ರಾಮೇಶ್ವರಂ ಕೆಫೆ:‌ ಬಂಧಿತರ NIA ಕಸ್ಟಡಿ ಏಪ್ರಿಲ್‌ 29 ವರೆಗೆ ವಿಸ್ತರಣೆ!

masthmagaa.com:

ಇನ್ನು ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಕೂಡ ಒಂದಷ್ಟು ಡೆವಲಪ್‌ಮೆಂಟ್‌ ಆಗಿವೆ. ಅರೆಸ್ಟ್‌ ಆಗಿರೊ ಇಬ್ಬರು ಪ್ರಮುಖ ಆರೋಪಿಗಳ NIA ಕಸ್ಟಡಿ ಅವಧಿಯನ್ನ ಏಪ್ರಿಲ್‌ 29ವರೆಗೆ ವಿಸ್ತರಣೆ ಮಾಡಿ ಅಂತ ಬೆಂಗಳೂರಿನ NIA ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ಆರೋಪಿಗಳಾದ ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವಿರ್ ಹುಸೇನ್ ಶಾಜೀಬ್​ರನ್ನು ಏಪ್ರಿಲ್‌ 12ರಂದು ಪಶ್ಚಿಮ ಬಂಗಾಳದಲ್ಲಿ NIA ತಂಡ ಅರೆಸ್ಟ್‌ ಮಾಡಿತ್ತು. ಬಳಿಕ ಬೆಂಗಳೂರಿಗೆ ಕರೆ ತಂದು ಕೋರ್ಟ್‌ಗೆ ಮುಂದೆ ಹಾಜರು ಪಡಿಸಲಾಗಿತ್ತು. 10 ದಿನ ತಮ್ಮ ಕಸ್ಟಡಿಗೆ ಪಡೆದಿತ್ತು. ಈಗ ಅವಧಿ ಮುಗಿದ ಹಿನ್ನಲೆ ಕೋರ್ಟ್‌ಗೆ ಹಾಜರುಪಡಿಸಿದಾಗ ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನ ಮತ್ತೆ ವಿಸ್ತರಣೆ ಮಾಡಲಾಗಿದೆ.

-masthmagaa.com

Contact Us for Advertisement

Leave a Reply