masthmagaa.com:
ಪಠ್ಯಪುಸ್ತಕಗಳನ್ನ ಕೇಸರೀಕರಣ ಮಾಡಲಾಗ್ತಿದೆ ಅನ್ನೋ ವಿಚಾರದ ಬಗ್ಗೆ ಇವತ್ತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದಾರೆ. ಈ ವೇಳೆ ಪಠ್ಯಪುಸ್ತಕಗಳನ್ನ ʻಪಕ್ಷಪುಸ್ತಕʼಗಳನ್ನಾಗಿ ಮಾಡುವ ವ್ಯವಸ್ಥಿತ ಹುನ್ನಾರಕ್ಕೆ ನನ್ನ ಧಿಕ್ಕಾರವಿದೆ. ಬಿಜೆಪಿಯ ನೈಜ ಬಣ್ಣದ ವಿಸ್ತೃತರೂಪವೇ ಆಯ್ದ ಪಠ್ಯಗಳನ್ನ ಟಾರ್ಗೆಟ್ ಮಾಡಿ ಡಿಲೀಟ್ ಮಾಡುವುದ ಅಂತ ಆರೋಪಿಸಿದ್ದಾರೆ. ಜೊತಗೆ ಆಪರೇಷನ್ ಕಮಲದ ಅನೈತಿಕ ಮಾರ್ಗದಲ್ಲಿ ಅಧಿಕಾರಕ್ಕೆ ಬಂದ ಸ್ವಘೋಷಿತ ಡೋಂಗಿ ರಾಷ್ಟ್ರಭಕ್ತರು ಇನ್ನೇನು ಮಾಡಲು ಸಾಧ್ಯ ಅಂತ ಪ್ರಶ್ನಿಸಿದ್ದಾರೆ. ಅತ್ತ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯಿಸಿ, ಯಾರೇ ವಿರೋಧ ಮಾಡಿದ್ರು ಕೇಶವ ಬಲಿರಾಮ್ ಹೆಡಿಗೇವಾರ್ ಅವ್ರ ಭಾಷಣ ಪಠ್ಯದಿಂದ ಹಿಂಪಡೆಯುವದಿಲ್ಲ ಅಂತ ಹೇಳಿದ್ದಾರೆ.
-masthmagaa.com
Contact Us for Advertisement