masthmagaa.com:
ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷದ ಸಚಿವ ಅಖಿಲ್ ಗಿರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿ ಭಾರಿ ಟೀಕೆಗೆ ಗುರಿಯಾಗಿದ್ದಾರೆ. ಜನ ಹೇಗೆ ಕಾಣ್ತಾರೆ ಅನ್ನೋದ್ರ ಮೇಲೆ ವ್ಯಕ್ತಿತ್ವ ಅಳೆಯಬಾರ್ದು. ಇದೇ ವೇಳೆ ನಾವು ರಾಷ್ಟ್ರಪತಿ ಹುದ್ದೆಯನ್ನ ಗೌರವಿಸ್ತೀವಿ ಆದ್ರೆ ಅವ್ರು ಹೇಗೆ ಕಾಣ್ತಾರೆ? ಅಂದ್ರೆ ನೋಡೋಕೆ ಹೇಗಿದಾರೆ ಅಂತ ನಗುತ್ತಾ ಹೇಳಿದ್ದಾರೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಹೇಳಿಕೆಯನ್ನು ಖಂಡಿಸಿರೋ ಬಿಜೆಪಿ, ಆಡಳಿತದಲ್ಲಿರೋ ಟಿಎಂಸಿ ಮತ್ತು ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದೆ. ಇತ್ತ ಸಚಿವರ ಈ ಹೇಳಿಕೆಯಿಂದ ಟಿಎಂಸಿ ಅಂತರ ಕಾಯ್ದುಕೊಂಡಿದೆ. ಜೊತೆಗೆ ಗಿರಿ ಅವರದ್ದು ಬೇಜವಾಬ್ದಾರಿ ಹೇಳಿಕೆ ಅಂತ ಪಕ್ಷ ಖಂಡಿಸಿದ್ದು, ಇದಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ ಅಂತ ಸ್ಪಷ್ಟಪಡಿಸಿದೆ. ಈ ಕುರಿತು ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಸಚಿವ ಗಿರಿ ಕ್ಷಮೆಯಾಚಿಸಿದ್ದಾರೆ. ರಾಷ್ಟ್ರಪತಿಗಳಿಗೆ ಅಗೌರವ ತೋರೋದು ನನ್ನ ಉದ್ದೇಶವಾಗಿರ್ಲಿಲ್ಲ. ಬಿಜೆಪಿಯವರು ಸದಾ ನನ್ನ ಮೇಲೆ ಟೀಕೆ ಮಾಡ್ತಾ ಇರ್ತಾರೆ. ಸೋ ಅವ್ರ ಟೀಕೆಗಳಿಗೆ ಉತ್ತರ ನೀಡಿದ್ದೇನೆ ಅಷ್ಟೆ ಅಂತ ಗಿರಿ ಹೇಳಿದ್ದಾರೆ.
-masthmagaa.com
Contact Us for Advertisement