masthmagaa.com: ದೇಶದ ಹೈ ವೋಲ್ಟೇಜ್‌ ಎಲೆಕ್ಷನ್‌ ಅಂತ ಕರೆಯಲಾಗ್ತಿರೋ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಡೆಗೂ ದಿನಾಂಕ ಪ್ರಕಟವಾಗಿದೆ. ಇಂದು ಬೆಳಿಗ್ಗೆ ಭಾರತೀಯ ಚುನಾವಣಾ ಆಯೋಗದ ಮುಖ್ಯಸ್ಥ ಪಿ ರಾಜೀವ್‌ ಕುಮಾರ್‌ ಎಲೆಕ್ಷನ್‌ ಡೇಟ್‌ ಅನೌನ್ಸ್‌ ಮಾಡಿದ್ದಾರೆ. ಮೇ 10ರಂದು ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ ನಡೆಯುತ್ತೆ. ಮೇ 13ನೇ ತಾರೀಖು 224 ಕ್ಷೇತ್ರಗಳ ಫಲಿತಾಂಶ ಹೊರಬೀಳುತ್ತೆ. ಏಪ್ರಿಲ್‌ 13ಕ್ಕೆ ಗೆಜೆಟ್ ನೋಟಿಫಿಕೇಷನ್ ಅಗುತ್ತೆ,ಏಪ್ರಿಲ್‌ 20ಕ್ಕೆ ನಾಮಪತ್ರ ಸಲ್ಲಿಸಲು ಕೊನೆಯ ದಿನ. ಏಪ್ರಿಲ್ 21ನೇ ತಾರೀಖು ನಾಮಪತ್ರಗಳ ಪರಿಶೀಲನೆ ಆಗುತ್ತೆ ನಾಮಪತ್ರ ವಾಪಸ್ ಪಡೆಯೋಕೆ ಏಪ್ರಿಲ್ 24 ಕೊನೆಯ ದಿನ ಆಗಿದೆ. ಇನ್ನು ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ರಾಜ್ಯದಲ್ಲಿ ನೀತಿ ಸಂಹಿತೆ ಕೂಡ ಜಾರಿಯಾಗಿದೆ. ಚುನಾವಣಾ ಅಕ್ರಮ ತಡೆಯೋಕೆ 2,400 ವಿಚಕ್ಷಣ ತಂಡ ನಿಯೋಜನೆ ಮಾಡಲಾಗಿದೆ. ಅಕ್ರಮಗಳ ಮೇಲೆ ನಿಗಾವಹಿಸಲು 2016 ಫ್ಲೈಯಿಂಗ್ ಸ್ಕ್ವಾಡ್​ ನಿಯೋಜಿಸಲಾಗಿದೆ. ಎಲ್ಲಾ ವಿಮಾನ ನಿಲ್ದಾಣ, ಬಂದರು, ಹೆದ್ದಾರಿಗಳಲ್ಲಿ ಕಣ್ಣಿಡಲಾಗಿದೆ. ಬ್ಯಾಂಕ್​Read More →

masthmagaa.com: ಜೈಲುನಲ್ಲಿದ್ದುಕೊಂಡೇ ಮನೆಯಿಂದ ನಶಾ ವಸ್ತುಗಳ ಡೀಲ್‌ ಮಾಡುತ್ತಿದ್ದ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಗಾಂಜಾ ದಂಧೆಯಲ್ಲಿ ತಿಂಗಳ ಹಿಂದೆ ಮುಜ್ಜು ಅನ್ನೋ ವ್ಯಕ್ತಿಯನ್ನ ಜೆಜೆ ನಗರ ಪೊಲೀಸರು ಬಂಧಿಸಿದ್ರು. ಈಗ ಆತನ ಹೆಂಡತಿಯನ್ನೂ ಅರೆಸ್ಟ್ ಮಾಡಲಾಗಿದೆ. ಈಕೆ ಗಂಡ ಜೈಲಿನಲ್ಲಿದ್ರೂ ಆತನ ಮಾರ್ಗದರ್ಶನದಲ್ಲಿ ಸ್ಮಗ್ಲಿಂಗ್‌ ಮಾಡ್ತಿದ್ಲು ಅಂತ ಗೊತ್ತಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಭ್ರಷ್ಟಾಚಾರ ಕೇಸಲ್ಲಿ ಬಂಧಿತವಾಗಿರೋ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪರನ್ನ 5 ದಿನಗಳ ಕಾಲ ಲೋಕಾಯುಕ್ತ ಕಸ್ಟಡಿಗೆ ನೀಡಿ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಕೊಟ್ಟಿದೆ. ಮಗನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆ ಕೇಸಲ್ಲಿ ಮಾಡಾಳ್‌ಗೆ ಕೊಟ್ಟಿದ್ದ ಜಾಮೀನನ್ನ ನಿನ್ನೆ ಹೈಕೋರ್ಟ್‌ ವಜಾ ಮಾಡಿತ್ತು. ಬಳಿಕ ದಾರಿಯಲ್ಲೇ ಹೋಗ್ತಿದ್ದ ಶಾಸಕರನ್ನ ನಿಲ್ಲಿಸಿ ಅಡ್ಡಗಟ್ಟಿ ಅರೆಸ್ಟ್‌ ಮಾಡಲಾಗಿತ್ತು. ಬಳಿಕ ಕೋರ್ಟ್‌ಗೆ ಪ್ರೊಡ್ಯೂಸ್‌ ಮಾಡಲಾಗಿತ್ತು. ಈಗ ಮಾನ್ಯ ಶಾಸಕರನ್ನ ಕೋರ್ಟ್‌ 5 ದಿನಗಳ ಕಾಲ ಲೋಕಾಯುಕ್ತಕ್ಕೆ ಒಪ್ಪಿಸಿದೆ. ಇನ್ನೊಂದ್ಕಡೆ ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಅವರ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ, ಪ್ರಕರಣವನ್ನ ರದ್ದು ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನ ಹೈ ಕೋರ್ಟ್‌ ವಜಾಗೊಳಿಸಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಹಾವೇರಿ ಕ್ಷೇತ್ರದ ಬಿಜೆಪಿ ಶಾಸಕ ನೆಹರು ಓಲೆಕಾರ್​ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕೋರಿ ಬಿಜೆಪಿ ಕಾರ್ಯಕರ್ತರು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಲಕ್ಷಾಂತರ ಮೊತ್ತದ ಕಾಮಗಾರಿಯನ್ನ ಪುತ್ರರಿಗೇ ನೀಡಿದ ಆರೋಪದಡಿ ನೆಹರು ಓಲೆಕಾರ್‌ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಿಂದ 2 ವರ್ಷ ಜೈಲುಶಿಕ್ಷೆ ಆಗಿತ್ತು. ಬಳಿಕ ಜಾಮೀನು ಕೂಡ ನೀಡಲಾಗಿತ್ತು. ಭ್ರಷ್ಟಾಚಾರ ಕೇಸ್​ನಲ್ಲಿ ನ್ಯಾಯಾಲಯ ತೀರ್ಪು ನೀಡಿದ್ದರೂ ಯಾವುದೇ ಕ್ರಮವಾಗಿಲ್ಲ. ನೆಹರು ಓಲೆಕಾರ್​ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಅಂತ ಈಗ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಚುನಾವಣೆ ಹೊತ್ತಲ್ಲೇ ರಾಜ್ಯದಲ್ಲಿ ಮೀಸಲಾತಿ ದಳ್ಳುರಿ ಧಗಧಗಿಸ್ತಿದೆ. ಒಂದು ಕಡೆ ಒಳಮೀಸಲಾತಿ, ಮತ್ತೊಂದು ಕಡೆ ಹೊಸ ಮೀಸಲಾತಿ ವಿರೋಧಿಸಿ ರಾಜ್ಯದಲ್ಲಿ ತೀವ್ರ ಗದ್ದಲ ಶುರುವಾಗಿದೆ. ಇದೀಗ ಮುಸ್ಲಿಮರ ಮೀಸಲಾತಿಯಲ್ಲಿ ಆಗಿರೋ ಪರಿಷ್ಕರಣೆಯನ್ನ ಖಂಡಿಸಿ ಸರ್ಕಾರದ ವಿರುದ್ದ ರಾಜ್ಯದ ಹಲವು ಭಾಗಗಳಲ್ಲಿ ಇಂದು ಪ್ರತಿಭಟನೆ ನಡೆಸಲಾಗಿದೆ. ಮುಸ್ಲಿಮರಿಗೆ ಕೊಟ್ಟಿದ್ದ ಮೀಸಲಾತಿಯನ್ನ ವಾಪಾಸ್‌ ಕೊಡಬೇಕು ಅಂತ ಆಗ್ರಹ ಮಾಡಲಾಗಿದೆ. ಈ ಕಡೆ ಮುಸ್ಲಿಮರ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಿರ್ಧಾರದ ಹಿಂದೆ ಕೋಮು ಸಂಘರ್ಷ ನಡೆಸುವ ಹುನ್ನಾರ ಇದೆ ಅಂತ ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ʻಬಿಜೆಪಿಯವರು ಮುಸ್ಲಿಮರ ಮೀಸಲಾತಿ ಕಿತ್ಕೊಂಡು ಒಕ್ಕಲಿಗ ಹಾಗೂ ಲಿಂಗಾಯತರಿಗೆ ಕೊಟ್ಟಿದ್ದಾರೆ. ಇದರಿಂದ ಕೋಮುಸಂಘರ್ಷ ನಡೆಸಿ ರಕ್ತಪಾತ ಮಾಡಿಸೋದು ಬಿಜೆಪಿಯವರ ಉದ್ದೇಶ. ಮೀಸಲಾತಿ ವ್ಯವಸ್ಥೆ ಇರೋದು ಹುಡುಗಾಟಿಕೆಗೋಸ್ಕರ, ಮತ ಪಡೆಯೋಕೋಸ್ಕರ ಅಲ್ಲ. ಎರಡೂ ಸಮುದಾಯಗಳಿಗೆ ಮೀಸಲಾತಿ ಕೊಡಿಸಿ ತಾವೇನೋ ದೊಡ್ಡ ಕೊಡುಗೆ ಕೊಟ್ಟಿದ್ದೀವಿ ಅಂತ ಹೇಳೋಕೆ ಹೋಗ್ತಿದ್ದಾರೆ. ಸರ್ಕಾರಿ ಹುದ್ದೆಗಳಿಗೆ ರೇಟ್‌ ಫಿಕ್ಸ್‌ ಮಾಡಿದಾರೆ. ಮೀಸಲಾತಿ ತಗೊಂಡು ಏನ್‌ ಮಾಡ್ತೀರಾ? ನಮ್ಮRead More →

masthmagaa.com: ಐತಿಹಾಸಿಕ ಬೇಲೂರಿನ ಚೆನ್ನಕೇಶವ ರಥೋತ್ಸವದ ವೇಳೆ ಕುರಾನ್‌ ಪಠಣೆ ಮಾಡುವ ಸಂಪ್ರದಾಯವನ್ನ ನಿಲ್ಲಿಸ್ಬೇಕು ಅಂತ ಹಿಂದೂಪರ ಸಂಘಟನೆಗಳು ಮನವಿ ಮಾಡಿವೆ.‌ ಇದೇ ಏಪ್ರಿಲ್‌ 4ನೇ ತಾರೀಖು ಚೆನ್ನಕೇಶವ ಸ್ವಾಮಿಯ ರಥೋತ್ಯವ ನಡೆಯಲಿದ್ದು ಏಪ್ರಿಲ್‌ ​​​ 3ರೊಳಗೆ ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಬೇಕು ಅಂತ ಆಗ್ರಹ ಕೇಳಿ ಬಂದಿದೆ. ಇದಕ್ಕೆ ಸಂಬಂಧಪಟ್ಟಂತೆ ಇವತ್ತು ಪ್ರತಿಭಟನೆ ಕೂಡ ನಡೆಸಲಾಗಿದೆ. ಈ ವೇಳೆ ಮುಸ್ಲಿಂ ಯುವಕನೊಬ್ಬ ಕುರಾನ್ ಪರ ಘೋಷಣೆ ಕೂಗಿದ್ದಾನೆ. ಇದರಿಂದ ಎರಡೂ ಸಮುದಾಯದವರ ನಡುವೆ ವಾಗ್ವಾದ ಉಂಟಾಗಿದೆ. ಪರಿಸ್ಥಿತಿ ನಿಯಂತ್ರಿಸೋಕೆ ಪೊಲೀಸರು ಲಘು ಲಾಠಿ ಚಾರ್ಜ್‌ ಮಾಡಿದ್ದಾರೆ. ಬಳಿಕ ಘೋಷಣೆ ಕೂಗಿದ ಮುಸ್ಲಿಂ ಯುವಕನನ್ನ ವಶಕ್ಕೆ ಪಡೆಯಲಾಗಿದೆ. ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿ ವಿಶ್ವಪಾರಂಪರಿಕ ಪಟ್ಟಿಗೆ ಸೇರಲು ಸಜ್ಜಾಗಿರೋ ಚೆನ್ನಕೇಶವ ದೇವಾಸ್ಥಾನದಲ್ಲಿ ಪ್ರತಿಬಾರಿಯಿಂದ ಈ ಬಾರಿ ಕೂಡ ಜಾತ್ರೆ ನಡೆಯಲಿದೆ. ರಥೋತ್ಸವದ ವೇಳೆ ಕುರಾನ್‌ ಪಠಣೆ ಮಾಡೋದು ದಶಕಗಳಿಂದ ನಡ್ಕೊಂಡು ಬಂದಿದೆ. ಆದ್ರೆ ಇದು ಇತ್ತಿಚಿಗೆ ಅಂದ್ರೆ 1932ರಲ್ಲಿ ಮಾಡಲಾಗಿರೋ ಸುಳ್ಳು ಸಂಪ್ರದಾಯ. ಚನ್ನಕೇಶವರ ಜಾತ್ರೆ ವೇಳೆ ಗೋವಿಂದRead More →

masthmagaa.com: ಚುನಾವಣೆ ಹೊತ್ತಲ್ಲೇ ರಾಜ್ಯದಲ್ಲಿ ಮೀಸಲಾತಿ ಜ್ವಾಲೆ ಧಗಧಗಿಸ್ತಾ ಇದೆ. ಇದೀಗ ಪರಿಶಿಷ್ಟ ಸಮುದಾಯಗಳಿಗೆ ಒಳ ಮೀಸಲಾತಿ ನೀಡುವ ಕುರಿತು ನ್ಯಾಯಮೂರ್ತಿ ಸದಾಶಿವ ವರದಿಯನ್ನ ಕೇಂದ್ರಕ್ಕೆ ಶಿಫಾರಸು ಮಾಡುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಒಳಮೀಸಲಾತಿಗೆ ಶಿಫಾರಸ್ಸು ಮಾಡಬಾರದು ಅಂತ ಶಿಕಾರಿಪುರದಲ್ಲಿ ಬಂಜಾರ ಸಮುದಾಯದವ್ರು ಪ್ರತಿಭಟನೆ ನಡೆಸಿದ್ದಾರೆ. ಸಿಎಂ ಬಸವರಾಜ್‌ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪನವ್ರ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಯಡಿಯೂರಪ್ಪರ ಮನೆಗೆ ಮುತ್ತಿಗೆ ಹಾಕೋಕೆ ಪ್ರಯತ್ನಿಸಿದ್ದು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ. ಇದರಿಂದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಉದ್ರಿಕ್ತಗೊಂಡ ಪ್ರತಿಭಟನಾಕಾರರು ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಿದ್ದಾರೆ. ಇದರಿಂದ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿದ್ದು ಶಿಕಾರಿಪುರದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಇತ್ತ ಘಟನೆಗೆ ಪ್ರತಿಕ್ರಿಯಿಸಿರುವ ಸಿಎಂ ಬೊಮ್ಮಾಯಿ, ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟದ ಹಿಂದೆ ಕಾಂಗ್ರೆಸ್‌ ಕೈವಾಡ ಇದೆ. ಶಿವಮೊಗ್ಗದ ಸ್ಥಳೀಯ ಕಾಂಗ್ರೆಸ್ ಮುಖಂಡರು ಇದಕ್ಕೆ ಕುಮ್ಮಕ್ಕು ಕೊಟ್ಟಿದ್ದಾರೆ ಅಂತ ಆರೋಪಿಸಿದ್ದಾರೆ. ಜೊತೆಗೆ ನಾವು ಸದಾಶಿವ ವರದಿಯಂತೆRead More →

masthmagaa.com: ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದ ಜೆಡಿಎಸ್‌ ಶಾಸಕ ಎಸ್‌.ಆರ್‌ ಶ್ರೀನಿವಾಸ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ವಿಧಾನಸಭೆಯ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದು, ಸ್ವ ಇಚ್ಛೆಯಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತಿದ್ದೇನೆ ಅಂತ ಹೇಳಿದ್ದಾರೆ. ಜೆಡಿಎಸ್‌ನಿಂದ ದೂರ ಆಗಿರೋ ಶ್ರೀನಿವಾಸ್‌ ಸದ್ಯದಲ್ಲೇ ಕಾಂಗ್ರೆಸ್‌ ಸೇರಲಿದ್ದು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಲಿದ್ದಾರೆ ಅಂತ ಹೇಳಲಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಭ್ರಷ್ಟಾಚಾರ, ಹಾಗೂ ಅಕ್ರಮ ಹಣ ಪತ್ತೆ ಕೇಸಲ್ಲಿ ಚೆನ್ನಗಿರಿ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪರನ್ನ ಲೋಕಾಯುಕ್ತ ಅರೆಸ್ಟ್‌ ಮಾಡಿದೆ. ಮಗನ ಹತ್ರ ಕೋಟಿ ಕೋಟಿ ಹಣ ಸಿಕ್ಕಿದ್ದ ಕೇಸಲ್ಲಿ ಎ1 ಆರೋಪಿಯಾಗಿದ್ದ ಮಾಡಾಳ್‌ಗೆ ಇತ್ತೀಚಿಗಷ್ಟೇ ಹೈ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಇದನ್ನ ಪ್ರಶ್ನಿಸಿ ಲೋಕಾಯುಕ್ತ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಇಂದು ಸುಪ್ರೀಂ ಕೋರ್ಟ್‌ ಕೂಡ ಇದಕ್ಕೆ ಪ್ರತಿಕ್ರಿಯೆ ಕೊಡಿ ಅಂತ ಮಾಡಾಳ್‌ಗೆ ನೋಟಿಸ್‌ ಕೊಟ್ಟಿತ್ತು. ಈ ಬೆಳವಣಿಗೆಯ ಮಧ್ಯೆದಲ್ಲೇ ಮಾಡಾಳ್‌ ಅವರ ಜಾಮೀನು ಅರ್ಜಿಯನ್ನ ಹೈ ಕೋರ್ಟ್‌ ಕೂಡ ವಜಾ ಮಾಡಿತ್ತು. ಕೂಡಲೇ ಮಾಡಾಳ್‌ ಹಿಂದೆ ಬಿದ್ದಿದ್ದ ಲೋಕಾಯುಕ್ತ ಸೇನೆ ಕೊನೆಗೂ ಅವರನ್ನ ಖೆಡ್ಡಾಗೆ ಕೆಡವಿದೆ. ಜಾಮೀನು ಅರ್ಜಿ ವಜಾ ಆಗಿದೆ ಅಂತ ಗೊತ್ತಾದ್ಮೇಲೆ ಮಾಡಾಳ್‌ ನಾಪತ್ತೆಯಾಗಿದ್ದಾರೆ ಅಂತ ಕೂಡ ಸುದ್ದಿ ಬರ್ತಾಯಿತ್ತು. ಇಷ್ಟಾದ್ರೂ ಲೋಕಾಯುಕ್ತ ಬೀಸಿದ ಬಲೆಗೆ ಮಾಡಾಳ್‌ ಮಗುಚಿ ಬಿದ್ದಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಸಿಎಂ ಬೊಮ್ಮಾಯಿ ಶಕುನಿ ಇದ್ದಂತೆ, ಕೊನೆಗೆ ಪಾಂಡವರೇ ಗೆಲ್ಲೋದು. ರಾಜ್ಯದಲ್ಲಿ ಭ್ರಷ್ಟ ಸರ್ಕಾರವಿದೆ. ಈ ಸರ್ಕಾರ SC/ST., ಅಲ್ಪಸಂಖ್ಯಾತರಿಗೆ ಮೋಸ ಮಾಡಿದೆ ಅಂತ ಕಾಂಗ್ರೆಸ್ ನಾಯಕ ರಣದೀಪ್‌ ಸುರ್ಜೇವಾಲ ಟೀಕಿಸಿದ್ದಾರೆ. 90 ದಿನಗಳಲ್ಲಿ 3 ಬಾರಿ ಮೀಸಲಾತಿಯನ್ನ ಬದಲಾವಣೆ ಮಾಡಿದ್ದಾರೆ. ರಾಜ್ಯವನ್ನ ಲೂಟಿ ಮಾಡ್ತಿದಾರೆ. ಅದು 40% ಕಮಿಷನ್‌ ವಿಚಾರದಲ್ಲಿ ಗೊತ್ತಾಗಿದೆ ಅಂತ ಬೊಮ್ಮಾಯಿ ವಿರುದ್ದ ಆರೋಪ ಮಾಡಿದ್ದಾರೆ. ಸುರ್ಜೇವಾಲ ಹೇಳಿಕೆಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಮಾತನಾಡಿ, ಬಸವರಾಜ ಬೊಮ್ಮಾಯಿ ಕಾಮನ್‌ಮ್ಯಾನ್‌, ಸಿಂಪಲ್‌ಮ್ಯಾನ್‌. ಕಾಂಗ್ರೆಸ್‌ ನಾಯಕರ ಇಂಥ ಅವಹೇಳನಕಾರಿ ಹೇಳಿಕೆ ಅವರ ಪಕ್ಷದ ವರ್ತನೆ ತೋರಿಸುತ್ತೆ. ಎಸ್‌ಟಿ ಸಮುದಾಯದ ಹಿರಿಯ ನಾಯಕ ಶ್ರೀರಾಮುಲು ಅವ್ರಿಗೆ ಸಿದ್ದರಾಮಯ್ಯ ಪೆದ್ದ ಅಂತ ಹೇಳಿದ್ರು. ಈಗ ಬೊಮ್ಮಾಯಿಗೆ ಅಪಮಾನ ಮಾಡ್ತಿದಾರೆ. ಒಬ್ಬ ಮುಖ್ಯಮಂತ್ರಿಗೆ ನೀಡುವ ಅವಹೇಳನಕಾರಿ ಹೇಳಿಕೆ ಕರ್ನಾಟಕದ ಜನರಿಗೆ ಮಾಡಿದ ಅವಮಾನ. ಹೀಗಾಗಿ ರಾಜ್ಯದ ಜನ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ತಕ್ಕ ಉತ್ತರ ಕೊಡುತ್ತಾರೆ ಎಂದಿದ್ದಾರೆ. ಇತ್ತ ಸುರ್ಜೇವಾಲ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ,Read More →