masthmagaa.com:
ಅಪ್ಘಾನ್ ವಿರುದ್ದದ ಟಿ-20 ಸಿರೀಸ್ಗೆ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ರನ್ನ ಡ್ರಾಪ್ ಮಾಡಿದ್ದು ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಇದೀಗ BCCI ಇಬ್ಬರ ಮೇಲೆ ಶಿಸ್ತುಕ್ರಮ ಕೈಗೊಂಡಿದೆ ಅದ್ರಿಂದಲೇ ಡ್ರಾಪ್ ಮಾಡಿದೆ ಅಂತ ವರದಿಯಾಗಿದೆ. ಈ ಬಗ್ಗೆ ಬಂಗಾಳಿ ನ್ಯೂಸ್ ಪೇಪರ್ ಆನಂದ್ ಬಜಾರ್ ಪತ್ರಿಕೆ ರಿಪೋರ್ಟ್ ಮಾಡಿದೆ. ಅದ್ರಲ್ಲಿ ಇಶಾನ್ ಕಿಶನ್ ಸೌತ್ ಆಫ್ರಿಕಾ ವಿರುದ್ದದ ಟೆಸ್ಟ್ ವೇಳೆ ವೈಯಕ್ತಿಕ ಕಾರಣದಿಂದ ವಿಶ್ರಾಂತಿ ಪಡೆದಿದ್ರು. ಆದ್ರೆ ನಂತ್ರ ದುಬೈನಲ್ಲಿ ಧೋನಿ ಜೊತೆ ಪಾರ್ಟಿ ಮಾಡಿದ್ರು. ಅಲ್ಲದೇ ಕೌನ್ ಬನೇಗಾ ಕರೋಡ್ಪತಿಯಲ್ಲಿ ಭಾಗಿಯಾಗಿದ್ರು. ಇದು BCCI ಕೆಂಗಣ್ಣಿಗೆ ಗುರಿಯಾಗಿದ್ದು ಇಶಾನ್ ಮೇಲೆ ಶಿಸ್ತುಕ್ರಮ ಜರುಗಿಸಿದೆ ಅಂತ ಹೇಳಿದೆ. ಇನ್ನು ಅತ್ತ ದಕ್ಷಿಣ ಆಫ್ರಿಕಾ ಸಿರೀಸ್ನಲ್ಲಿ ಶ್ರೇಯಸ್ ಅಯ್ಯರ್ ಅವ್ರ ಶಾಟ್ ಸೆಲೆಕ್ಷನ್ BCCI ಆಯ್ಕೆಗಾರರಿಗೆ ಇಷ್ಟ ಆಗಿರ್ಲಿಲ್ಲ. ಹೀಗಾಗಿ ಮುಂಬೈ ಪರ ರಣಜಿ ಆಡು ಅಂತ ಹೇಳಿದ್ರು. ಆದ್ರೆ ಅಯ್ಯರ್ ವಿಶ್ರಾಂತಿ ಕೇಳಿದ್ದಾರೆ. ಇದು ಕೂಡ BCCIಗೆ ಉದ್ದಟತನ ಅನಿಸಿದೆ. ಹೀಗಾಗಿ ಅವ್ರನ್ನೂ ಡ್ರಾಪ್ ಮಾಡಿದೆ ಅಂತ ಹೇಳಿದೆ. ಇತ್ತ ದಕ್ಷಿಣ ಆಫ್ರಿಕಾ ಸರಣಿ ಬಳಿಕ ಭಾರತದ ದಿಗ್ಗಜ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ICC ಟೆಸ್ಟ್ ರ್ಯಾಂಕಿಂಗ್ನಲ್ಲಿ ಬಡ್ತಿ ಪಡೆದಿದ್ದಾರೆ. ICC ಟೆಸ್ಟ್ ಬ್ಯಾಟರ್ಗಳ ರ್ಯಾಂಕಿಂಗ್ನಲ್ಲಿ 9ನೇ ಸ್ಥಾನದಲ್ಲಿದ್ದ ವಿರಾಟ್ 6ನೇ ಸ್ಥಾನಕ್ಕೇರಿದ್ರೆ. ರೋಹಿತ್ 14 ಸ್ಥಾನದಿಂದ 10ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.
-masthmagaa.com
Contact Us for Advertisement