masthmagaa.com: ಮಹತ್ವದ ಬೆಳವಣಿಗೆಯಲ್ಲಿ ಯುರೋಪಿನ ಪ್ರಮುಖ ರಾಷ್ಟ್ರವೊಂದರಲ್ಲಿ ಜನ ಬೀದಿಗಳಿದು ಹೋರಾಟ ಶುರು ಮಾಡಿದ್ದಾರೆ. ಜೆಕ್‌ ರಿಪಬ್ಲಿಕ್‌ ಅನ್ನೋ ದೇಶದಲ್ಲಿ ಅಲ್ಲಿನ ಬಲಪಂಥೀಯ ಸರ್ಕಾರದ ವಿರುದ್ಧ ರಷ್ಯಾ ಪರವಿರುವ ಹಾಗೂ ಅಲ್ಲಿನ ವಿರೋಧ ಪಕ್ಷದ ಸಾವಿರಾರು ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ರಷ್ಯಾ ಪರವಾಗಿರುವ ಹಾಗೂ ಪಾಶ್ಚಿಮಾತ್ಯ ಮಿತ್ರ ರಾಷ್ಟ್ರಗಳ ವಿರೋಧಿ ಅಂತ ಕರೆಸಿಕೊಳ್ಳುವ PRO ಸಂಘಟನೆ ಈ ಪ್ರತಿಭಟನೆಗೆ ಕರೆ ನೀಡಿದೆ. ಜೆಕ್‌ ಪ್ರಧಾನಿ ಫಿಯಾಲಾ ಅವರ ಸರ್ಕಾರದಿಂದ ಮುಕ್ತಿ ಪಡೆಯಲು ನಾವು ಈಗ ಮತ್ತೊಂದು ಹೆಜ್ಜೆ ಇಟ್ಟಿದ್ದೇವೆ ಅಂತ PRO ನಾಯಕ ಜಿಂಡ್ರಿಚ್ ರೈಚ್ಲ್ ಹೇಳಿದ್ದಾರೆ. ಇದೇ ವೇಳೆ ಈಗಿನ ಸರ್ಕಾರ ವಿದೇಶಿ ಶಕ್ತಿಗಳ ಏಜೆಂಟ್‌ಗಳಂತೆ ಕೆಲಸ ಮಾಡ್ತಿದೆ. ಅವರ ಆದೇಶಗಳನ್ನ ಜಾರಿ ಮಾಡುವ ಬೊಂಬೆಗಳ ರೀತಿ ವರ್ತಿಸ್ತಿದೆ. ಹೀಗಾಗಿ ನಾವು ಇನ್ಮುಂದೆ ಈ ರೀತಿಯ ಕೈಗೊಂಬೆ ಸರ್ಕಾರವನ್ನ ಬಯಸುವುದಿಲ್ಲ ಅಂತ ರೈಚ್ಲ್ ಕಿಡಿಕಾರಿದ್ದಾರೆ. ಅಷ್ಟೆ ಅಲ್ದೆ ನ್ಯಾಟೋ ಸೇರಲು ಇಚ್ಛಿಸಿರುವ ಯುಕ್ರೇನ್‌ನ ಯಾವುದೇ ಪ್ರಯತ್ನವನ್ನ ಜೆಕ್‌ ಗಣರಾಜ್ಯ ತಿರಸ್ಕರಿಸಬೇಕು ಅಂತ ರೈಚ್ಲ್ ಕರೆ ನೀಡಿದ್ದಾರೆ. ಅಂದ್ಹಾಗೆRead More →

masthmagaa.com: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್​.ಚಲುವರಾಯಸ್ವಾಮಿ ಅವರ ಪರ ಹಾಗೂ ವಿರುದ್ಧವಾಗಿ ಮಂಡ್ಯದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಮಂಡ್ಯ ​ಬಿಜೆಪಿ ಕಾರ್ಯಕರ್ತರು ಅಲ್ಲಿನ ಸಂಜಯ್​​ ವೃತ್ತದಲ್ಲಿ ‘ಪೇಸಿಎಸ್’ ಅನ್ನೊ ಪೋಸ್ಟರ್ ಅಂಟಿಸಿ ಅಭಿಯಾನ ಮಾಡಿದ್ದಾರೆ. ಜೊತೆಗೆ ‘ಸ್ಕ್ಯಾನ್ ಮಾಡಿ ನೋಡಿ, ಚೆಲುವ ಚನ್ನಿಗರಾಯನ ಭ್ರಷ್ಟಾಚಾರ ಬರಬಹುದು’ ಅನ್ನುವ ಟ್ಯಾಗ್‌ಲೈನ್‌ ಹಾಕಿ ವ್ಯಂಗ್ಯ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾಕಾರರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ಮಂಡ್ಯದ ನಾಗಮಂಗಲದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಕಾಂಗ್ರೆಸ್‌ ಕಚೇರಿಯಿಂದ ಮಿನಿ ವಿಧಾನಸೌಧವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ. ಈ ವೇಳೆ ಸಚಿವ ಎನ್​.ಚಲುವರಾಯಸ್ವಾಮಿ ಏಳಿಗೆ ಸಹಿಸದೆ ಷಡ್ಯಂತ್ರ ಮಾಡ್ತಿದ್ದಾರೆ ಅಂತ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹಾಗೂ ಮಾಜಿ ಶಾಸಕ ಸುರೇಶ್‌ಗೌಡ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಅಂದ್ಹಾಗೆ ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ ಪೇಸಿಎಂ ಅಭಿಯಾನ ಮಾಡಿತ್ತು. -masthmagaa.com Share on: WhatsAppContact Us for AdvertisementRead More →

masthmagaa.com: ಇತ್ತೀಚೆಗೆ ಸ್ವೀಡನ್‌ನ ಮಸೀದಿ ಒಂದ್ರ ಮುಂದೆ ಮುಸ್ಲಿಂರ ಪವಿತ್ರ ಗ್ರಂಥ ಕುರಾನ್‌ ಸುಟ್ಟು ಪ್ರತಿಭಟನೆ ಮಾಡಿದ್ದು, ಜಗತ್ತಿನಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಈ ಕೃತ್ಯವನ್ನ ವಿರೋಧಿಸಿ ಇರಾಕ್‌ನ ಬಗ್ದಾದ್‌ನಲ್ಲಿರುವ ಸ್ವೀಡನ್‌ ರಾಯಭಾರಿ ಕಚೇರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಗಿದೆ. ಆದ್ರೆ ಬೆಂಕಿ ಹಾಕಿರೋ ಸಮಯದಲ್ಲಿ ಸ್ವಿಡನ್‌ ಅಧಿಕಾರಿಗಳು ಕಚೇರಿಯಲ್ಲಿ ಇದ್ರಾ ಇಲ್ವಾ ಅನ್ನೋದ್ರ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಯಾವುದೇ ಸಿಬ್ಬಂದಿಗೆ ಹಾನಿಯಾಗಿಲ್ಲ ಎನ್ನಲಾಗಿದೆ. ಪ್ರತಿಭಟನಾ ನಿರತ ನೂರಾರು ಜನರು ಸ್ವೀಡನ್‌ ರಾಯಭಾರಿ ಕಚೇರಿಗೆ ಬೆಂಕಿ ಹಾಕ್ತಿರೋ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡ್ತಿವೆ. -masthmagaa.com Share on: WhatsAppContact Us for AdvertisementRead More →

masthmagaa.com: ಇತ್ತೀಚೆಗೆ ಸ್ವಿಡನ್‌ ವ್ಯಕ್ತಿಯೊಬ್ಬರು ಅಲ್ಲಿನ ಮಸೀದಿ ಮುಂದೆ ಮುಸ್ಲಿಂರ ಪವಿತ್ರ ಗ್ರಂಥ ಕುರಾನ್‌ ಸುಟ್ಟು ಪ್ರತಿಭಟನೆ ಮಾಡಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಅದೇ ರೀತಿ ಸ್ವಿಡನ್‌ನಲ್ಲಿರುವ ಇಸ್ರೇಲ್‌ ರಾಯಭಾರಿ ಕಚೇರಿ ಮುಂದೆ ಕ್ರಿಶ್ಚಿಯನ್ನರ ಪವಿತ್ರ ಗ್ರಂಥ ಬೈಬಲ್‌ನ್ನ ಸುಟ್ಟು ಪ್ರತಿಭಟನೆ ನಡೆಸಲು ಅಲ್ಲಿನ ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಸ್ರೇಲ್‌ ಅಧ್ಯಕ್ಷ ಇಸಾಕ್‌ ಹೆರ್ಜಾಗ್‌ ಅವ್ರು ಪವಿತ್ರ ಗ್ರಂಥಗಳನ್ನ ಸುಡಲು ಅನುಮತಿ ನೀಡಿರುವ ಸ್ವಿಡನ್‌ ಅಧಿಕಾರಿಗಳ ಕ್ರಮವನ್ನ ಖಂಡಿಸಿದ್ದಾರೆ. ಅಲ್ದೆ ಕುರಾನ್‌ ಸುಟ್ಟಿದ್ದ ಸಮಯದಲ್ಲಿ ನಾನು ಇಸ್ರೇಲ್‌ ಅಧ್ಯಕ್ಷನಾಗಿ ಅದನ್ನ ಖಂಡಿಸಿದ್ದೆ. ಈಗ ಅದೇ ರೀತಿಯ ದುರಾದೃಷ್ಟಕರ ಪರಿಸ್ಥಿತಿ ಯಹೂದಿಯರ ಬೈಬಲ್‌ಗೂ ಬಂದಿರೋದನ್ನ ಕೇಳಿ ಆಘಾತಗೊಂಡಿದ್ದೇನೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೊಂದ್‌ ಕಡೆ ಜನಾಂಗೀಯ ಪ್ರಚೋದನಕಾರಿ ಹಾಗೂ ಯಹೂದಿಯರ ವಿರೋಧಿ ಕೃತ್ಯಗಳಿಗೆ ಈ ಸಮಾಜದಲ್ಲಿ ಸ್ಥಾನವಿಲ್ಲ ಅಂತ ಸ್ವಿಡನ್‌ ಅಧಿಕಾರಗಳ ನಿರ್ಧಾರವನ್ನ European Jewish Congress (EJC)ನ ಅಧ್ಯಕ್ಷ ಏರಿಯಲ್ ಮುಜಿಕಾಂಟ್ ಅವ್ರು ಖಂಡಿಸಿದ್ದಾರೆ. -masthmagaa.com Share on: WhatsAppContact UsRead More →

masthmagaa.com: ಇತ್ತೀಚೆಗೆ ಮಂಡನೆಯಾದ ರಾಜ್ಯ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮದ್ಯದ ಬೆಲೆ ಹೆಚ್ಚಳ ಮಾಡಿ ಎಣ್ಣೆ ಪ್ರಿಯರಿಗೆ ಶಾಕ್ ಕೊಟ್ಟಿದ್ದಾರೆ. ಈ ಹಿನ್ನೆಲೆ ರೊಚ್ಚಿಗೆದ್ದ ಮದ್ಯ ಪ್ರಿಯರು ವಿನೂತನ ರೀತಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಉಡುಪಿಯ ಚಿತ್ತರಂಜನ್ ಸರ್ಕಲ್​ನಲ್ಲಿ ಕುಡುಕರಿಗೆ ಹಾರ ಹಾಕಿ ಸನ್ಮಾನ ಮಾಡಲಾಗಿದೆ. ಸರ್ಕಾರದ ಉಚಿತ ಯೋಜನೆಗೆ ಹಣ ನಮ್ಮಿಂದಲೇ ಬರುತ್ತೆ. ಮದ್ಯದ ಬೆಲೆ ಇಳಿಕೆ ಮಾಡಿ. ಇಲ್ಲ ಅಂದ್ರೆ ಬೆಳಿಗ್ಗೆ ನೈಂಟಿ, ಸಂಜೆ ನೈಂಟಿ ಉಚಿತವಾಗಿ ನೀಡಿ. ಅದು ಆಗದಿದ್ದಲ್ಲಿ ಸಾರಾಯಿ ಸಂಪೂರ್ಣ ಬಂದ್ ಮಾಡಿ. ಆ ಹಣವನ್ನ ನಾವು ನಮ್ಮ ಹೆಂಡತಿ, ಮಕ್ಕಳಿಗೆ ನೀಡುತ್ತೇವೆ. ನಮ್ಮ ಹೆಂಡತಿ, ಮಕ್ಕಳನ್ನ ನಾವೇ ಹಣ ಕೊಟ್ಟು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುತ್ತೇವೆ ಅಂತ ಮದ್ಯ ಪ್ರಿಯರು ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇತ್ತ ಅಬಕಾರಿ ಸುಂಕ ಏರಿ ಮಾಡಿದ ಹಿನ್ನಲೆ ಕರ್ನಾಟಕ ಪ್ರೀಮಿಯಂ ಮದ್ಯದ ಬ್ರ್ಯಾಂಡ್‌ಗಳಿಗೆ ದೇಶದ ಅತ್ಯಂತ ದುಬಾರಿ ರಾಜ್ಯವಾಗಿ ಹೊರಹೊಮ್ಮಿದೆ. ಇನ್ನು ತಮಿಳುನಾಡಿನಲ್ಲಿ 650ml ಬಿಯರ್‌ಗೆ 210 ರೂ. ದೆಹಲಿಯಲ್ಲಿ 190ರೂ. ಕರ್ನಾಟಕದಲ್ಲಿRead More →

masthmagaa.com: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನ ಗಣಂಗೂರು ಟೋಲ್‌ನಲ್ಲಿ ಇಂದು ಬೆಳಿಗ್ಗೆ 8 ಗಂಟೆಯಿಂದ ಶುಲ್ಕ ಸಂಗ್ರಹ ಆರಂಭವಾಗಿದೆ. ಶುಕ್ರವಾರ ಸಂಜೆಯಿಂದಲೇ ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿ ಸಕಲ ಸಿದ್ಧತೆ ಮಾಡಿಕೊಂಡಿದ್ರು. 4 ದಿನಗಳ ಹಿಂದೆಯೇ ಟೋಲ್‌ ದರ ಪಟ್ಟಿಯನ್ನ ಟೋಲ್‌ ಕೇಂದ್ರ ಬಳಿ ಪ್ರಕಟಿಸಲಾಗಿತ್ತು. ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಟೋಲ್‌ ಸಂಗ್ರಹ ಆರಂಭವಾಗಲಿದೆ ಅಂತ ಬೋರ್ಡ್‌ ಹಾಕಲಾಗಿತ್ತು. ಅದರಂತೆ ಇಂದು ಬೆಳಿಗ್ಗೆಯಿಂದ ಟೋಲ್‌ ಕಲೆಕ್ಶನ್‌ ಸ್ಟಾರ್ಟ್‌ ಆಗಿದೆ. ಇತ್ತ ಸರ್ವೀಸ್‌ ರಸ್ತೆ ಪೂರ್ಣಗೊಳಿಸದೇ, ಮೂಲ ಸೌಲಭ್ಯ ಒದಗಿಸದೇ ಶುಲ್ಕ ಸಂಗ್ರಹ ಮಾಡಬಾರ್ದು ಅಂತ ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ಟೋಲ್‌ ಕೇಂದ್ರ ಬಳಿ ಪ್ರತಿಭಟನೆ ಆರಂಭಿಸಿದ್ದಾರೆ. ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆ ಟೋಲ್‌ ಸಂಗ್ರಹ ಮಾಡಲಾಗಿದೆ. 50ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನ ಭದ್ರತೆಗೆ ನಿಯೋಜಿಸಲಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ನೂತನ ಬೆಂಗಳೂರು ಮೈಸೂರು ‌ದಶಪಥ ರಸ್ತೆಯಲ್ಲಿ ಟೋಲ್ ದರ ಹೆಚ್ಚಳವನ್ನ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಕನ್ನಡಪರ‌ ಸಂಘಟನೆಯ ಕಾರ್ಯಕರ್ತರು ಅನ್ಕೊಂಡು ಈ ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರು ‌ದಕ್ಷಿಣ ತಾಲೂಕಿನ ಕಣಮಿಣಿಕೆ ‌ಟೋಲ್ ಪ್ಲಾಜಾ‌ ಬಳಿ ಹೆದ್ದಾರಿ ತಡೆದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾರು, ವ್ಯಾನ್‌, ಜೀಪ್‌ ಏಕಮುಖ ಸಂಚಾರಕ್ಕೆ 135 ರೂಪಾಯಿಂದ 165 ರೂಗೆ ಏರಿಕೆಯಾಗಿದೆ. ಲಘು ವಾಹನಗಳು, ಮಿನಿ ಬಸ್‌ಗಳ ಏಕಮುಖ ಸಂಚಾರಕ್ಕೆ 220 ರೂ ರಿಂದ 270 ರೂಗೆ ಏರಿಕೆಯಾಗಿದ್ದು ಟ್ರಕ್‌, ಬಸ್, 2 ಆ್ಯಕ್ಸೆಲ್‌ ವಾಹನ ಏಕಮುಖ ಸಂಚಾರಕ್ಕೆ 460 ರಿಂದ 565 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಅಕ್ಕಿ ಖರೀದಿ ಕುರಿತು ಕರ್ನಾಟಕ ಹಾಗೂ ಕೇಂದ್ರ ಸರ್ಕಾರದ ನಡುವಿನ ಜಟಾಪಟಿ ಜೋರಾಗಿದೆ. ಅಕ್ಕಿ ಕೊಡೋಕೆ ಒಪ್ಪಿದ್ದ ಭಾರತೀಯ ಆಹಾರ ನಿಗಮ (FCI) ಕಮಿಟ್ಮೆಂಟ್ ಪತ್ರವನ್ನ ಸಿಎಂ ಸಿದ್ದರಾಮಯ್ಯ ಬಹಿರಂಗಪಡಿಸಿದ್ದಾರೆ. ಅಕ್ಕಿ ಕೊಡುವ ಭರವಸೆ ನೀಡಿ ಇದೀಗ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ ಅಂತ ಕಾಂಗ್ರೆಸ್ ಆರೋಪ ಮಾಡಿತ್ತು. ಈ ಆರೋಪದ ಬೆನ್ನಲ್ಲೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ FCI ಕರ್ನಾಟಕಕ್ಕೆ ಅಕ್ಕಿ ಕೊಡ್ತೀವಿ ಅಂತ ಹೇಳಿರೊ ಕಮಿಟ್‌ಮೆಂಟ್ ಪತ್ರ ತೋರಿಸಲಿ ಅಂತ ಸವಾಲು ಹಾಕಿದ್ರು. ಈ ಹಿನ್ನೆಲೆ ಇಂದು FCI ಕಮಿಟ್ಮೆಂಟ್ ಪತ್ರವನ್ನ ಟ್ವೀಟ್‌ ಮಾಡಿರೋ ಸಿದ್ದರಾಮಯ್ಯ, ಸಿ.ಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇಂತಹ ಬೇಜವಾಬ್ದಾರಿ ಹೇಳಿಕೆ, ಸುಳ್ಳು ಮತ್ತು ಅಪಪ್ರಚಾರದ ಗೀಳಿಗಾಗಿಯೇ ರಾಜ್ಯದ ಮತದಾರರು ಬಿಜೆಪಿಯ ಇಂತಹ ನಾಯಕರನ್ನ ಸೋಲಿಸಿ ಮನೆಗೆ ಕಳಿಸಿರುವುದು ಅಂತ ಕಿಡಿಕಾರಿದ್ದಾರೆ. ಇನ್ನೊಂದ್‌ ಕಡೆ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರ ನಿರಾಕರಿಸಿದ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ. ಜೂನ್Read More →

masthmagaa.com: ಕಲಬುರಗಿಯಲ್ಲಿರುವ ಸಿಮೆಂಟ್‌ ಕಂಪನಿಯೊಂದ್ರ ವಿರುದ್ಧ ಕಳೆದ 183 ದಿನಗಳಿಂದ ವಿವಿಧ ಬೇಡಿಕೆ ಆಗ್ರಹಿಸಿ ಧರಣಿ ನಡೆಸುತ್ತಿದ್ದ ಓರ್ವ ರೈತ ಮೃತಪಟ್ಟಿದ್ದಾರೆ. ದೇವೀಂದ್ರಪ್ಪ ಅನ್ನೊ ರೈತ ಶ್ರೀ ಸಿಮೆಂಟ್‌ ಕಂಪನಿಗೆ ತನ್ನ 2 ಎಕರೆ 20 ಗುಂಟೆ ಜಮೀನು ನೀಡಿದ್ದು, ಕೆಲಸವಿಲ್ಲದೆ ಕೂಲಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಇನ್ನು ಕಂಪನಿಯು ಜಾಬ್‌ ಕಾರ್ಡ್‌ ಕೊಟ್ಟಿದ್ದು, ಮೃತ ರೈತನ ಮಗನಿಗೆ ಕಲಸ ಕೊಡದೇ ಕಂಪನಿ ಮೋಸ ಮಾಡಿದೆ ಅಂತ ಆರೋಪಿಸಲಾಗಿದೆ. ಅಲ್ದೆ ಉದ್ಯೋಗ ಕೊಡುವುದಾಗಿ ಭರವಸೆ ನೀಡಿ ಹಲವಾರು ರೈತರ ಜಮೀನು ಖರೀದಿಸಿದ್ದ ಕಂಪನಿ, ನಂತ್ರ ಮಾತಿನಂತೆ ರೈತರಿಗೆ ಉದ್ಯೋಗ ನೀಡಿಲ್ಲ. ಹೀಗಾಗಿ ಕಳೆದ 183 ದಿನಗಳಿಂದ ಸೂಕ್ತ ಪರಿಹಾರ ಅಥ್ವಾ ಉದ್ಯೋಗ ನೀಡುವಂತೆ ನಿರಂತರವಾಗಿ ರೈತರು ಧರಣಿ ನಡೆಸುತ್ತಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಫ್ರಾನ್ಸ್‌ನಲ್ಲಿ ನೂತನ ಪಿಂಚಣಿ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ತಾರಕಕ್ಕೇರಿದೆ. ಮತ್ತೊಮ್ಮೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಗಲಾಟೆ ಉಂಟಾಗಿದೆ. ಲಕ್ಷಾಂತರ ಜನ ಜನರು ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರಾನ್‌ ವಿರುದ್ಧ ಘೋಷಣೆ ಕೂಗಿ ತಮ್ಮ ಅಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಗಲಾಟೆ ನಡೆದಿದ್ದು, 27 ಜನ್ರನ್ನ ಅರೆಸ್ಟ್‌ ಮಾಡಿರೋದಾಗಿ ಪೊಲೀಸರು ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →