masthmagaa.com:
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಹಾಗೂ ಟಿಎಂಸಿ ನಡುವೆ ತಿಕ್ಕಾಟ ಶುರುವಾಗಿದೆ. ಪ್ರಾಣ ಪ್ರತಿಷ್ಠಾಪನೆ ದಿನ ಅಂದ್ರೆ ಜನವರಿ 22 ರಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಕೊಲ್ಕತ್ತಾದ ಬೀದಿಗಳಲ್ಲಿ ಸರ್ವಧರ್ಮ ಸಮನ್ವಯ ರ್ಯಾಲಿಯನ್ನ ನಡೆಸಿದ್ದಾರೆ. ಈ ವೇಳೆ ಎಡ ಪಕ್ಷಗಳು I.N.D.I.A ಮೈತ್ರಿಕೂಟದ ಕಾರ್ಯಸೂಚಿಯನ್ನ ಕಂಟ್ರೋಲ್ ಮಾಡೋಕೆ ಟ್ರೈ ಮಾಡ್ತಿವೆ ಎಂದಿದ್ದಾರೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ದೀದಿಯನ್ನ ಅವಕಾಶವಾದಿ ಅಂತ ಕರೆದಿದ್ದಾರೆ. ಜೊತೆಗೆ ಮಮತಾ ಬ್ಯಾನರ್ಜಿ ಅವ್ರ ಸಹಾಯದಿಂದ ಕಾಂಗ್ರೆಸ್ ಚುನಾವಣೆ ಎದುರಿಸಲ್ಲ. ಕಾಂಗ್ರೆಸ್ಗೆ ತನ್ನ ಸ್ವಂತ ಬಲದ ಮೇಲೆ ಹೇಗೆ ಹೋರಾಡ್ಬೇಕು ಅನ್ನೊದು ತಿಳಿದಿದೆ. ಮಮತಾ ಬ್ಯಾನರ್ಜಿ ಕಾಂಗ್ರೆಸ್ ಬೆಂಬಲದೊಂದಿಗೆ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ್ರು ಅನ್ನೊದನ್ನ ನೆನಪಿಟ್ಟುಕೊಳ್ಳಬೇಕು ಎಂದಿದ್ದಾರೆ.
-masthmagaa.com
Contact Us for Advertisement