ಜೆಡಿಎಸ್‌ಗೆ ಕೆಲ ಬಿಜೆಪಿ ನಾಯಕರು ಸಹಕಾರ ನೀಡ್ತಿಲ್ಲ- ದೇವೇಗೌಡ!

masthmagaa.com:

ಕೆಲ ಬಿಜೆಪಿ ನಾಯಕರು ಜೆಡಿಎಸ್‌ಗೆ ಸರಿಯಾಗಿ ಸಹಕಾರ ನೀಡ್ತಿಲ್ಲ ಅಂತ ಮಾಜಿ ಪ್ರಧಾನಿ ದೇವೇಗೌಡ ಅಸಮಾಧಾನ ಹೊರಹಾಕಿದ್ದಾರೆ. ಅವರು ನಮಗೆ ಸಪೋರ್ಟ್‌ ಮಾಡ್ದೆ ಇದ್ರು ಕೂಡ ಜೆಡಿಎಸ್‌ ಅಭ್ಯರ್ಥಿಗಳ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬಿರೋದಿಲ್ಲ ಅಂತಲೂ ಹೇಳಿದ್ದಾರೆ. ಅಂದ್ಹಾಗೆ ಹಾಸನದಲ್ಲಿ ಪ್ರಜ್ವಲ ರೇವಣ್ಣಗೆ ಪ್ರೀತಂಗೌಡ ಮತ್ತು ಮಂಡ್ಯದಲ್ಲಿ ಕುಮಾರಸ್ವಾಮಿಗೆ ಸಂಸದೆ ಸಮಲತಾ ಪ್ರಚಾರದ ವೇಳೆ ಸರಿಯಾಗಿ ಸಹಕಾರ ಕೊಡ್ತಿಲ್ಲ ಅನ್ನೋ ಆರೋಪ ಇದ್ದು ಇದಕ್ಕೆ ದೇವೇಗೌಡರು ಈ ರೀತಿ ಅಸಮಾಧಾನ ಹೊರಹಾಕಿದ್ದಾರೆ ಅಂತೇಳಲಾಗ್ತಿದೆ. ಇತ್ತ ಈ ವಿಚಾರವಾಗಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಇದು ರಾಜಕೀಯ ಉಹಾಪೋಹ, ಕಾಂಗ್ರೆಸ್‌ ಕುತಂತ್ರ.. ಜೆಡಿಎಸ್‌ ಹಾಗೂ ಬಿಜೆಪಿ ಅಭ್ಯರ್ಥಿಗಳ ಗೆಲವಿಗಾಗಿ ಉಭಯ ಪಕ್ಷಗಳ ಸ್ಥಳೀಯ ನಾಯಕರು ಶ್ರಮಿಸ್ತಿದ್ದಾರೆ ಅಂತ ವಿಜಯೇಂದ್ರ ಹೇಳಿದ್ದಾರೆ.

 

-masthmagaa.com

Contact Us for Advertisement

Leave a Reply