masthmagaa.com: ಮಿಷನರಿಗಳು ಮಾಡಿರೋದಕ್ಕಿಂತ ಹೆಚ್ಚಿನ ಸೇವೆಯನ್ನ ಹಿಂದೂ ಅಧ್ಯಾತ್ಮಿಕ ಗುರುಗಳು ಮಾಡಿದ್ದಾರೆ ಅಂತ RSSನ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. RSS ವತಿಯಿಂದ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಮಾತಾಡಿದ ಭಾಗವತ್‌ , RSS ಆರೋಗ್ಯಕರ ಸಮಾಜವನ್ನ ಕಟ್ಟಲು ನೆರವಾಗುತ್ತೆ. ಸಮಾಜದ ಯಾವುದೇ ವರ್ಗ ಅವಕಾಶದಿಂದ ವಂಚಿತವಾಗ್ತಿದ್ರೆ, ಅದನ್ನ ದೇಶದ ಒಳಿತಿನ ದೃಷ್ಠಿಯಿಂದ ಮೇಲೆತ್ತಬೇಕು. ಸಾಮಾನ್ಯವಾಗಿ ಬುದ್ದಿ ಜೀವಿಗಳು, ಮಿಷನರಿಗಳನ್ನ ಅವುಗಳ ಸೇವೆಗಾಗಿ ಗುರುತಿಸುತ್ತಾರೆ. ಆದ್ರೆ, ದಕ್ಷಿಣದ 4 ರಾಜ್ಯಗಳಲ್ಲಿದ್ದ ಹಿಂದೂ ಅಧ್ಯಾತ್ಮಿಕ ಗುರುಗಳು, ಇತರೆ ಮಿಷನರಿಗಳು ನೀಡಿರುವುದಕ್ಕಿಂತ ಹೆಚ್ಚು ಸೇವೆ ಮಾಡಿದ್ದಾರೆ ಅಂತ ಭಾಗವತ್‌ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳೇ ಕಳೆದಿದ್ದರೂ, ಪಾಕಿಸ್ತಾನದಲ್ಲಿನ ಜನ ಅತೃಪ್ತಿ ಹೊಂದಿದ್ದಾರೆ. ದೇಶ ವಿಭಜನೆಯಾಗಿದ್ದು ತಪ್ಪು ಅನ್ನೋ ಅಭಿಪ್ರಾಯ ಅವ್ರಲ್ಲಿಯೂ ಇದೆ ಅಂತ RSS ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಕ್ರಾಂತಿಕಾರಿ ಹೇಮು ಕಲಾನಿ ಅವ್ರ ಜನ್ಮದಿನಾಚರಣೆಯ ಕಾರ್ಯಕ್ರಮದಲ್ಲಿ ಮೋಹನ್ ಭಾಗ್ವತ್ ಈ ರೀತಿ ಹೇಳಿದ್ದಾರೆ. ದೇಶ ಇಬ್ಭಾಗವಾಗೋದಕ್ಕೂ ಮೊದಲು ಇದು ಅಂದ್ರೆ ಪಾಕ್ ಭಾರತವಾಗಿತ್ತು. ದೇಶದಿಂದ ಹೊರ ಹೋಗಿರೋರು ಈಗಲಾದರೂ ಶಾಂತಿಯಿಂದ ಸಂತೋಷದಿಂದ ಇದಾರಾ? ಇಲ್ಲ ಅವರಲ್ಲಿ ನೋವಿದೆ ಅಂತ ಭಾಗ್ವತ್ ಹೇಳಿದ್ದಾರೆ. ಭಾರತ ಪಾಕ್ ಮೇಲೆ ದಾಳಿ ಮಾಡ್ಬೇಕು ಅಂತ ನಾನು ಹೇಳಲ್ಲ. ನಾವು ಮತ್ತೊಬ್ಬರ ಮೇಲೆ ದಾಳಿ ನಡೆಸುವ ಸಂಸ್ಕೃತಿಗೆ ಸೇರಿದವರಲ್ಲ. ಆದ್ರೆ ನಾವು ನಮ್ಮ ಆತ್ಮರಕ್ಷಣೆಗಾಗಿ ತಕ್ಕ ಪ್ರತ್ಯುತ್ತರ ನೀಡ್ತೀವಿ ಅಷ್ಟೆ ಅಂತ ಸರ್ಜಿಕಲ್ ಸ್ಟ್ರೈಕ್ ಉಲ್ಲೇಖಿಸಿ ಮೋಹನ್ ಭಾಗ್ವತ್ ಹೇಳಿದ್ದಾರೆ. ಅಂದ್ಹಾಗೆ ಈ ಕಾರ್ಯಕ್ರಮದಲ್ಲಿ ದೇಶದ ವಿವಿಧ ಪ್ರದೇಶಗಳಿಂದ ಸಿಂಧಿ ಜನಾಂಗದವ್ರು ಭಾಗಿಯಾಗಿದ್ದರು ಎನ್ನಲಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಹಿಂದೂ ಸಮಾಜದ ಜಾತಿ ವ್ಯವಸ್ಥೆಗೆ ಪಂಡಿತರೇ ಕಾರಣ ಅಂತ ಹೇಳಿದ್ದ RSS ಮುಖ್ಯಸ್ಥ ಮೋಹನ್‌ ಭಾಗವತ್‌ ಅವರ ವಿರುದ್ದ ಕೇಸ್‌ ದಾಖಲಾಗಿದೆ. ಮೋಹನ್‌ ಭಾಗವತ್‌ ಬ್ರಾಹ್ಮಣರಿಗೆ ಅವಮಾನ ಮಾಡಿದ್ದಾರೆ ಅಂತೇಳಿ ಬಿಹಾರದ ಸುಧೀರ್‌ ಓಜಾ ಅನ್ನೋ ವಕೀಲರು ದಾವೆ ಹೂಡಿದ್ದಾರೆ. ಈ ಅರ್ಜಿ ವಿಚಾರಣೆ ಫೆಬ್ರವರಿ 20ಕ್ಕೆ ನಡೆಯಲಿದೆ. ಇತ್ತ ಭಾಗವತ್‌ ಅವರ ಹೇಳಿಕೆಗೆ ಪುರಿ ನಿಶ್ಚಲಾನಂದ ಸರಸ್ವತಿ ಸ್ವಾಮಿಗಳು ಆಕ್ರೋಶ ವ್ಯಕ್ತಪಡಿಸಿದ್ದು ʻವರ್ಣ ವ್ಯವಸ್ಥೆ ಬ್ರಾಹ್ಮಣರಿಗೆ ಸಿಕ್ಕಿರೋ ಗಿಫ್ಟು. ಆರ್‌ಎಸ್‌ಎಸ್‌ಗೆ ತನ್ನದೇ ಆದ ಪುಸ್ತಕವೂ ಇಲ್ಲ, ಪುಸ್ತಕದ ಜ್ಞಾನವೂ ಇಲ್ಲ. ಹೌದು, ವರ್ಣ ವ್ಯವಸ್ಥೆ ಪಂಡಿತರು ಸೃಷ್ಟಿಸಿರೋದೆ ಹೊರತು ಮೂರ್ಖರು ಮಾಡಿದ್ದಲ್ಲ. ಅಮೆರಿಕ, ಫ್ರಾನ್ಸ್‌ನಂತಹ ದೇಶಗಳಲ್ಲೂ ಸಹ ಈ ಪರೋಕ್ಷವಾಗಾದ್ರೂ ವರ್ಣ ವ್ಯವಸ್ಥೆಯನ್ನ ಸೃಷ್ಟಿಸುವ ಅಗತ್ಯವಿದೆ ಅಂತ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ರಾಜ್ಯದಲ್ಲಿ ಜಾತಿ ವಿಚಾರ ಚರ್ಚೆಯಾಗ್ತಿರೋ ಹೊತ್ತಲ್ಲೇ ಅತ್ತ RSSನ ಮುಖ್ಯಸ್ಥ ಮೋಹನ್‌ ಭಾಗವತ್‌ ದೇಶದಲ್ಲಿರುವ ಜಾತೀಯತೆ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜಾತಿಗಳು ಸೃಷ್ಟಿಯಾಗಿರುವುದು ದೇವರಿಂದಲ್ಲ, ಪುರೋಹಿತರಿಂದ ಅಂತ ಮೋಹನ್‌ ಭಾಗವತ್‌ ಹೇಳಿದ್ದಾರೆ. ಮುಂಬೈನ ರವೀಂದ್ರ ನಾಟ್ಯ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಒಂದ್ರಲ್ಲಿ ಮಾತಾಡಿದ ಭಾಗವತ್‌, ದೇವರು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇರ್ತಾನೆ. ಸೋ ಹೆಸರು, ರೂಪ, ಸಾಮರ್ಥ್ಯ ಮತ್ತು ಗೌರವ ಏನೇ ಇರಲಿ ದೇವರ ಮುಂದೆ ಎಲ್ಲರೂ ಸಮಾನರು. ದೇವರ ದೃಷ್ಟಿಯಲ್ಲಿ ಯಾರು ಕೀಳು ಅಲ್ಲ ಮೇಲು ಅಲ್ಲ. ಆದ್ರೆ ಶಾಸ್ತ್ರಗಳ ಆಧಾರದ ಮೇಲೆ ಪಂಡಿತರು ಜಾತಿಗಳನ್ನ ಸೃಷ್ಟಿ ಮಾಡ್ತಾರೆ, ಅದು ತಪ್ಪು. ಜಾತಿ ಶ್ರೇಷ್ಠತೆಯ ಭ್ರಮೆಯಿಂದ ನಾವು ದಾರಿ ತಪ್ಪುತ್ತಿದ್ದು, ಈ ಭ್ರಮೆಯಿಂದ ಹೊರಬರಬೇಕಿದೆ ಅಂತ ಮೋಹನ್‌ ಭಾಗವತ್‌ ಕರೆ ನೀಡಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಮೋದಿ ಆರೆಸ್ಸೆಸ್‌ನ ಸ್ವಯಂ ಸೇವಕ ಆಗಿದ್ರೂ ಕೂಡ ಅವರು ಸ್ವತಂತ್ರವಾಗಿ ಕೆಲಸ ಮಾಡ್ತಾರೆ ಅಂತ (ಸರಸಂಘಚಾಲಕ) ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ. ಜಬಲ್‌ಪುರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಂಘದ ಹೆಸರು ಬಂದಾಗಲೆಲ್ಲಾ ನೀವು ಮೋದಿಜಿಯವರ ಹೆಸರನ್ನು ತಗೋತಿರಿ. ಹೌದು, ಮೋದಿ ಜಿ ಸಂಘದ ಸ್ವಯಂಸೇವಕ ಮತ್ತು ಪ್ರಚಾರಕ. VHP ಕೂಡ ನಮ್ಮ ಸ್ವಯಂ ಸೇವಕರಿಂದ ನಡೆಯುತ್ತೆ. ಆದರೆ, ಅವರು ಸ್ವತಂತ್ರವಾಗಿ ಕೆಲಸ ಮಾಡುತ್ತಾರೆ. ನಾವು ಸಮಾಲೋಚನೆ ಮಾಡ್ಬೋದು, ಸಲಹೆ ಕೊಡಬೋದು. ಆದರೆ, ಅವರನ್ನ ನಿಯಂತ್ರಣ ಮಾಡೋಕೆ ಯಾವತ್ತಿಗೂ ಸಾಧ್ಯವಿಲ್ಲ ಅಂತ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಇತ್ತೀಚಿಗೆತಾನೇ ಜನಸಂಖ್ಯಾ ನಿಯಂತ್ರಣದ ಬಗ್ಗೆ ಮಾತನಾಡಿದ್ರು. ಎಲ್ಲರಿಗೂ ಒಂದೇ ಕಾನೂನು ಬರಬೇಕು, ಜನಸಂಖ್ಯಾ ನೀತಿಯಲ್ಲಿ ಧರ್ಮಾಧಾರಿತ ಅಸಮತೋಲನ ಇದೆ ಅಂತ ಹೇಳಿದ್ರು. ಇದರ ವಿರುದ್ದ ಒಂದೇ ಸಮಾನಾಗಿ ವಾಗ್ದಾಳಿ ಮಾಡ್ತಿರೋ ಸಂಸದ ಅಸಾದುದ್ದೀನ್‌ ಓವೈಸಿ ಮತ್ತೊಂದು ಇಂಟರಸ್ಟಿಂಗ್ ಹೇಳಿಕೆ ನೀಡಿದ್ದಾರೆ. ದೇಶದಲ್ಲಿ ಮುಸ್ಲಿಂರ ಸಂಖ್ಯೆ ಹೆಚ್ಚುತ್ತಿಲ್ಲ. ಅತಿಹೆಚ್ಚು ನಿರೋಧಗಳನ್ನ ಬಳಸುವುದು ಮುಸ್ಲಿಮರು ಅಂತ ತಿರುಗೇಟು ಕೊಟ್ಟಿದ್ದಾರೆ. ಹೈದ್ರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವನ್ನ ಉದ್ದೇಶಿಸಿ ಮಾತನಾಡಿದ ಓವೈಸಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿಲ್ಲ. ಈ ವಿಚಾರವಾಗಿ ಆತಂಕ ಬೇಡ. ಮುಸ್ಲಿಮರ ಸಂಖ್ಯೆ ಇಳಿಮುಖವಾಗ್ತಿದೆ. ಮುಸ್ಲಿಮರು ಅತಿಹೆಚ್ಚಾಗಿ ಕಾಂಡೋಮ್‌ ಬಳಸ್ತಿರೋದ್ರಿಂದ ಎರಡು ಮಕ್ಕಳ ನಡುವಿನ ಅಂತರ ಕೂಡ ಹೆಚ್ಚುತ್ತಿದೆ. ದೇಶದಲ್ಲಿ ಅತಿಹೆಚ್ಚು ಕಾಂಡೋಮ್‌ ಬಳಸ್ತಿರೋದು ಯಾರು? ಅದು ನಾವೇ. ಈ ಬಗ್ಗೆ ಮೋಹನ್‌ ಭಾಗವತ್‌ ಮಾತೇ ಆಡೋದಿಲ್ಲ ಅಂತ ಹೇಳಿದ್ದಾರೆ. ಇನ್ನು ಈ ಹೇಳಿಕೆ ಸಂಬಂಧಪಟ್ಟಂತೆ ಬಿಜೆಪಿ ಕೂಡ ಪ್ರತಿಕ್ರಿಯಿಸಿದೆ. ಓವೈಸಿ bayan purush ಅಥವಾ ಹೇಳಿಕೆ ಪುರುಷ ಅಂತ ಕಾಲೆಳಿದಿದೆ. -masthmagaa.com Share on: WhatsAppContactRead More →

masthmagaa.com: RSS ಮುಖ್ಯಸ್ಥ ಮೋಹನ್‌ ಭಾಗವತ್‌ ತಮ್ಮ ವಿಜಯದಶಮಿ ಭಾಷಣದಲ್ಲಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಮಾತಾಡಿದ ಬೆನ್ನಲ್ಲೇ ಈಗ ಅದ್ರ ಬಗ್ಗೆ ಚರ್ಚೆ ಎದ್ದಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತಾಡಿ, ಕೋಳಿ ಕೇಳಿ ಮಸಾಲೆ ಅರೆಯುವುದಿಲ್ಲ ಎಂಬುದು ಹಳ್ಳಿ ಕಡೆಯಲ್ಲಿ ಚಾಲ್ತಿಯಿರೋ ಮಾತು. ಆದ್ರೆ, ನಾವು ಆ ರೀತಿ ವರ್ತಿಸೋದಿಲ್ಲ. ಈ ಬಗ್ಗೆ ಎಲ್ಲ ರಾಜ್ಯಗಳ ವಿಧಾನಸಭೆಗಳು ಮತ್ತು ಸಂಸತ್ತಿನಲ್ಲಿ ಚರ್ಚೆಯಾಗ್ಬೇಕು. ನಂತ್ರ ಕಾನೂನು ಜಾರಿಯಾಗಲಿ ಅನ್ನೋದು ನಮ್ಮ ಆಶಯ. ಇಂದಿರಾಗಾಂಧಿ ಕಾಲದಲ್ಲಿ ಸಂಜಯ್‌ಗಾಂಧಿ ಬ್ರಿಗೇಡ್‌ ಸಿಕ್ಕವರನ್ನ ಕರೆದುಕೊಂಡು ಬಂದು ಕಟ್ ಮಾಡುತ್ತಿದ್ರು ನಾವು ಹಾಗೆ ಮಾಡೋದಿಲ್ಲ ಅಂತ ಹೇಳಿದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ದೇಶದಲ್ಲಿ ಎದ್ದಿರೋ ಮಸೀದಿ-ಮಂದಿರ ವಿವಾದಕ್ಕೆ ಬಿಜೆಪಿ ಹಾಗೂ ಅದರ ಹಿಂದಿರೋ RSS ಕಾರಣ ಅಂತಾ ಕಾಂಗ್ರೆಸ್‌ ಮತ್ತು ಇತರೆ ವಿರೋಧ ಪಕ್ಷಗಳು ಆರೋಪಿಸ್ತಾನೇ ಬಂದಿವೆ. ಆದ್ರೆ ಈ ಸಮಯದಲ್ಲಿ RSS ಮುಖ್ಯಸ್ಥ ಮೋಹನ್‌ ಭಾಗವತ್‌ ತುಂಬಾ ಇಂಪಾರ್ಟೆಟ್‌ ಮತ್ತು ತುಂಬಾ ಇಂಟರೆಸ್ಟಿಂಗ್‌ ಹೇಳಿಕೆ ಕೊಟ್ಟಿದ್ದಾರೆ. ದೇಶದ ಪ್ರತಿ ಮಸೀದಿಗಳಲ್ಲಿ ಯಾಕೆ ಶಿವಲಿಂಗವನ್ನ ಹುಡುಕ್ತಿದ್ದೀರಾ ಅಂತ ಹೇಳಿದ್ದಾರೆ. ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿರೋ ಅವ್ರು ʻಗ್ಯಾನ್‌ವ್ಯಾಪಿ ಮಸೀದಿ ವಿಷಯ ಚರ್ಚೆ ಆಗ್ತಿದೆ. ಅವು ನಮ್ಮ ಆರಾಧನ ಸ್ಥಳ ಆಗಿರಬಹುದು. ಇತಿಹಾಸವನ್ನ ಚೇಂಜ್‌ ಮಾಡೋಕೆ ಆಗಲ್ಲ. ಆ ಇತಿಹಾಸವನ್ನ ಈಗಿರೋ ಹಿಂದೂಗಳು ಮಾಡಿದ್ದಲ್ಲ, ಆ ಕಡೆ ಮುಸ್ಲಿಮರು ಮಾಡಿರೋದಲ್ಲ. ಇತಿಹಾಸ, ಇತಿಹಾಸನೇ… ಎರಡು ಗುಂಪುಗಳು ಈ ರೀತಿ ಬರುವ ಸಮಸ್ಯೆಗಳನ್ನ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು. ಗ್ಯಾನ್‌ವ್ಯಾಪಿ ವಿಚಾರ ಸದ್ಯ ಕೋರ್ಟ್‌ನಲ್ಲಿದೆ, ಯಾವುದೇ ಆದೇಶ ಬಂದ್ರೂ ಇಬ್ಬರೂ ಶಾಂತಿಯಿಂದ ಒಪ್ಪಿಕೊಳ್ಳಬೇಕು. ಹಂಗಂತ ಎಲ್ಲಾ ಮಸೀದಿಗಳಲ್ಲೂ ಯಾಕೆ ಶಿವಲಿಂಗ ಹುಡುಕ್ತಿದ್ದೀರಾ ಅಂತ ಹೇಳಿದ್ದಾರೆ. ಜೊತೆಗೆ ಗ್ಯಾನ್ ವ್ಯಾಪಿ ವಿಚಾರವನ್ನRead More →

masthmagaa.com: ಆರ್​ಎಸ್​ಎಸ್​​ ಮುಖ್ಯಸ್ಥ ಮೋಹನ್ ಭಾಗವತ್​​ ಹಿಂದೂ ಮತ್ತು ಭಾರತದ ಸಂಬಂಧದ ಬಗ್ಗೆ ಮಾತಾಡಿದ್ದಾರೆ. ಗ್ವಾಲಿಯರ್​ನಲ್ಲಿ ನಡೆದ ಕಾರ್ಯಕ್ರಮವೊಂದ್ರಲ್ಲಿ ಮಾತಾಡಿದ ಅವರು, ಹಿಂದೂಗಳು ಮತ್ತು ಭಾರತವನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಹಿಂದೂಗಳಿಲ್ಲದಿದ್ರೆ ಭಾರತವಿಲ್ಲ.. ಭಾರತ ಇಲ್ಲದಿದ್ರೆ ಹಿಂದೂಗಳಿಲ್ಲ.. ಭಾರತ ಭಾರತವಾಗಿ ಉಳಿಯಬೇಕಾದ್ರೂ ಹಿಂದೂಗಳು ಬೇಕು. ಅದೇ ಹಿಂದೂಗಳು ಹಿಂದೂಗಳಾಗೇ ಇರಬೇಕು ಅಂತಾದ್ರೆ ಭಾರತ ಅಖಂಡವಾಗಲೇಬೇಕು ಅಂತ ಹೇಳಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಹಿಂದೂ ಧರ್ಮದವರು ದೇಶ ಭಕ್ತರಾಗಿರುತ್ತಾರೆ.. ದೇಶಭಕ್ತಿ ಅನ್ನೋದು ಅವರ ಕ್ಯಾರೆಕ್ಟರ್ ಮತ್ತು ನೇಚರ್​ನಲ್ಲೇ ಇರುತ್ತೆ.. ಹಿಂದೂಗಳು ಯಾವತ್ತೂ ದೇಶ ವಿರೋಧಿಗಳಾಗಲು ಸಾಧ್ಯವಿಲ್ಲ ಅಂತ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಜೆ.ಕೆ.ಬಜಾಜ್ ಮತ್ತು ಎಂ.ಡಿ. ಶ್ರೀನಿವಾಸ್ ಬರೆದ ‘ಮೇಕಿಂಗ್ ಆಫ್ ಎ ಹಿಂದೂ ಪೇಟ್ರಿಯಾಟ್: ಬ್ಯಾಗ್ರೌಂಡ್​ ಆಫ್ ಗಾಂಧೀಜೀಸ್​ ಹಿಂದ್ ಸ್ವರಾಜ್​’ ಪುಸ್ತಕ ಬಿಡುಗಡೆ ವೇಳೆ ಮೋಹನ್​ ಭಾಗವತ್ ಈ ರೀತಿ ಹೇಳಿದ್ದಾರೆ. ಮುಂದುವರಿದು ಮಾತನಾಡಿದ ಅವರು, ‘ವ್ಯಕ್ತಿಯ ಧರ್ಮದಿಂದಲೇ ದೇಶಭಕ್ತಿ ಹುಟ್ಟುತ್ತೆ ಅಂತ ಮಹಾತ್ಮ ಗಾಂಧೀಜಿ ಕೂಡ ತಮ್ಮ ಬರಹಗಳಲ್ಲಿ ಹೇಳಿದ್ದರು. ಗಾಂಧೀಜಿಗೆ ಧರ್ಮ ಮತ್ತು ದೇಶಭಕ್ತಿ ಎರಡೂ ಒಂದೇ ಆಗಿತ್ತು. ಹಿಂದೂ ಧರ್ಮದಲ್ಲಿ ಏಕತೆಯನ್ನ ನಂಬಲಾಗುತ್ತೆ. ಧರ್ಮಗಳ ನಡುವೆ ಇರುವ ಅಂತರವನ್ನ ಸಪರೇಟಿಸಂ ಅನ್ನೋಕ್ಕಾಗಲ್ಲ. ಗಾಂಧೀಜಿ ಪ್ರಕಾರ ಹಿಂದೂ ಧರ್ಮವು ಎಲ್ಲಾ ಧರ್ಮಗಳ ಧರ್ಮ’ ಅಂತ ಮೋಹನ್ ಭಾಗವತ್ ಹೇಳಿದ್ರು. -masthmagaa.com Share on: WhatsAppContact Us for AdvertisementRead More →