masthmagaa.com:
ಇತ್ತ ಕುತೂಹಲದ ಕೇಂದ್ರ ಬಿಂದುವಾಗಿದ್ದ ಬೆಂಗಳೂರಿನ ಚಾಮರಾಜಪೇಟೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ದ್ವಜಾರೋಹಣ ನೆರವೇರಿಸಲಾಯಿತು. ಸದ್ಯಕ್ಕೆ ಅಲ್ಲಿ ಯಾವುದೇ ಅಹಿತಕರ ಘಟಟನೆಗಳು ನಡೆಯಲಿಲ್ಲ. ರಾಜ್ಯದಲ್ಲಿ ಸ್ವಾತಂತ್ರದಿನ ಶಾಂತಿಯಿಂದ ಮುಗೀತು ಅಂದುಕೊಳ್ಳುವ ಮೊದಲೇ ಅತ್ತ ಶಿವಮೊಗ್ಗದಲ್ಲಿ ಭಾರಿ ಹೈಡ್ರಾಮವೇ ನಡೆದಿದೆ. ಇಲ್ಲಿನ ಅಮೀರ್ ಅಹ್ಮದ್ ವೃತ್ತದಲ್ಲಿ ಸ್ವಾತಂತ್ರ ದಿನದ ಅಂಗವಾಗಿ ಸಾವರ್ಕರ್ ಫೋಟೋವನ್ನ ಹಾಕಲಾಗಿತ್ತು. ಆದ್ರೆ ಇನ್ನೊಂದು ಗುಂಪು ಇದನ್ನ ತೆರವು ಗೊಳಿಸಿ ಆ ಜಾಗಕ್ಕೆ ಟಿಪ್ಪು ಫೊಟೋ ಇಡೋಕೆ ಮುಂದಾದವು. ಇದು ಎರಡು ಗುಂಪುಗಳ ನಡುವಿನ ಜಟಾಪಟಿಗೆ ಕಾರಣವಾಯ್ತು. ಬಳಿಕ ಮಧ್ಯೆ ಪ್ರವೇಶ ಮಾಡಿ ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು ಎರಡೂ ಬಣದವರಿಗೂ ಶಾಂತಿಯಿಂದ ಇರೋಕೆ ಸೂಚನೆ ಕೊಟ್ರು. ಇದರ ಬೆನ್ನಲ್ಲೇ ಹಿಂದೂಪರ ಕಾರ್ಯಕರ್ತರು ಫೋಟೋ ತೆರವು ಮಾಡಿದ್ದರ ವಿರುದ್ದ ಪ್ರತಿಭಟನೆ ನಡೆಸಿದ್ರು. ಪ್ರತಿಭಟನೆ ಮಾಡ್ತಿದ್ದ ಸ್ಥಳಕ್ಕೆ ಮತ್ತೊಂದು ಗುಂಪು ನುಗ್ಗಲು ಯತ್ನ ಮಾಡ್ತು. ಇದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ಇದನ್ನ ಸರಿಮಾಡೋಕೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ರು. ಬಳಿಕ ಶಿವಮೊಗ್ಗ ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇನ್ನು ನಗರದ ಮತ್ತೆರೆಡು ಕಡೆ ಪ್ರತ್ಯೇಕ ಪ್ರಕರಣದಲ್ಲಿ ಚಾಕು ಇರಿತ ಮಾಡಲಾಗಿದೆ. ಇಲ್ಲಿನ ಉಪ್ಪಾರ ಕೇರಿ ಬಡಾವಣೆಯಲ್ಲಿ ಪ್ರೇಂ ಸಿಂಗ್ ಅನ್ನೋ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಬಳಿಕ ಅವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ಅಶೋಕನಗರ ಅನ್ನೋ ಕಡೆ ಅಂಗಡಿ ಬಂದ್ ಮಾಡಿ ಹೋಗುತ್ತಿದ್ದ ಪ್ರವೀಣ್ ಅನ್ನೋ ವ್ಯಕ್ತಿಯ ಮೇಲೆ ದುಷ್ಕರ್ಮಿಗಳು ಚಾಕು ಇರಿದಿದ್ದು ಅವರನ್ನ ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ.
-masthmagaa.com
Contact Us for Advertisement