ರಾಜ್ಯದಲ್ಲಿ ಚೊಂಬು ಗಲಾಟೆ! ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ!

masthmagaa.com:

ರಾಜ್ಯದ ರಾಜಕೀಯದಲ್ಲಿ ಚೊಂಬು ಗಲಾಟೆ ನಿಲ್ಲೋ ಲಕ್ಷಣ ಕಾಣ್ತಿಲ್ಲ. ಕರ್ನಾಟಕ ರಾಜ್ಯಕ್ಕೆ ಕೇಂದ್ರ ಸರ್ಕಾರ ತೆರಿಗೆ ಪಾಲು ಸೇರಿದಂತೆ ಇನ್ಯಾವ್ದೇ ತರಹದ ಕೊಡುಗೆ ನೀಡದೇ ಚೊಂಬು ನೀಡಿದೆ ಅಂತ ಇದೀಗ ಕಾಂಗ್ರೆಸ್‌ ಬೀದಿಗಿಳಿದಿದೆ. ʻಕೇಂದ್ರ ಸರ್ಕಾರ ತೆರಿಗೆ ಪಾಲು ಕೊಡದೇ… ರಾಜ್ಯಕ್ಕೆ ನಿರಂತರವಾಗಿ ಅನ್ಯಾಯ ಮಾಡಿದೆ. ಇದೀಗ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ ನಂತ್ರ ಎಚ್ಚೆತ್ತುಕೊಂಡಿದೆ. ರಾಜ್ಯದ ಪಾಲು ಕೇಳೋಕೂ ಸುಪ್ರೀಂ ಕೋರ್ಟ್‌ನ ಮೊರೆ ಹೋಗಬೇಕಾಗಿದೆ. ಇಂತಹ ಸರ್ಕಾರ ಯಾರಿಗ್‌ ತಾನೆ ಬೇಕುʼ ಅಂತ ದಾವಣಗೆರೆಯ ಕಾಂಗ್ರೆಸ್‌ ಜಿಲ್ಲಾ ಘಟಕ ಏಪ್ರಿಲ್‌ 27ರಂದು ಚೊಂಬು ಹಿಡಿದು ಪ್ರತಿಭಟನೆ ನಡೆಸಿದೆ.

-masthmagaa.com

Contact Us for Advertisement

Leave a Reply