ಸುವರ್ಣ ಸೌಧ ಇರೋದು ಉತ್ತರದ ಜಿಲ್ಲೆಗಳ ಸಮಸ್ಯೆಗಳ ಚರ್ಚೆಗಾಗಿ: ಲಕ್ಷ್ಮಣ್‌ ಸವದಿ

masthmagaa.com:

ಇನ್ನು ಬೆಳಗಾವಿಯಲ್ಲಿ ಅಧಿವೇಶನ ನಡೀತಿರೋದು ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋಕಲ್ಲ, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗಾಗಿ ಅಂತ ಆಡಳಿದ ಪಕ್ಷದ ಶಾಸಕ ಲಕ್ಷ್ಮಣ್‌ ಸವದಿ ಕಿಡಿಕಾರಿದ್ದಾರೆ. ಮಂಗಳವಾರ ಸದನದಲ್ಲಿ ಬ್ರ್ಯಾಂಡ್‌ ಬೆಂಗಳೂರು ಬಗ್ಗೆ ಚರ್ಚೆ ನಡೆದಿತ್ತು. ಇದ್ರಿಂದ್ಲೆ ಶಾಸಕ ಸವದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸ್ಪೀಕರ್‌ ಯುಟಿ ಖಾದರ್‌ ಲಕ್ಷ್ಮಣ್‌ ಸವದಿ ಅವರಂತೆ ಉತ್ತರ ಕರ್ನಾಟಕ ಭಾಗದ ಇತರ ಶಾಸಕರು ತಮ್ಮ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಮಾತನಾಡಿ ಇಚ್ಛಾಶಕ್ತಿಯನ್ನ ಪ್ರದರ್ಶಿಸಬೇಕು ಅಂದಿದ್ದಾರೆ.

-masthmagaa.com

Contact Us for Advertisement

Leave a Reply