masthmagaa.com:
ʻನಿನ್ನೆ ತಡರಾತ್ರಿವರೆಗೂ ಡಿಕೆ ಶಿವಕುಮಾರ ನನ್ನನ್ನ ಬ್ಲ್ಯಾಕ್ಮೇಲ್ ಮಾಡಿದ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಾನು ಹಿಂದೆ ಸರಿಯದಿದ್ರೆ, ಸಿ.ಡಿ ಹೊರ ಬಿಡ್ತೇನೆ ಅಂತ ಹೆದರಿಸೋಕೆ ಯತ್ನಿಸಿದʼ ಅಂತ ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿ ಆರೋಪಿಸಿದ್ದಾರೆ. ಜೊತೆಗೆ ನಾನು ಎಲ್ಲದಕ್ಕೂ ರೆಡಿಯಿದ್ದೇನೆ. ಅದ್ಯಾವ ಸಿ.ಡಿ ಬಿಡ್ತಿ ಬಿಡು ಮಗನೇ ಎಂದಿರೋದಾಗಿ ಹೇಳಿದ್ದಾರೆ. ಗೋಕಾಕದಲ್ಲಿ ಮತದಾನ ಮಾಡಿದ ಬಳಿಕ ಮಾತಾಡಿದ ರಮೇಶ ಜಾರಕಿಹೊಳಿ, ಕೊನೆ ಕ್ಷನದವರೆಗೂ ಡಿಕೆಶಿ ಹೆಸರಿಸಲು ನೋಡಿದ. ಆದರೆ ನಾನು ಹಿಂದೆ ಸರಿಯಲಿಲ್ಲ. ಡಿಕೆಶಿ ಈಗಲಾದರೂ ಬುದ್ಧಿ ಕಲಿಯಬೇಕು. ವಿಷಕನ್ಯೆಯಿಂದ ದೂರ ಇರಬೇಕು. ಇಲ್ಲದಿದ್ರೆ ನಾಶವಾಗ್ತಾನೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement