masthmagaa.com:
ಲೋಕಸಭೆ ಚುನಾವಣೆ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ನಡೆಸಿದ್ದಾರೆ. ವಿಜಯಪುರ ಹಾಗೂ ಬಳ್ಳಾರಿ ಯಲ್ಲಿ ಪ್ರಚಾರ ಮಾಡಿದʻದೇಶದ ಪ್ರತಿಯೊಬ್ಬ ವ್ಯಕ್ತಿ ಮತ್ತು ಕುಟುಂಬ ನೆಮ್ಮದಿಯಿಂದ ಬಾಳುವಂತಹ ವಾತಾವರಣವನ್ನ ಕಾಂಗ್ರೆಸ್ ಹಾಗೂ INDIA ಕೂಟ ತರಲಿದೆ. ಸಂವಿಧಾನದ ಆಶಯ ಹಾಗೂ ಬಸವೇಶ್ವರರ ಚಿಂತನೆಗಳನ್ನ ಜಾರಿಗೊಳಿಸಲು ನಮ್ಮ ಪಕ್ಷ ಒತ್ತು ನೀಡುತ್ತೆ. ಆದ್ರೆ ಮೋದಿ ಸೇರಿದಂತೆ ಬಿಜೆಪಿ ನಾಯಕರು ಸಂವಿಧಾನವನ್ನ ಬದಲಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ನಾಶ ಮಾಡಲು ಬಯಸ್ತಿದ್ದಾರೆ. ಅದಕ್ಕೆ ನೀವು ಯಾವುದೇ ಕಾರಣಕ್ಕೂ ಅವಕಾಶ ನೀಡ್ಬಾರ್ದು ಅಂತ ರಾಹುಲ್ ಹೇಳಿದ್ದಾರೆ.
-masthmagaa.com
Contact Us for Advertisement