masthmagaa.com:
ತಾನು ಅಪಘಾತದಲ್ಲಿ ಸತ್ತರೆ ಮಗನ ಕಾಲೇಜ್ ಫೀ ಕಟ್ಟೋಕೆ ಪರಿಹಾರದ ಹಣ ಸಿಗುತ್ತೆ ಅಂತ ತಾಯಿಯೊಬ್ರು ಚಲಿಸುತ್ತಿದ್ದ ಬಸ್ಗೆ ಅಡ್ಡ ಹೋಗಿ ಸಾವನ್ನಪ್ಪಿರೋ ಘಟನೆ ತಮಿಳುನಾಡಿನ ಸೇಲಂನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೂನ್ 28 ರಂದು ಘಟನೆ ನಡೆದಿತ್ತು. 46 ವರ್ಷದ ಪಾಪತಿ ಮೃತ ದುರ್ದೈವಿ. ಪಾಪತಿ ಅವರ ಮಗ ಡಿಗ್ರಿ ಓದುತ್ತಿದ್ದು, 45 ಸಾವಿರ ಫೀ ಕಟ್ಟಲು ಬ್ಯಾಂಕ್ ಒಂದ್ರಲ್ಲಿ ಅರ್ಜಿ ಸಲ್ಲಿಸಿದ್ರು. ಆದ್ರೆ ಬ್ಯಾಂಕ್ ಅರ್ಜಿಯನ್ನ ತಿರಸ್ಕರಿಸಿತ್ತು. ಬಳಿಕ ಅಪಘಾತದಲ್ಲಿ ಸತ್ರೆ ಪರಿಹಾರದ ಹಣ ಸಿಗುತ್ತೆ ಅಂತ ಯಾರೋ ಹೇಳಿರೊ ಮಾತನ್ನ ನಂಬಿ ಈ ಅನಾಹುತ ಮಾಡಿಕೊಂಡಿದ್ದಾರೆ ಅಂತ ತನಿಖೆಯಿಂದ ತಿಳಿದು ಬಂದಿದೆ.
-masthmagaa.com
Contact Us for Advertisement