masthmagaa.com:
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಲೈಫ್ಜರ್ನಿ ಕುರಿತು ಜೀ ಕನ್ನಡ ವಾಹಿನಿ ‘ಕರ್ನಾಟಕ ರತ್ನ’ ಎಂಬ ಕಾರ್ಯಕ್ರಮವೊಂದನ್ನು ಮಾಡಿದೆ. ಇದರಲ್ಲಿ ಅಪ್ಪು ಕುರಿತು ಹಲವಾರು ವಿಚಾರಗಳನ್ನು ತೋರಿಸಲಾಗಿದ್ದು ಶಿವಣ್ಣ, ರಾಘಣ್ಣ ಸೇರಿ ಚಿತ್ರರಂಗದ ಕಲಾವಿದರೆಲ್ಲ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದ ಪ್ರಸಾರ ಆಗೋದಕ್ಕೂ ಮೊದಲು ಜೀ ಕನ್ನಡ ವಾಹಿನಿ ಇದರ ಪ್ರೋಮೋ ಒಂದನ್ನ ಬಿಡುಗಡೆ ಮಾಡಿದೆ.
ಪ್ರೋಮೋದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಅಪ್ಪು ಗಾಗಿ ಸ್ವತಃ ತಾವೇ ಸಾಹಿತ್ಯ ಬರೆದು ಒಂದು ನೋವಿನ ಹಾಡನ್ನ ಸಮರ್ಪಿಸಿರುವ ಚುಟುಕು ವಿಡಿಯೋವನ್ನ ಝೀ ಕನ್ನಡ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಾಕಿದೆ. ಈ ಪ್ರೋಮೋ ಕೊನೆಯಲ್ಲಿ ರವಿಚಂದ್ರನ್ ಅಪ್ಪು ಫೋಟೋ ಮುಂದೆ ಮಂಡಿಯೂರಿ ನಮನ ಸಲ್ಲಿಸುತ್ತಾರೆ. ಇದರ ಫೋಟೋ ಈಗ ವೈರಲ್ ಆಗಿದೆ. ಇದರ ಜೊತೆಗೆ ಅಪ್ಪು ಬಗ್ಗೆ ರವಿಚಂದ್ರನ್ ಮಾತನಾಡಿರುವ ವಿಡಿಯೋ ಕೂಡ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಎಲ್ಲರ ವಾಟ್ಸ್ಆಪ್ ಸ್ಟೇಟಸ್ನಲ್ಲೂ ಅಪ್ಪು ಅವರ ಬಗ್ಗೆ ಮಾತನಾಡಿದ್ದ ರವಿಚಂದ್ರನ್ ವಿಡಿಯೋ ಕಾಣಿಸುತ್ತಿದ್ದು, ಈಗ ಅಪ್ಪು ಫೋಟೋ ಮುಂದೆ ರವಿಚಂದ್ರನ್ ಮಂಡಿಯೂರಿರುವ ಫೋಟೋ ಎಲ್ಲರ ಡಿಪಿ ಆಗಿದೆ.
-masthmagaa.com
Contact Us for Advertisement