masthmagaa.com:
ಬಿಜೆಪಿ ವಿರುದ್ದ ಜಿಹಾದ್ ಮಾಡೋದಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇತ್ತೀಚೆಗಷ್ಟೇ ಘೋಷಣೆ ಮಾಡಿದ್ರು. ಇದೀಗ ಅದಕ್ಕೆ ಪ್ರತಿಕ್ರಿಯಿಸಿರೋ ಅಲ್ಲಿನ ಗವರ್ನರ್ ಜಗದೀಪ್ ಧನಕರ್, ಮಮತಾ ಬ್ಯಾನರ್ಜಿ ತಮ್ ಹೇಳಿಕೆಯನ್ನ ಹಿಂತೆಗೆದುಕೊಳ್ಳಬೇಕು ಅಂತ ಸಿಎಂಗೆ ಪತ್ರ ಬರೆದಿದ್ದಾರೆ. ಅಂದ್ಹಾಗೆ 1993 ರಲ್ಲಿ ಸಿಪಿಐ(ಎಂ) ನೇತೃತ್ವದ ಸರ್ಕಾರ ಇದ್ದಾಗ ಜುಲೈ 21 ರಂದು ನಡೆದ ರ್ಯಾಲಿಯಲ್ಲಿ ಪೊಲೀಸರ ಗುಂಡಿನ ದಾಳಿಗೆ 13 ಯುವ ಕಾಂಗ್ರೆಸ್ ಕಾರ್ಯಕರ್ತರು ಹತ್ಯೆಯಾಗಿದ್ರು. ಆ ಟೈಮಲ್ಲಿ ಮಮತಾ ಬ್ಯಾನರ್ಜಿ ಕಾಂಗ್ರೆಸ್ ಪಕ್ಷದಲ್ಲಿದ್ರು. ಅಂದಿನಿಂದ ಜುಲೈ 21ನ್ನ ಹುತಾತ್ಮರ ದಿನ ಅಂತ ತೃಣಮೂಲ ಕಾಂಗ್ರೆಸ್ ಆಚರಿಸುತ್ತಾ ಬರ್ತಾಯಿದೆ.. ಹೀಗಾಗಿ ಈ ವರ್ಷ ಆ ದಿನದಂದೇ ಟಿಎಂಸಿ ಬಿಜೆಪಿ ವಿರುದ್ದ ಜಿಹಾದ್ ನಡೆಸುತ್ತೆ ಅಂತ ಮಮತಾ ಬ್ಯಾನರ್ಜಿ ಹೇಳಿದ್ರು. ಇದಕ್ಕೆ ಈಗ ಅಲ್ಲಿನ ಗವರ್ನರ್ ಅಸಮಾಧಾನ ಹೊರಹಾಕಿದ್ದು ಈ ರೀತಿ ಹೇಳಿಕೆಯನ್ನ ಸಿಎಂ ಹೇಗೆ ನೀಡ್ತಾರೆ, ಇದು ಸಾಂವಿಧಾನಿಕ ಅರಾಜಕತೆಯನ್ನ ತೋರಿಸುತ್ತೆ ಅಂತ ಕಿಡಿಕಾರಿದ್ದಾರೆ.
-masthmagaa.com
Contact Us for Advertisement