masthmagaa.com:
ಜೈಲಿನಿಂದ ಹೊರಬರ್ತಿದ್ದಂತೆ ಫುಲ್ ಆಕ್ಟಿವ್ ಬಟನ್ ಒತ್ತಿಕೊಂಡಿರೋ ದಿಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಚುನಾವಣೆ ಪ್ರಚಾರಕ್ಕೆ ಧುಮುಕಿದಾರೆ. ಈಗ ಆಪ್ ಪಕ್ಷದಿಂದ 10 ಗ್ಯಾರಂಟಿಗಳನ್ನ ಅನೌನ್ಸ್ ಮಾಡಿದ್ದಾರೆ. I.N.D.I.A ಕೂಟ ಅಧಿಕಾರಕ್ಕೆ ಬಂದ್ರೆ ಇದನ್ನೆಲ್ಲಾ ಪೂರೈಸ್ತೀವಿ ಅಂತ ಹೇಳಿದ್ದಾರೆ. ಈ ಪೈಕಿ, ಮೊದಲನೇಯದ್ದು, ದೇಶಾದ್ಯಂತ 24/7 ವಿದ್ಯುತ್ ಸೌಲಭ್ಯ ಹಾಗೂ ಬಡವರಿಗೆ 200 ಯುನಿಟ್ಗಳಷ್ಟು ಉಚಿತ ವಿದ್ಯುತ್ ನೀಡಲಾಗುವುದು. ಎರಡನೇಯದ್ದು, ಎಲ್ಲರಿಗೂ ಉಚಿತ ಹಾಗೂ ಒಳ್ಳೆಯ ಶಿಕ್ಷಣ . ಮೂರನೇಯದ್ದು, ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಹೆಜ್ಜೆ ಇಡೋದು. ದೇಶದ ಎಲ್ಲಾ ನಗರ ಹಾಗೂ ಹಳ್ಳಿಗಳಲ್ಲಿ ಮೊಹಲ್ಲಾ ಕ್ಲಿನಿಕ್ ನಿರ್ಮಿಸಿ…ದೇಶದ ಎಲ್ಲಾ ಪ್ರಜೆಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತೆ ಅಂತ ಕೇಜ್ರಿವಾಲ್ ತಮ್ಮ ಗ್ಯಾರೆಂಟಿಯಲ್ಲಿ ಹೇಳಿದ್ದಾರೆ.. ಅಲ್ದೆ, ಚೀನಾ ಆಕ್ರಮಣ ಮಾಡಿಕೊಂಡಿರೋ ಪ್ರದೇಶಗಳನ್ನ ದೇಶಕ್ಕೆ ಸೇರಿಸಿಕೊಳ್ತಿವಿ. ಈ ಕೆಲಸ ಮಾಡೋಕೆ ಸೇನೆಗೆ ಯಾವ್ದೆಲ್ಲಾ ಕ್ರಮ ತೆಗೆದುಕೊಳ್ಳೋಕೆ ಇಷ್ಟವಿದೆಯೋ..ಅದನ್ನ ತೆಗೆದ್ಕೊಳ್ಳಬಹುದು. ಆರ್ಮಿಗೆ ಫುಲ್ ಅಧಿಕಾರ ಕೊಡ್ತೀವಿ. ಜೊತೆಗೆ ಬಿಜೆಪಿ ಸರ್ಕಾರದ ಅಗ್ನಿವೀರ್ ಸ್ಕೀಮ್ನ್ನ ಹಿಂಪಡೆಯಲಾಗುತ್ತೆ. MSP ಆಧಾರದ ಮೇಲೆ ರೈತರ ಬೆಳೆಗಳಿಗೆ ಸಂಪೂರ್ಣ ಬೆಲೆಯನ್ನ ಒದಗಿಸಲಾಗುತ್ತೆ. ದೆಹಲಿಗೆ ರಾಜ್ಯದ ಸ್ಥಾನಮಾನಗಳನ್ನ ನೀಡಲಾಗುತ್ತೆ. ಮುಂಬರೋ ವರ್ಷಗಳಲ್ಲಿ 2 ಕೋಟಿ ಉದ್ಯೋಗ ಅವಕಾಶವನ್ನ ಸೃಷ್ಟಿಸೋದು. ಭ್ರಷ್ಟಚಾರವನ್ನ ನಿರ್ಮೂಲನೆ ಮಾಡೋದು. ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ನಿಂದ GSTಯನ್ನ ತೆಗೆದುಹಾಕಿ, GST ಪ್ರಕ್ರಿಯೆಯನ್ನ ಸರಾಗಗೊಳಿಸೋದುʼ ಅಂತ ಕೇಜ್ರಿವಾಲ್ ಘೋಷಿಸಿದ್ದಾರೆ. ಪ್ರೆಸ್ ಕಾನ್ಪರೆನ್ಸ್ ಒಂದ್ರಲ್ಲಿ ಗ್ಯಾರಂಟಿಗಳ ಬಗ್ಗೆ ಘೋಷಿಸಿರೋ ಅರವಿಂದ್ ಕೇಜ್ರಿವಾಲ್, ಈಗ ಜನಸಾಮಾನ್ಯರು ʻಮೋದಿಯವ್ರ ಗ್ಯಾರಂಟಿʼ ಮತ್ತು ʻಕೇಜ್ರಿವಾಲ್ರ ಗ್ಯಾಂಟಿʼಯಲ್ಲಿ ಯಾವ್ದು ಬೇಕಂತ ಚೂಸ್ ಮಾಡ್ಬೇಕು ಅಂತೇಳಿದ್ದಾರೆ. ಈ ಮೂಲಕ ದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರೆಂಟಿ ಮೋದಿ ಗ್ಯಾರೆಂಟಿಗಳ ಬಳಿಕ ಈಗ ಕೇಜ್ರಿವಾಲ್ ಗ್ಯಾರೆಂಟಿ ಕೂಡ ಸೇರಿಕೊಂಡಂತಾಗಿದೆ.
-masthmagaa.com
Contact Us for Advertisement