masthmagaa.com:
ಭಾರತದಲ್ಲಿ ಪ್ರಜಾಪ್ರಭುತ್ವ ಬಲವಾಗಿ ಬೇರೂರಿದೆ ಮತ್ತು ಸರಿಯಾಗಿ ಕೆಲಸ ಮಾಡ್ತಿದೆ ಅನ್ನೊದಕ್ಕೆ ಭಾರತದ ರಾಜಕಾರಣ ಹಾಗೂ ಭಾರತೀಯ ಕ್ರಿಕೆಟ್ ತಂಡ ಉತ್ತಮ ಉದಾಹರಣೆ ಅಂತ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಇಂಡೋ- ಅಮೆರಿಕನ್ ಆರ್ಟ್ಸ್ ಕೌನ್ಸಿಲ್ (IAAC)ನ ಉಪಾಧ್ಯಕ್ಷ ರಾಕೇಶ್ ಕೌಲ್ ಜೊತೆಗಿನ ಮಾತುಕತೆಯಲ್ಲಿ ಈ ರೀತಿ ಹೇಳಿದ್ದಾರೆ. `ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ’ ಪುಸ್ತಕ ಚರ್ಚೆಯಲ್ಲಿ ಭಾರತೀಯ ಪ್ರಜಾಪ್ರಭುತ್ವದಲ್ಲಿ ಒಳಗೊಳ್ಳುವಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಜೈಶಂಕರ್ ಉತ್ತರಿಸಿದ್ದಾರೆ. ಭಾರತದ ಸಂಸತ್, ಕ್ಯಾಬಿನೆಟ್ ಹಾಗೂ ರಾಜಕೀಯದಲ್ಲಿರೊ ಜನರು 20-30 ವರ್ಷದ ಹಿಂದೆ ಎಲ್ಲೆಲ್ಲಿದ್ರು ನೀವೆ ಕೇಳಿ. ಆಗಿನ ಟೈಮಲ್ಲಿ ನಮ್ಮ ರಾಜಕಾರಣ ಎಷ್ಟು ಕಿರಿದಾಗಿತ್ತು. ಈಗ ಎಲ್ಲ ಬದಲಾಗಿದೆ. ಮೋದಿ ಅವ್ರು ಈ ಬದಲಾವಣೆ ತಂದಿದ್ದಾರೆ. ಖುದ್ದು ಅವರೇ ಈ ಬದಲಾವಣೆಯ ಉತ್ಪನ್ನ. ಅಂದ್ರೆ ಸಾಮಾನ್ಯ ವ್ಯಕ್ತಿ ದೇಶದ ಪ್ರಧಾನಿ ಆಗಿದ್ದಾರೆ. ಅಷ್ಟರ ಮಟ್ಟಿಗೆ ದೇಶ ಬದಲಾಗಿದೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement