masthmagaa.com:
ಭಾರತದಲ್ಲಿ ರಷ್ಯಾ ಪ್ರಜೆಗಳು ಅನುಮಾನಾಸ್ಪದವಾಗಿ ಸಾಯೋದು ಮುಂದುವರೆದಿದೆ. ಒಡಿಶಾದಲ್ಲಿ ಇಂದು ಮತ್ತೊಬ್ಬ ರಷ್ಯಾ ವ್ಯಕ್ತಿಯ ಶವ ಪತ್ತೆಯಾಗಿದೆ. ಕಳೆದ 15 ದಿನಗಳಲ್ಲಿ ರಷ್ಯಾ ವ್ಯಕ್ತಿ ಸಾವನ್ನಪ್ಪಿದ ಮೂರನೇ ಘಟನೆ ಇದಾಗಿದೆ. ಒಡಿಶಾದ ಜಗತ್ಪುರ ಜಿಲ್ಲೆಯ ಪಾರಾದೀಪ್ ಬಂದರಿನಲ್ಲಿ ಲಂಗರು ಹಾಕಿದ್ದ ಹಡಗಿನಲ್ಲಿ ರಷ್ಯಾ ವ್ಯಕ್ತಿಯ ಶವ ಪತ್ತೆಯಾಗಿದೆ. ಅವ್ರನ್ನ 51 ವರ್ಷದ ಮಿಲ್ಯಕೋವ್ ಸೆರ್ಗೆ ಅಂತ ಗುರುತಿಸಲಾಗಿದೆ. ಅವರು ಹಡಗಿನ ಮುಖ್ಯ ಇಂಜಿನಿಯರ್ ಆಗಿದ್ದು, ಹಡಗು ಬಾಂಗ್ಲಾದೇಶದ ಚಿತ್ತಗಾಂಗ್ ಬಂದರಿನಿಂದ ಪಾರಾದೀಪ್ ಮೂಲಕ ಮುಂಬೈಗೆ ತೆರುಳುತ್ತಿತ್ತು ಎನ್ನಲಾಗಿದೆ. ಸಾವಿಗೆ ಕಾರಣ ಏನು ಅನ್ನೊದ್ರ ಬಗ್ಗೆ ತನಿಖೆ ಮಾಡಲಾಗ್ತಿದೆ ಅಂತ ಪೊಲೀಸರು ಹೇಳಿದ್ದಾರೆ. ಇನ್ನು ಈ ಮುಂಚೆ ಇಬ್ಬರು ರಷ್ಯಾದ ಪ್ರವಾಸಿಗರು ಒಡಿಶಾದ ರಾಯಗಡ ಪಟ್ಟಣದಲ್ಲಿ ಸಾವನ್ನಪ್ಪಿದ್ರು. ಪಾವೆಲ್ ಅಂಟೋವ್ ಅನ್ನೊರು ಅವರು ಸ್ಟೇ ಆಗಿದ್ದ ಹೊಟೇಲ್ನ 3ನೇ ಮಹಡಿಯಿಂದ ಬಿದ್ದು ಮೃತಪಟ್ರೆ, ಅವರ ಸ್ನೇಹಿತ ವ್ಲಾಡಿಮರ್ ಬಿಡೆನೋವ್ ಅನ್ನೊರು ಹೊಟೇಲ್ನ ರೂಮ್ನಲ್ಲಿ ಶವವಾಗಿ ಪತ್ತೆಯಾಗಿದ್ರು.
-masthmagaa.com
Contact Us for Advertisement