ಪೇದೆಯನ್ನ ಕೊಂದ ನಿಹಾಂಗ್‌ ಸಿಖ್‌ ಗುಂಪು; 5 ಜನರ ಬಂಧನ!

masthmagaa.com:

ಪಂಜಾಬ್‌ನಲ್ಲಿ ನಡೆದ ಎರಡು ನಿಹಾಂಗ್‌ ಸಿಖ್‌ ಗುಂಪಿನ ನಡುವೆ ನಡೆದ ಗಲಾಟೆ ಕೇಸ್‌ಗೆ ಸಂಬಂಧಿಸಿದಂತೆ 5 ಜನ ಆರೋಪಿಗಳನ್ನ ಬಂಧಿಸಲಾಗಿದೆ. ನಿನ್ನೆ ನಡೆದ ಈ ಗಲಭೆಯನ್ನ ನಿಲ್ಲಿಸಲು ಹೋದ ಓರ್ವ ಪೊಲೀಸ್‌ ಪೇದೆ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನ ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಈ ದಾಳಿಗೆ ಬಲಿಯಾದ ಪೊಲೀಸ್‌ ಪೇದೆ ಕುಟುಂಬಕ್ಕೆ 2 ಕೋಟಿ ರೂಪಾಯಿ ಪರಿಹಾರ ನೀಡೋದಾಗಿ ಪಂಜಾಬ್‌ ಸಿಎಂ ಭಗವಂತ್‌ ಸಿಂಗ್‌ ಮಾನ್‌ ಘೋಷಿಸಿದ್ದಾರೆ. ಅಂದ್ಹಾಗೆ ಪಂಜಾಬ್‌ನ ಕಪುರ್ಥಾಲದಲ್ಲಿರೋ ಗುರುದ್ವಾರವೊಂದನ್ನ ತಮ್ಮ ಕೈವಶ ಮಾಡ್ಕೋಬೇಕು ಅಂತ ಈ ಎರಡು ಗುಂಪುಗಳ ನಡುವೆ ಕಳೆದ ಕೆಲ ದಿನಗಳಿಂದ ಜಗಳ ನಡೀತಿತ್ತು. ಇವ್ರ ನಡುವಿನ ಗಲಾಟೆ ನಿಲ್ಲಿಸೋದಕ್ಕೆ ಹೋದ ಪೊಲೀಸರ ಮೇಲೆ ನಿಹಾಂಗ್‌ ಸಿಖ್‌ ಗುಂಪು ದಾಳಿ ನಡೆಸಿತ್ತು.

-masthmagaa.com

Contact Us for Advertisement

Leave a Reply