masthmagaa.com:

ನಂಗೆ ನೀವು ಬೇಗ ಮದ್ವೆ ಮಾಡ್ದೇ ಇದ್ರೆ ಟವರ್‌ ಇಂದ ಹಾರಿ ಆತ್ಮ ಹತ್ಯೆ ಮಾಡಿಕೊಳ್ತೀನಿ, ಅಂತ 23 ವರ್ಷದ ಚಿರಂಜೀವಿ ಅನ್ನೋ ಯುವಕ, ಪೋಷಕರಿಗೆ ಬೆದರಿಕೆ ಹಾಕಿದ ಘಟನೆ ವಿಜಯಪುರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯಲ್ಲಿ ನಡೆದಿದೆ. ಚಿರಂಜೀವಿಗೆ ಈಗಾಗಲೇ ಹುಡುಗಿ ಸೆಟ್ಟ್‌ ಆಗಿದ್ದಾಳೆ. ಆದ್ರೆ ಮದ್ವೆನ ಚಿರಂಜೀವಿಯ ಅಣ್ಣನ ಮದ್ವೆ ಆದ್ಮೇಲೆ ಮಾಡೋದಾಗಿ ಮನೆಯಲ್ಲಿ ಹೇಳಿದ್ದಾರೆ. ಇದ್ರಿಂದ ಕೋಪಗೊಂಡ ಚಿರಂಜೀವಿ ಕುಡಿದ ಅಮಲಲ್ಲಿ ಟವರ್‌ ಹತ್ತಿದ್ದಾನೆ. ನಂತ್ರ ಪೊಲೀಸರು, ಹುಡುಗಿಯ ಅಣ್ಣಾ ಎಲ್ರೂ ಚಿರಂಜೀವಿಯ ಮನ ಒಲಿಸಿದ ನಂತ್ರ, ಕೆಳಗಿಳಿದ ಮೇಲೆ, ನಂಗ್ಯಾರು ಹೊಡಿಬಾರ್ದು ಅಂತ ಷರತ್ತು ಹಾಕಿ ಚಿರಂಜೀವಿ ಕೆಳಗಿಳ್ದಿದ್ದಾನೆ.

-masthmagaa.com

Contact Us for Advertisement

Leave a Reply