ನೇಹಾ ಹತ್ಯೆ ಕೇಸ್:‌ ನೇಹಾಳ ಮನೆಗೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ!

masthmagaa.com:

ಹುಬ್ಬ‍ಳ್ಳಿಯ ನೇಹಾ ಹತ್ಯೆ ಕೇಸ್‌ನ ತನಿಖೆ ಚುರುಕುಗೊಳಿಸಿರೊ ಸಿಐಡಿ ತಂಡ  ಮೃತ ನೇಹಾಳ ಮನೆಗೆ ಭೇಟಿ ನೀಡಿ, ಅವ್ರ ತಂದೆ ನಿರಂಜನ್‌ ಹಾಗೂ ತಾಯಿ ಗೀತಾ ಹಿರೇಮಠ್‌ ಅವ್ರ ಕೇಸ್‌ಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನ ಕಲೆ ಹಾಕಿದೆ. ಇತ್ತ ಸಿಎಂ ಸಿದ್ರಾಮಯ್ಯ ಕೂಡ ನೇಹಾಳ ನಿವಾಸಕ್ಕೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಇನ್ನು ನೇಹಾ ತಂದೆ ನಿರಂಜನ್‌ ಮಾತಾಡಿ, ನನ್ನ ಪ್ರಾಣ ಹೋದ್ರೂ ಪರ್ವಾಗಿಲ್ಲ, ಫಯಾಜ್‌ನ ಪ್ರಾಣ ತಗೊಳುತ್ತೇನೆ. ನನ್ನ ಮಗಳ ಶವದ ಮೇಲೆ ಶಪಥ ಮಾಡಿದ್ದೇನೆ. ಫಯಾಜ್‌ಗೆ ಸಹಾಯ ಮಾಡಿದ್ವರನ್ನ ಬಂಧಿಸಬೇಕು ಅಂತ ಆಗ್ರಹಿಸಿದ್ದಾರೆ.

-masthmagaa.com

Contact Us for Advertisement

Leave a Reply