masthmagaa.com:
ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಾಗಿ ಒರಿಸ್ಸಾದಲ್ಲೂ ಭಾರೀ ರಾಜಕೀಯ ಶುರುವಾಗಿದೆ. ಈಗ ಬಿಜೆಪಿ ಪರ ಪ್ರಚಾರ ನಡೆಸ್ತಿರೊ ಪ್ರಧಾನಿ ಮೋದಿ ನವೀನ್ ಪಟ್ನಾಯಕ್ ವಿರುದ್ದ ಬೆಂಕಿ ಉಗುಳಿದ್ದಾರೆ. ʻʻ ಸ್ವಾತಂತ್ರ್ಯ ಬಂದು ಏಳು ದಶಕಗಳಾದ್ವು. ಇಷ್ಟು ಶ್ರೀಮಂತ ರಾಜ್ಯವನ್ನ ಮೊದ್ಲು ಕಾಂಗ್ರೆಸ್ ಲೂಟಿ ಮಾಡ್ತು. ಈಗ ನವೀನ್ ಪಟ್ನಾಯಕ್ ಅವರ ಬಿಜೆಡಿ ಲೂಟಿ ಮಾಡ್ತಿದೆ…ಬಿಜೆಡಿಯ ಸಣ್ಣ ಸಣ್ಣ ನಾಯಕರು ದೊಡ್ಡ ದೊಡ್ಡ ಬಂಗಲೆಗಳಲ್ಲಿ ವಾಸ ಮಾಡ್ತಿದ್ದಾರೆ. ಖುದ್ದು ನವೀನ್ ಪಟ್ನಾಯಕ್ ಅವ್ರ ಸ್ವಕ್ಷೇತ್ರ ಹಿಂಜಿಲಿಯಿಂದಲೆ ಕಾರ್ಮಿಕರು ಬೇರೆ ರಾಜ್ಯಗಳಿಗೆ ವಲಸೆ ಹೋಗ್ತಾರೆ. ಇದೇನಾ ಅವರ ಆಡಳಿತಾ? ನವೀನ್ ಆಡಳಿತದಲ್ಲಿ ಭ್ರಷ್ಟಾಚಾರ ಅನ್ನೋದು ತಾಂಡವ ಆಡ್ತಿದೆ, ಒಡಿಶಾಗೆ ಒಡಿಯಾ ಭಾಷೆ ಮತ್ತು ಸಂಸ್ಖೃತಿ ಗೊತ್ತಿರೋರು ಮಾತ್ರ ಸಿಎಂ ಆಗಬೇಕು, ಜೂನ್ 4ಕ್ಕೆ ನವೀನ್ ಸರ್ಕಾರ ಎಂಡ್ ಆಗುತ್ತೆ ಅಂತ ಮೋದಿ ಹೇಳಿದ್ದಾರೆ. ಇತ್ತ ಇದಕ್ಕೆ ತಿರುಗೇಟು ಕೊಟ್ಟಿರೋ ನವೀನ್ ʻʻ ಪ್ರಧಾನಿಯದ್ದು ಹಗಲು ಕನಸು, ನಾವು ವಿಧಾನಸಭೆ ಲೋಕಸಭೆ ಎರಡೂ ಎಲೆಕ್ಷನ್ ಗೆಲ್ತೀವಿ ಅಂತ ಹೇಳಿದ್ದಾರೆ. ಅಂದ್ಹಾಗೆ ಬಿಜೆಪಿ ಮತ್ತು ಬಿಜೆಡಿ ನಡುವೆ ಈ ಸಲ ಮೈತ್ರಿ ನಡೆಯುತ್ತೆ ಅಂತೇಳಲಾಗಿತ್ತು. ಆದ್ರೆ ಕೊನೇ ಕ್ಷಣದಲ್ಲಿ ಆ ಮೈತ್ರಿ ಮಾತುಕತೆ ಮುರಿದು ಬಿದ್ದಿತ್ತು. ಈಗ ಅದು ಸಮರಕಣವಾಗಿ ಮಾರ್ಪಾಡಾಗಿದೆ.
-masthmagaa.com
Contact Us for Advertisement