masthmagaa.com:
ರಾಮ ಮಂದಿರ ವಿಚಾರವಾಗಿ ಬಾಲಿವುಡ್ ನಟ, TMC ಸಂಸದ ಶತ್ರುಘ್ನ ಸಿನ್ಹಾ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ. ಅಯೋಧ್ಯೆಯಲ್ಲಿ ಜನವರಿ 22ರ ಪ್ರಾಣ ಪ್ರತಿಷ್ಠಾಪನೆ ಬಳಿಕ ಭಕ್ತರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಆರಂಭದಲ್ಲಿ 3-4 ಲಕ್ಷ ಜನ ದಿನ ನಿತ್ಯ ರಾಮ ಮಂದಿರಕ್ಕೆ ಭೇಟಿ ನೀಡ್ತಿದ್ರು. ಆದ್ರೆ ಈಗ ಆ ಸಂಖ್ಯೆ ಸಾವಿರಗಳಿಗೆ ಕುಸಿದು 10-20 ಸಾವಿರ ಜನ ಮಾತ್ರ ಮಂದಿರಕ್ಕೆ ಹೋಗ್ತಿದ್ದಾರೆ. ಇದನ್ನ ಹೇಳಲು ನನಗೆ ತುಂಬಾ ದುಃಖ ಆಗುತ್ತೆ. ರಾಮ ಮಂದಿರ ವಿಚಾರವಾಗಿ ಬಿಜೆಪಿ ದೊಡ್ಡ ನಾಟಕವನ್ನೇ ಸೃಷ್ಟಿಸಿದೆ ಅಂತ ಸಿನ್ಹಾ ಆಕ್ರೋಶ ಹೊರ ಹಾಕಿದ್ದಾರೆ.
-masthmagaa.com
Contact Us for Advertisement