ಆಂಬುಲೆನ್ಸ್‌ ಸೇವೆಯಲ್ಲಿ ವ್ಯತ್ಯಯ! ಸುಧಾಕರ್‌ರಿಂದ ಕ್ಷಮೆ

masthmagaa.com:

ರಾಜ್ಯದಲ್ಲಿ ಕೆಲ ಕಾಲ ಆಂಬುಲೆನ್ಸ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ಬಳಿಕ ಸರಿ ಮಾಡಲಾಗಿದೆ. ತುರ್ತು ಆರೋಗ್ಯ ಸಹಾಯವಾಣಿ 108ರಲ್ಲಿ ಸರ್ವರ್‌ ಸಮಸ್ಯೆ ಉಂಟಾಗಿ ಆಂಬುಲೆನ್ಸ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಇದರಿಂದ ರೋಗಿಗಳು ತೊಂದರೆ ಕೂಡ ಅನುಭವಿಸಿದ್ರು. ಬಳಿಕ 112 ಕ್ಕೆ ಕಾಲ್‌ ಮಾಡುವಂತೆ ಸರ್ಕಾರ ಕೆಲ ಕಾಲ ಪರ್ಯಾಯ ವ್ಯವಸ್ಥೆಯನ್ನೂ ಮಾಡಿತ್ತು.ಇದೀಗ ಆಂಬುಲೆನ್ಸ್‌ ಸೇವೆ ಪುನಾರಂಭವಾಗಿದೆ ಅಂತ ಆರೋಗ್ಯ ಮಂತ್ರಿ ಡಾ ಸುಧಾಕರ್‌ ಹೇಳಿದ್ದಾರೆ. ಜೊತೆಗೆ ಈ ರೀತಿ ವ್ಯತ್ಯಯ ಉಂಟಾಗಿದ್ದಕ್ಕೆ ಜನರ ಹತ್ರ ಕ್ಷಮೆ ಕೂಡ ಕೇಳಿದ್ದಾರೆ.

-masthmagaa.com

Contact Us for Advertisement

Leave a Reply