masthmagaa.com:
ಚುನಾವಣೆ ಹೊತ್ತಲ್ಲೇ ರಾಜ್ಯದಲ್ಲಿ ಮೀಸಲಾತಿ ದಳ್ಳುರಿ ಧಗಧಗಿಸ್ತಿದೆ. ಒಂದು ಕಡೆ ಒಳಮೀಸಲಾತಿ, ಮತ್ತೊಂದು ಕಡೆ ಹೊಸ ಮೀಸಲಾತಿ ವಿರೋಧಿಸಿ ರಾಜ್ಯದಲ್ಲಿ ತೀವ್ರ ಗದ್ದಲ ಶುರುವಾಗಿದೆ. ಇದೀಗ ಮುಸ್ಲಿಮರ ಮೀಸಲಾತಿಯಲ್ಲಿ ಆಗಿರೋ ಪರಿಷ್ಕರಣೆಯನ್ನ ಖಂಡಿಸಿ ಸರ್ಕಾರದ ವಿರುದ್ದ ರಾಜ್ಯದ ಹಲವು ಭಾಗಗಳಲ್ಲಿ ಇಂದು ಪ್ರತಿಭಟನೆ ನಡೆಸಲಾಗಿದೆ. ಮುಸ್ಲಿಮರಿಗೆ ಕೊಟ್ಟಿದ್ದ ಮೀಸಲಾತಿಯನ್ನ ವಾಪಾಸ್ ಕೊಡಬೇಕು ಅಂತ ಆಗ್ರಹ ಮಾಡಲಾಗಿದೆ. ಈ ಕಡೆ ಮುಸ್ಲಿಮರ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಧಾರದ ಹಿಂದೆ ಕೋಮು ಸಂಘರ್ಷ ನಡೆಸುವ ಹುನ್ನಾರ ಇದೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ʻಬಿಜೆಪಿಯವರು ಮುಸ್ಲಿಮರ ಮೀಸಲಾತಿ ಕಿತ್ಕೊಂಡು ಒಕ್ಕಲಿಗ ಹಾಗೂ ಲಿಂಗಾಯತರಿಗೆ ಕೊಟ್ಟಿದ್ದಾರೆ. ಇದರಿಂದ ಕೋಮುಸಂಘರ್ಷ ನಡೆಸಿ ರಕ್ತಪಾತ ಮಾಡಿಸೋದು ಬಿಜೆಪಿಯವರ ಉದ್ದೇಶ. ಮೀಸಲಾತಿ ವ್ಯವಸ್ಥೆ ಇರೋದು ಹುಡುಗಾಟಿಕೆಗೋಸ್ಕರ, ಮತ ಪಡೆಯೋಕೋಸ್ಕರ ಅಲ್ಲ. ಎರಡೂ ಸಮುದಾಯಗಳಿಗೆ ಮೀಸಲಾತಿ ಕೊಡಿಸಿ ತಾವೇನೋ ದೊಡ್ಡ ಕೊಡುಗೆ ಕೊಟ್ಟಿದ್ದೀವಿ ಅಂತ ಹೇಳೋಕೆ ಹೋಗ್ತಿದ್ದಾರೆ. ಸರ್ಕಾರಿ ಹುದ್ದೆಗಳಿಗೆ ರೇಟ್ ಫಿಕ್ಸ್ ಮಾಡಿದಾರೆ. ಮೀಸಲಾತಿ ತಗೊಂಡು ಏನ್ ಮಾಡ್ತೀರಾ? ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಇದನ್ನೆಲ್ಲಾ ರದ್ದು ಮಾಡುತ್ತೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ ಮುಸ್ಲಿಮರ ಮೀಸಲಾತಿ ಕಿತ್ತು ನಮಗೆ ಕೊಡಿ ಅಂತ ಲಿಂಗಾಯತ ಸ್ವಾಮೀಜಿನೂ ಕೇಳಿಲ್ಲ. ಒಕ್ಕಲಿಗ ಸ್ವಾಮೀಜಿನೂ ಕೇಳಿಲ್ಲ. ನಮ್ಮ ಸರ್ಕಾರ ಬಂದ್ರೆ ನಾವೂ ಇದನ್ನ ರದ್ದು ಮಾಡ್ತೀವಿ ಅಂತ ಡಿಕೆಶಿ ಹೇಳಿದ್ದಾರೆ. ಇನ್ನು ಒಳಮೀಸಲಾತಿ ವಿರೋಧಿಸಿ ಯಡಿಯೂರಪ್ಪ ಮನೆ ಮೇಲೆ ಕಲ್ಲುತೂರಾಟ ಆಗಿತ್ತು. ಆ ರೀತಿ ಕಲ್ಲು ತೂರಾಟ ಮಾಡಿದ್ದರ ಹಿಂದೆ ಬಿಜೆಪಿ ನಾಯಕರೇ ಇದ್ದಾರೆ. ದಾಳಿಯ ಹಿಂದೆ ಬಿಎಲ್ ಸಂತೋಷ ಕೂಟದ ಕೈವಾಡ ಇದೆ ಅಂತ ಕಾಂಗ್ರೆಸ್ ಆರೋಪ ಮಾಡಿದೆ.
-masthmagaa.com
Contact Us for Advertisement