masthmagaa.com:
ಬೆಲೆ ಏರಿಕೆ ಆಗಿರೋದಕ್ಕೆ ಜನ್ರಿಗೆ ಯಾವುದೇ ರೀತಿಯ ಆಕ್ರೋಶ ಇಲ್ಲ. ಆಕ್ರೋಶ ಇರೋದು ಕೇವಲ ಕಾಂಗ್ರೆಸ್ನವರಿಗೆ ಮಾತ್ರ ಅಂತ ಕೇಂದ್ರ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಭಗವಂತ ಖೂಬಾ ಹೇಳಿದ್ದಾರೆ. ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಕೇಳಿ ಬಂದಾಗ ಸಿಟ್ಟಿನಿಂದ ಪ್ರತಿಕ್ರಿಯಿಸಿದ ಖೂಬ, ಎಲ್ಲಿದೆ ಬೆಲೆ ಏರಿಕೆ? ಜನ್ರು ಪ್ರಶ್ನಿಸ್ತಾ ಇಲ್ಲ. ನೀವು ಮಾತ್ರ ಪ್ರಶ್ನೆ ಮಾಡ್ತ ಇದ್ದೀರಿ. ಪೆಟ್ರೋಲ್, ಡಿಸೇಲ್ ದರ ಏರಿಕೆಯಿಂದ ಜನ್ರಿಗೆ ಸಮಸ್ಯೆ ಆಗಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದ ಅವಧಿಗಿಂತಲೂ ಈಗ ಜನ್ರು ನೆಮ್ಮದಿಯಿಂದ ಇದ್ದಾರೆ. ಕಾಂಗ್ರೇಸ್ ಪಕ್ಷದವರು ಮಾತ್ರ ಪ್ರತಿಭಟನೆ ಮಾಡ್ತಿರೋದು ಅಂತ ಹೇಳಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಇವತ್ತು ಒಂದು ಲೀಟರ್ ಪೆಟ್ರೋಲ್ಗೆ 111.7 ರೂಪಾಯಿ ಹಾಗೆ ಡಿಸೇಲ್ ದರ 102.23 ರೂಪಾಯಿ ಇದೆ.
-masthmagaa.com
Contact Us for Advertisement