ಮಾಡಬೇಕು ಅಂದುಕೊಂಡಿದ್ದ ಸುಶಾಂತ್​ಗೆ ರಿಹಾ ಅಡ್ಡಿಪಡಿಸಿದ್ದಳು. ನಿನ್ನ ಮೆಡಿಕಲ್ ರಿಪೋರ್ಟ್​ಗಳನ್ನ ಮಾಧ್ಯಮಗಳಿಗೆ ತೋರಿಸ್ತೀನಿ ಅಂತ ಬೆದರಿಕೆ ಹಾಕಿದ್ದಳು. ಸುಶಾಂತ್​ನಿಂದ ಏನೂ ಉಪಯೋಗ ಇಲ್ಲ ಅಂತ ಗೊತ್ತಾದಾಗ ಆಕೆ ಆತನ ಮನೆಯನ್ನ ಬಿಟ್ಟು ಹಣ, ಒಡವೆ, ಲ್ಯಾಪ್​ಟಾಪ್, ಕ್ರೆಡಿಟ್ ಕಾರ್ಡ್​​ಗಳು, ಪಾಸ್​ವರ್ಡ್​, ಪ್ರಮುಖ ದಾಖಲೆ, ಹೀಗೆ ಎಲ್ಲವನ್ನು ತೆಗೆದುಕೊಂಡು ಹೋದಳು. ಬಳಿಕ ಆತನ ನಂಬರ್ ಅನ್ನು ಬ್ಲಾಕ್ ಮಾಡಿದ್ದಳು.

ಆಗ ತನ್ನ ಸಹೋದರಿಗೆ ಫೋನ್ ಮಾಡಿದ್ದ ಸುಶಾಂತ್ ಸಿಂಗ್ ರಜಪೂತ್ ಈ ಬಗ್ಗೆ ಹೇಳಿಕೊಂಡಿದ್ದ. ಅಲ್ಲದೆ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಆತ್ಮಹತ್ಯೆಯಿಂದ ಆತ ಮತ್ತಷ್ಟು ಹೆದರಿಹೋಗಿದ್ದ. ಇಂತಹ ಸಮಯದಲ್ಲಿ ಕೆಲವು ದಿನಗಳ ಕಾಲ ಸುಶಾಂತ್ ಜೊತೆಗಿದ್ದ ಸಹೋದರಿ ಆತನಿಗೆ ಕೌನ್ಸಿಲಿಂಗ್ ಮಾಡಿದ್ದಳು. ನನ್ನ ಮಗನಿಗೆ 2019ರವರೆಗೆ ಯಾವುದೇ ಮಾನಸಿಕ ಸಮಸ್ಯೆ ಇರಲಿಲ್ಲ. ಆದ್ರೆ ರಿಹಾ ಚಕ್ರಬರ್ತಿ ಭೇಟಿಯಾದ ನಂತರವೇ ಇದೆಲ್ಲಾ ಹೇಗೆ ಶುರುವಾಯ್ತು..? ಹಾಗೇನಾದ್ರೂ ಮಾನಸಿಕ ಸಮಸ್ಯೆ ಇದ್ರೆ ನಮಗೆ ಯಾಕೆ ತಿಳಿಸಲಿಲ್ಲ..? ಅವನ ಚಿಕಿತ್ಸೆಗೆ ನಮ್ಮಿಂದ ಯಾಕೆ ನೋ-ಅಬ್ಜೆಕ್ಷನ್​ ಲೆಟರ್ ತೆಗೆದುಕೊಂಡಿಲ್ಲ..?

ನನ್ನ ಮಗನ ಬ್ಯಾಂಕ್ ಖಾತೆಯಲ್ಲಿ 17 ಕೋಟಿ ರೂಪಾಯಿ ಇತ್ತು. ಅದ್ರಲ್ಲಿ 15 ಕೋಟಿ ರೂಪಾಯಿ ಬೇರೆಯವರ ಅಕೌಂಟ್​​ಗೆ ಟ್ರಾನ್ಸ್​ಫರ್ ಆಗಿದೆ. ಆತನಿಗೆ​ ಆರೋಗ್ಯ ಸಮಸ್ಯೆ ಇತ್ತು ಅಂದಮೇಲೆ ಅವನಿಂದ ರಿಹಾ ಯಾಕೆ ದೂರವಾದಳು..? ಆತನ ನಂಬರ್ ಅನ್ನು ಯಾಕೆ ಬ್ಲಾಕ್ ಮಾಡಿದಳು..? ಸುಶಾಂತ್ ಆತ್ಮಹತ್ಯೆ ಮಾಡಿಕೊಳ್ಳಲು ಇದೇ ಕಾರಣ ಅಂತ ಕೆ.ಕೆ. ಸಿಂಗ್ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply