masthmagaa.com:
ರಾಜಸ್ಥಾನ ಕಾಂಗ್ರೆಸ್ನಲ್ಲಿರೋ ಭಿನ್ನಮತ ಮತ್ತೊಂದು ಹಂತ ತಲುಪಿದೆ. ರೆಬೆಲ್ ನಾಯಕ ಸಚಿನ್ ಪೈಲೆಟ್ ತಮ್ಮ ವಿರೋಧಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರದ ವಿರುದ್ದವೇ ರ್ಯಾಲಿ ಮಾಡಿದ್ದಾರೆ. ಭ್ರಷ್ಟಾಚಾರ ಹಾಗೂ ಶಿಕ್ಷಕರ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ವರಿಷ್ಠರ ಮೇಲೆ ಒತ್ತಡ ಹೇರೋಕೆ ಸಚಿನ್ ಪೈಲೆಟ್ ಯತ್ನ ಮಾಡಿದ್ದು ಈಗ ಜನ ಸಂಘರ್ಷ ಯಾತ್ರೆ ಆರಂಭಿಸಿದ್ದಾರೆ. ಅಜ್ಮೀರದಿಂದ ಆರಂಭವಾಗಲಿರುವ ಈ ಯಾತ್ರೆ ಐದು ದಿನಗಳ ಕಾಲ ನಡೆಯಲಿದ್ದು, ಜೈಪುರದಲ್ಲಿ ಅಂತ್ಯವಾಗಲಿದೆ. ಇದು ಭ್ರಷ್ಟಾಚಾರದ ವಿರುದ್ದ ಮಾಡ್ತಿರೋ ಹೋರಾಟ ಅಂತ ಸಚಿನ್ ಪೈಲೆಟ್ ಗುಡುಗಿದ್ದಾರೆ.
-masthmagaa.com
Contact Us for Advertisement