ಅಪ್ಪು ಮುಂದೆ ಮಂಡಿಯೂರಿದ ಕ್ರೇಜಿ ಸ್ಟಾರ್ ರವಿಚಂದ್ರನ್: ಫೋಟೋ ವೈರಲ್!

masthmagaa.com:

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಲೈಫ್​ಜರ್ನಿ ಕುರಿತು ಜೀ ಕನ್ನಡ ವಾಹಿನಿ ‘ಕರ್ನಾಟಕ ರತ್ನ’ ಎಂಬ ಕಾರ್ಯಕ್ರಮವೊಂದನ್ನು ಮಾಡಿದೆ. ಇದರಲ್ಲಿ ಅಪ್ಪು ಕುರಿತು ಹಲವಾರು ವಿಚಾರಗಳನ್ನು ತೋರಿಸಲಾಗಿದ್ದು ಶಿವಣ್ಣ, ರಾಘಣ್ಣ ಸೇರಿ ಚಿತ್ರರಂಗದ ಕಲಾವಿದರೆಲ್ಲ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದ ಪ್ರಸಾರ ಆಗೋದಕ್ಕೂ ಮೊದಲು ಜೀ ಕನ್ನಡ ವಾಹಿನಿ ಇದರ ಪ್ರೋಮೋ ಒಂದನ್ನ ಬಿಡುಗಡೆ ಮಾಡಿದೆ.

ಪ್ರೋಮೋದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್​ ಅಪ್ಪು ಗಾಗಿ ಸ್ವತಃ ತಾವೇ ಸಾಹಿತ್ಯ ಬರೆದು ಒಂದು ನೋವಿನ ಹಾಡನ್ನ ಸಮರ್ಪಿಸಿರುವ ಚುಟುಕು ವಿಡಿಯೋವನ್ನ ಝೀ ಕನ್ನಡ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಾಕಿದೆ. ಈ ಪ್ರೋಮೋ ಕೊನೆಯಲ್ಲಿ ರವಿಚಂದ್ರನ್ ಅಪ್ಪು ಫೋಟೋ ಮುಂದೆ ಮಂಡಿಯೂರಿ ನಮನ ಸಲ್ಲಿಸುತ್ತಾರೆ. ಇದರ ಫೋಟೋ ಈಗ​ ವೈರಲ್​ ಆಗಿದೆ. ಇದರ ಜೊತೆಗೆ ಅಪ್ಪು ಬಗ್ಗೆ ರವಿಚಂದ್ರನ್​ ಮಾತನಾಡಿರುವ ವಿಡಿಯೋ ಕೂಡ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಎಲ್ಲರ ವಾಟ್ಸ್​ಆಪ್​ ಸ್ಟೇಟಸ್​ನಲ್ಲೂ ಅಪ್ಪು ಅವರ ಬಗ್ಗೆ ಮಾತನಾಡಿದ್ದ ರವಿಚಂದ್ರನ್​ ವಿಡಿಯೋ ಕಾಣಿಸುತ್ತಿದ್ದು, ಈಗ ಅಪ್ಪು ಫೋಟೋ ಮುಂದೆ ರವಿಚಂದ್ರನ್​ ಮಂಡಿಯೂರಿರುವ ಫೋಟೋ ಎಲ್ಲರ ಡಿಪಿ ಆಗಿದೆ.

-masthmagaa.com

Contact Us for Advertisement

Leave a Reply