masthmagaa.com:
ಸಿಎಂ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಘೋಷಿಸಿದ್ದಾರೆ. ತಮ್ಮ ಸರ್ಕಾರಕ್ಕೆ 2 ವರ್ಷ ತುಂಬಿದ ಸಾಧನಾ ಸಮಾವೇಶದಲ್ಲಿ ಮಾತನಾಡುತ್ತ ಈ ನಿರ್ಧಾರ ಪ್ರಕಟಿಸಿದ್ದಾರೆ. ಈ ಮೂಲಕ ಹಲವು ದಿನಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಈಗ ಮುಂದಿನ ಸಿಎಂ ಯಾರು ಅನ್ನೋ ಕುತೂಹಲ ಮನೆ ಮಾಡಿದೆ. ಮೂಲಗಳ ಮಾಹಿತಿ ಪ್ರಕಾರ ಬಿಜೆಪಿ ಹೈಕಮಾಂಡ್ ಕಡೆಯಿಂದ ಹೊಸ ನಾಯಕನ ಆಯ್ಕೆ ಆಗಿ ಹೋಗಿದೆ. ಆದ್ರೆ ಅದನ್ನ ಪ್ರಕಟಿಸೋ ಮೊದಲು ರಾಜ್ಯಕ್ಕೆ ಒಂದು ವೀಕ್ಷಕರ ತಂಡ ಬಂದು, ಅದರ ಉಸ್ತುವಾರಿಯಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ಅಲ್ಲಿ ಮುಂದಿನ ಸಿಎಂ ಯಾರು ಅಂತ ಅಫಿಶಿಯಲ್ ಆಗಿ ಘೋಷಣೆ ಮಾಡಲಾಗುತ್ತೆ ಅಂತ ಗೊತ್ತಾಗಿದೆ. ಯಾಕೆಂದರೆ ಇದುವರೆಗೂ ಬೇರೆ ರಾಜ್ಯಗಳಲ್ಲಿ ಬಿಜೆಪಿ ಸಿಎಂಗಳ ಬದಲಾವಣೆ ವೇಳೆ ಇದೇ ಮಾದರಿಯನ್ನ ಅನುಸರಿಸಲಾಗಿದೆ. ಅಂದಹಾಗೆ ಶಾಸಕ ಅರವಿಮದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ಸಚಿವ ಬಸವರಾಜ ಬೊಮ್ಮಾಯಿ, ಡಿಸಿಎಂ ಡಾ. ಅಶ್ವಥ್ ನಾರಾಯಣ್, ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿ ಹಲವರ ಹೆಸರು ಮುಂಚೂಣಿಯಲ್ಲಿ ಚರ್ಚೆ ಆಗ್ತಿದೆ. ಆದ್ರೆ ಮೋದಿ-ಶಾ ಜೋಡಿಯ ಆಶೀರ್ವಾದ ಯಾರ ತಲೆ ಮೇಲಿದೆ ಅನ್ನೋದು ಈ ಕ್ಷಣದವರೆಗೂ ನಿಗೂಢ.
-masthmagaa.com
Contact Us for Advertisement