ಸಿಎಂ ಬಸವರಾಜ್ ಬೊಮ್ಮಾಯಿ ನಾಳೆ ದೆಹಲಿಯತ್ತ ಪ್ರಯಾಣ!

masthmagaa.com:

ಸಿಎಂ ಬಸವರಾಜ ಬೊಮ್ಮಾಯಿ ಇವತ್ತು ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ದುರಸ್ತಿ ಮತ್ತು ಪುನರ್​ನಿರ್ಮಾಣ ಕೆಲಸಗಳು ವೇಗವಾಗಿ ನಡೆಯಲಿದೆ ಅಂತ ಹೇಳಿದ್ದಾರೆ. ಜೊತೆಗೆ ಸಾಧ್ಯವಾದ್ರೆ ನಾಳೆ ದೆಹಲಿಗೆ ಹೋಗಿ ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜ್​ನಾಥ್ ಸಿಂಗ್​ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನ ಭೇಟಿಯಾಗ್ತೀನಿ ಎಂದಿದ್ದಾರೆ. ಆದ್ರೆ ನಾಳಿನ ಭೇಟಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ಆಗೋದು ಅನುಮಾನ. ಮುಂದಿನ ಭೇಟಿಯಲ್ಲಿ ಆಗಬಹುದು ಅಂತ ಹೇಳಿದ್ದಾರೆ. ಜೊತೆಗೆ ನಿನ್ನೆ ಪ್ರಧಾನಿ ಮೋದಿ ಫೋನ್ ಕಾಲ್ ಮಾಡಿ ಮಾತನಾಡಿದ್ರು ಅಂತಾನೂ ತಿಳಿಸಿದ್ದಾರೆ. ಇನ್ನು ಮಾಜಿ ಸಿಎಂ ಯಡಿಯೂರಪ್ಪ ಇವತ್ತು ಚಾಮರಾಜಪೇಟೆಯಲ್ಲಿರೋ ಆರ್​ಎಸ್​ಎಸ್ ಕಚೇರಿಗೆ ಭೇಟಿ ನೀಡಿದ್ದಾರೆ.

-masthmagaa.com

Contact Us for Advertisement

Leave a Reply