masthmagaa.com: ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಅಧಿಕೃತ ಬಂಗಲೆಯನ್ನ ಖಾಲಿ ಮಾಡೋದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ. ಬಂಗಲೆ ತೆರವು ಮಾಡಲು ಕಾಲಾವಕಾಶ ಕೇಳೋದಿಲ್ಲ. ಎಲ್ಲಾ ನಿರ್ದೇಶನಗಳನ್ನ ಪಾಲಿಸ್ತೀನಿ ಅಂತ ರಾಹುಲ್‌ ಲೋಕಸಭಾ ಡೆಪ್ಯೂಟಿ ಸೆಕ್ರಟ್ರಿಗೆ ಪತ್ರ ಬರೆದಿದ್ದಾರೆ. ಇತ್ತ ರಾಹುಲ್‌ ತಮ್ಮ ಬಂಗಲೆ ಖಾಲಿ ಮಾಡಿದ್ರೆ, ತನ್ನ ತಾಯಿಯೊಂದಿಗೆ ಇರ್ತಾರೆ. ಅಥ್ವಾ ರಾಹುಲ್ ನನ್ನ ಮನೆಗೆ ಬರ್ಬೋದು. ನಾನು ಅವ್ರಿಗಾಗಿ ಮನೆ ಖಾಲಿ ಮಾಡ್ತೀನಿ ಅಂತ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಜೊತೆಗೆ ರಾಹುಲ್‌ರ ಅನರ್ಹತೆ ವಿಚಾರದಲ್ಲಿ ನಮಗೆ 19 ಪಕ್ಷಗಳು ಸಪೋರ್ಟ್‌ ಮಾಡ್ತಿವೆ ನಾವು ಈ ಬಂಗ್ಲೆ ವಿಚಾರದಲ್ಲಿ ಆತಂಕ ಪಡೋದಿಲ್ಲ ಅಂತ ಕಾಂಗ್ರೆಸ್‌ ಹೇಳಿದೆ. -masthmagaa.com Share on: WhatsAppContact Us for AdvertisementRead More →

masthmagaa.com: AICC ನಿನ್ನೆ ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನ ಪ್ರಕಟಿಸಿದೆ. ಮುಂದಿನ 3-4 ದಿನಗಳಲ್ಲಿ 2ನೇ ಪಟ್ಟಿಯನ್ನ ಪ್ರಕಟಿಸಲಾಗುತ್ತೆ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ತಿಳಿಸಿದ್ದಾರೆ. ಇನ್ನು ಮೊದಲ ಪಟ್ಟಿಯಲ್ಲಿ ಕೋಲಾರ ಹಾಗೂ ಬಾದಾಮಿ ಕ್ಷೇತ್ರಕ್ಕೆ ಟಿಕೆಟ್‌ ಘೋಷಣೆಯಾಗದ ಕಾರಣ, ಸಿದ್ದರಾಮಯ್ಯ ಅವರು ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸುತ್ತಾರಾ ಅಂತ ಕೇಳಿದ ಪ್ರಶ್ನೆಗೆ, ಇದು ಪಕ್ಷದ ಹೈಕಮಾಂಡ್‌ಗೆ ಬಿಟ್ಟದ್ದು. ಅವ್ರನ್ನೇ ಕೇಳಬೇಕು ಎಂದಿದ್ದಾರೆ. ಅಂದ್ಹಾಗೆ ಕಾಂಗ್ರೆಸ್‌ನ ಮೊದಲ ಅಭ್ಯರ್ಥಿ ಪಟ್ಟಿ ಬಗ್ಗೆ ಪ್ರತ್ಯೇಕವಾಗಿ ವರದಿಯೊಂದನ್ನ ಈಗಾಗಲೇ ಮಾಡಲಾಗಿದೆ. ಅದನ್ನ ನೀವು ನೋಡಬಹುದು. -masthmagaa.com Share on: WhatsAppContact Us for AdvertisementRead More →

masthmagaa.com: ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂಪಾಯಿ ಪಂಗನಾಮ ಹಾಕಿದ್ದಾರೆ ಅನ್ನೋ ಆರೋಪ ಹೊತ್ತಿರೋ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಹೆಸರನ್ನು ಇಂಟರ್‌ಪೋಲ್‌ ತನ್ನ ರೆಡ್‌ ಕಾರ್ನರ್‌ ನೋಟಿಸ್‌ ಪಟ್ಟಿಯಿಂದ ತೆಗೆದು ಹಾಕಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್‌ ಬಿಜೆಪಿ ಹಾಗೂ ಮೋದಿ ವಿರುದ್ದ ಆಕ್ರೋಶ ಹೊರಹಾಕಿದೆ. ವಿರೋಧ ಪಕ್ಷದವರ ವಿರುದ್ಧ ಮಾತ್ರ ED ಹಾಗೂ ಸಿಬಿಐ. ತಮ್ಮ ಮಿತ್ರರನ್ನ ಹಾಗೆ ಬಿಟ್ಟುಕಳಿಸುತ್ತಾರೆ ಅಂತ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ. ಇನ್ನು ಐದು ವರ್ಷಗಳ ಹಿಂದೆ ದೇಶದಿಂದ ಓಡಿಹೋಗಿರುವ ತಮ್ಮ ಹಳೆಯ ಸ್ನೇಹಿತನಿಗೆ ಈಗ ಸಹಾಯ ಮಾಡ್ದೆ ಮೋದಿ ಹೇಗಿರ್ತಾರೆ ಅಂತ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಬೆಂಕಿ ಉಗುಳಿದ್ದಾರೆ. ಅಂದ್ಹಾಗೆ ಇಂಟರ್‌ಪೋಲ್‌ ತಾನು ಕಾರ್ಯಾಚರಣೆ ಮಾಡ್ತಿರೋ 192 ಸದಸ್ಯ ರಾಷ್ಟ್ರಗಳಿಗೆ ಆರೋಪಿ ತಮ್ಮ ದೇಶದಲ್ಲಿ ತಲೆಮರೆಸಿಕೊಂಡಿದ್ದಲ್ಲಿ ಅವರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಸೂಚಿಸುವ ಆದೇಶ ಕೊಡುತ್ತೆ. ಇದನ್ನೇ ರೆಡ್‌ ಕಾರ್ನರ್‌ ನೋಟಿಸ್‌ ಅನ್ನೋದು. ಆ ಪಟ್ಟಿಯಿಂದ ಈಗ ಮೆಹುಲ್‌ ಚೋಕ್ಸಿಯನ್ನ ಕೈ ಬಿಡಲಾಗಿದೆ. -masthmagaa.comRead More →

masthmagaa.com: ಸಂಸತ್ತಿನ ಬಜೆಟ್‌ ಅಧಿವೇಶನದ 2ನೇ ಹಂತ ಇಂದಿನಿಂದ ಶುರುವಾಗಿದೆ. ಆದರೆ ಮೊದಲ ದಿನವೇ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಭಾರಿ ಗಲಾಟೆ ಆಗಿದೆ. ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವೆ ದೊಡ್ಡ ಮಟ್ಟದ ಗಲಾಟೆ ನಡೆದ ಹಿನ್ನೆಲೆಯಲ್ಲಿ ಉಭಯ ಸದನಗಳನ್ನ ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಲಾಗಿದೆ. ಕಲಾಪ ಶುರುವಾಗ್ತಿದ್ದಂತೆ ಬಿಜೆಪಿ ಸಂಸದರು ಹಾಗೂ ಕೇಂದ್ರ ಸಚಿವರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ದ ತಿರುಗಿಬಿದ್ರು. ರಾಹುಲ್‌ ಗಾಂಧಿ ಲಂಡನ್‌ಗೆ ತೆರಳಿ ಅಲ್ಲಿ ಭಾರತದ ಪ್ರಜಾಪ್ರಭುತ್ವವನ್ನ ಅವಹೇಳನ ಮಾಡಿದ್ದಾರೆ. ಅವರು ಕೂಡಲೇ ಕ್ಷಮೆ ಕೇಳಬೇಕು ಅಂತ ಆಗ್ರಹಿಸಿದ್ದಾರೆ. ಆದ್ರೆ ಕಾಂಗ್ರೆಸ್‌ ನಾಯಕರು ಬಿಜೆಪಿ ವಿರುದ್ದ ಹರಿಹಾಯ್ದಿದ್ರು. ರಾಹುಲ್‌ ಕ್ಷಮೆ ಕೇಳಲ್ಲ ಅಂತ ಪಟ್ಟು ಹಿಡಿದಿದ್ದಾರೆ. ಹೀಗೆ ಗಲಾಟೆ ಮುಂದುವರೆದ ಕಾರಣ ಸದನಗಳ ಕಲಾಪವನ್ನ ನಾಳೆಗೆ ಮುಂದೂಡಲಾಯ್ತು. -masthmagaa.com Share on: WhatsAppContact Us for AdvertisementRead More →

masthmagaa.com: ಕೆಪಿಸಿಸಿ ಕಾರ್ಯಾದ್ಯಕ್ಷ ಹಾಗೂ ಮಾಜಿ ಸಂಸದ ಆರ್‌ ಧ್ರುವನಾರಾಯಣ ಇಂದು ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ ಅವ್ರಿಗೆ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆದಲ್ಲೇ ಮೃತಪಟ್ಟಿದ್ದಾರೆ. ಧ್ರುವನಾರಾಯಣ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ 2 ಬಾರಿ ಸಂಸದರಾಗಿದ್ದ ಅವರು ಎರಡು ಬಾರಿ ಶಾಸಕರಾಗಿ ಕೂಡ ಆಯ್ಕೆಯಾಗಿದ್ರು. ಸಂತೇಮರಹಳ್ಳಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾಗ ಕೇವಲ ಒಂದು ಮತದ ಅಂತರದಿಂದ ಗೆದ್ದು ದೇಶಾದ್ಯಂತ ಸುದ್ದಿಯಾಗಿದ್ರು. ಇದೀಗ 61ನೇ ವಯಸ್ಸಿನಲ್ಲಿ ವಿಧಿವಶರಾಗಿದ್ದು ಖರ್ಗೆ, ರಾಹುಲ್‌ ಗಾಂಧಿ ಸಿದ್ರಾಮಯ್ಯ ಸೇರಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ನಾಳೆ ಮಧ್ಯಾಹ್ನ 2 ಗಂಟೆಗೆ ಅವರ ಹುಟ್ಟೂರು ಹೆಗ್ಗವಾಡಿಯಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಗುಜರಾತ್‌ನ ಅಹಮದಾಬಾದ್‌ನಲ್ಲಿರೊ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಬಾರ್ಡರ್‌-ಗವಾಸ್ಕರ್‌ ಟೂರ್ನಿಯ ಕೊನೆಯ ಪಂದ್ಯದ ಫರ್ಸ್ಟ್‌ ಡೇ ಮ್ಯಾಚ್‌ನ್ನ ಪ್ರಧಾನಿ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್‌ ವೀಕ್ಷಿಸಿದ್ದಾರೆ. ಈ ವೇಳೆ ಕ್ರಿಕೆಟ್‌ ಮ್ಯಾಚ್‌ ಹಾಗೂ ಉಭಯ ದೇಶಗಳ ಸಂಬಂಧಗಳ ಕುರಿತು ಅಲ್ಬನೀಸ್‌ ಮಾತಾಡಿದ್ದಾರೆ. ʻಫೀಲ್ಡ್‌ನಲ್ಲಿ ಉಭಯ ದೇಶಗಳು ವಿಶ್ವದಲ್ಲಿ ದಿ ಬೆಸ್ಟ್‌ ಟೀಂ ಆಗೋಕೆ ಸ್ಪರ್ಧೆ ಮಾಡ್ತಿವೆ. ಆದ್ರೆ ಫೀಲ್ಡ್‌ ಹೊರಗೆ ಉತ್ತಮ ಜಗತ್ತನ್ನ ನಿರ್ಮಿಸಲು ಭಾರತ-ಆಸ್ಟ್ರೇಲಿಯಾ ಪರಸ್ಪರ ಸಹಕರಿಸುತ್ತಿವೆʼ ಅಂತ ಹೇಳಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ರಧಾನಿ ಮೋದಿ ಕ್ರಿಕೆಟ್‌ ವೀಕ್ಷಣೆಯನ್ನ ಕಾಂಗ್ರೆಸ್‌ ಟೀಕಿಸಿದೆ. ತಮ್ಮದೇ ಅವಧಿಯಲ್ಲಿ ತಮ್ಮ ಹೆಸರನ್ನೇ ಇಟ್ಟಿರೋ ಸ್ಟೇಡಿಯಂನಲ್ಲಿ ಪ್ರಚಾರ ಗಿಟ್ಟಿಸ್ಕೊತ್ತಿದ್ದಾರೆ ಅಂತ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್ ವ್ಯಂಗ್ಯ ಮಾಡಿದ್ದಾರೆ. ಇತ್ತ ದೇಶೀಯವಾಗಿ ನಿರ್ಮಿಸಿರೊ INS ವಿಕ್ರಾಂತ್‌ ಮೊದಲ ವಿದೇಶಿ ಪ್ರಧಾನಿಗೆ ವೆಲ್‌ಕಮ್ ಮಾಡಿದೆ. ಅಲ್ಬನೀಸ್‌ ಅವ್ರಿಗೆ ವಿಕ್ರಾಂತ್‌ ವಿಮಾನವಾಹಕ ನೌಕೆಯಲ್ಲಿ ಗಾರ್ಡ್‌ ಆಫ್‌ ಆನರ್‌ ನೀಡಿ ಗೌರವಿಸಲಾಗಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಕ್ರೆಡಿಟ್‌ ವಾರ್‌ಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಬಳಿಕ ಈಗ ಜೆಡಿಎಸ್‌ ಕೂಡ ಎಂಟ್ರಿಯಾಗಿದೆ. ಹೆದ್ದಾರಿ ನಿರ್ಮಿಸುವಲ್ಲಿ ಜೆಡಿಎಸ್‌ ಪಾತ್ರವೂ ಇದೆ ಅಂತ ಜೆಡಿಎಸ್‌ ಶಾಸಕ ಪುಟ್ಟರಾಜು ಹೇಳಿದ್ದಾರೆ. ನಾನು ಸಂಸದನಾಗಿದ್ದಾಗ ಈ ಯೋಜನೆಗೆ ದೆಹಲಿಯಲ್ಲಿ ಎಷ್ಟು ಹೋರಾಟ ಮಾಡಿದ್ದೀನಿ ಅಂತ ಪ್ರತಾಪ ಸಿಂಹ ಬೇಕಿದ್ರೆ ಹೋಗಿ ಯಡಿಯೂರಪ್ಪ ಅವರನ್ನ ಕೇಳಲಿ. ಮೈತ್ರಿ ಸರ್ಕಾರ ಇದ್ದಾಗ ಕುಮಾರಸ್ವಾಮಿ, ರೇವಣ್ಣ ನಿಂತುಕೊಂಡು ಓಡಾಡಿ, ಯೋಜನೆಯ ಅಲೈನ್‌ಮೆಂಟ್ ಮಾಡಿ ಅನುಮೋದನೆ ನೀಡದಿದ್ದರೆ ಹೆದ್ದಾರಿ ಹೇಗೆ ಆಗುತ್ತಿತ್ತು? ಕೇಂದ್ರದಲ್ಲಿ ಯಾವುದೇ ಸರ್ಕಾರ ಇದ್ದರೂ ಸಹಕಾರ ಕೊಡಲೇಬೇಕಿತ್ತು.ಹೀಗಾಗಿ ಇದು ಕೇವಲ ಬಿಜೆಪಿಯಿಂದ ಮಾತ್ರ ಆಗಿಲ್ಲ ಅಂತ ಪುಟ್ಟರಾಜು ವಾಗ್ದಾಳಿ ಮಾಡಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: ಭ್ರಷ್ಟಾಚಾರವನ್ನ ವಿರೋಧಿಸಿ ರಾಜ್ಯ ಕಾಂಗ್ರೆಸ್‌ ಮಾರ್ಚ್‌ 9ನೇ ತಾರೀಖು ಅಂದ್ರೆ ನಾಳೆ ಬೆಳಗ್ಗೆ 9 ರಿಂದ 11 ಗಂಟೆಯ ವರೆಗೆ ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿತ್ತು. ಆದ್ರೆ ಈಗ ಆ ಬಂದ್‌ ರದ್ದು ಮಾಡಿದ್ದೀವಿ ಅಂತ ಹೇಳಿಕೆ ಬಿಡುಗಡೆ ಮಾಡಿದೆ. ದ್ವಿತೀಯ ಪಿಯು ಪರೀಕ್ಷೆ ಆರಂಭವಾಗ್ತಿದೆ. ಹೀಗಾಗಿ ವಿದ್ಯಾರ್ಥಿಗಳು ಸಾರ್ವಜನಿಕರ ಹಿತದೃಷ್ಟಿಯಿಂದ ಬಂದ್ ವಾಪಾಸ್ ಪಡೆದಿದ್ದೀವಿ ಅಂತ ಕಾಂಗ್ರೆಸ್‌ ಹೇಳಿದೆ. -masthmagaa.com Share on: WhatsAppContact Us for AdvertisementRead More →

masthmagaa.com: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮತ್ತೊಂದು ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ಸಿದ್ದರಾಮಯ್ಯ ಅವಧಿಯಲ್ಲಿ ಆರೋಗ್ಯ ಇಲಾಖೆಯ ಅಧೀನದಲ್ಲಿರುವಂತಹ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಮೂಲಕ ಕಾಂಡೋಮ್ ವಿತರಣೆಯಲ್ಲಿ 463 ಕೋಟಿ ರೂಪಾಯಿಗಳ ಹಗರಣ ನಡೆದಿದೆ ಅಂತ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಆರೋಪಿಸಿದ್ದಾರೆ. ಇನ್ನೊಂದ್ಕಡೆ ಕಾಂಗ್ರೆಸ್​ನವರ ಗೃಹಲಕ್ಷ್ಮಿ ಯೋಜನೆ ಇದು ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಅಂದ್ರೆ ಅತ್ತೆ ಸೊಸೆಯಂದಿರಿಗೆ ಜಗಳ ಹಚ್ಚುವ ಯೋಜನೆ ಅಂತ JDS ನಾಯಕ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ. -masthmagaa.com Share on: WhatsAppContact Us for AdvertisementRead More →

masthmagaa.com: BJP ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಪುತ್ರನ ಮನೆಯಲ್ಲಿ ಕೋಟಿ ಕೋಟಿ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ರಾಜೀನಾಮೆ ನೀಡ್ಬೇಕು ಅಂತ ಆಗ್ರಹಿಸಿ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ಮಾಡಿದ್ದಾರೆ. ಬೆಂಗಳೂರಿನ ರೇಸ್‌ ಕೋರ್ಸ್‌ ರಸ್ತೆಯ ಕಾಂಗ್ರೆಸ್‌ ಭವನದ ಬಳಿ ಪೋಸ್ಟರ್‌, ಸೂಟ್‌ಕೇಸ್, ಹಣವಿರುವ ಬ್ಯಾಗ್‌, ನಕಲಿ ನೋಟ್‌ ಪ್ರದರ್ಶಿಸಿ ಪ್ರತಿಭಟಿಸಿದ್ದಾರೆ. ಅಲ್ದೇ ಸಿಎಂ ಮನೆಯನ್ನ ಮುತ್ತಿಗೆ ಹಾಕೋಕೆ ಮುಂದಾಗಿದ್ದು, ಈ ವೇಳೆ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್‌ ನಾಯಕರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇತ್ತ ವಿರೂಪಾಕ್ಷಪ್ಪ ಅವ್ರ ಕ್ಷೇತ್ರ ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಪೇ ಎಂಎಲ್ ಅಭಿಯಾನ ಆರಂಭಿಸಿದ್ದಾರೆ. ಇನ್ನು ಸಿಎಂ ರಾಜೀನಾಮೆ ಕೊಡಬೇಕು ಅನ್ನೋ ಕಾಂಗ್ರೆಸ್‌ ಒತ್ತಾಯಿಸಿದ್ದಕ್ಕೆ ಬೊಮ್ಮಾಯಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯ ಅವ್ರ ಆಡಳಿತ ಕಾಲದಲ್ಲಿ ಸಚಿವರೊಬ್ಬರ ಕಚೇರಿಯಲ್ಲಿ 2 ಲಕ್ಷ ರೂ. ಸಿಕ್ಕಿತ್ತು. ಆಗ ಅವ್ರು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ರಾ? ಅಂದು ಲೋಕಾಯುಕ್ತ ಇದಿದ್ರೆ ಇವರೆಲ್ಲ ಅರೆಸ್ಟ್‌ ಆಗ್ತಿದ್ರು. ಹಗರಣ ಮುಚ್ಚಿ ಹಾಕೋಕೆನೇ ಲೋಕಾಯುಕ್ತ ಸಂಸ್ಥೆ ಮುಚ್ಚಿದ್ರು ಅಂತRead More →