masthmagaa.com:
ರಾಜ್ಯದಲ್ಲಿ ಚುನಾವಣೆ ಹತ್ತಿರವಾಗ್ತಿದ್ದಂತೆ ಪ್ರತಿಮೆ ರಾಜಕೀಯ ಜೋರಾಗಿದೆ. ಈಗಾಗಲೇ ಸಿಎಂ ಬೊಮ್ಮಾಯಿ ಅವ್ರಿಂದ ಉದ್ಘಾಟನೆಗೊಂಡಿದ್ದ ಶಿವಾಜಿ ಪ್ರತಿಮೆಯನ್ನ ಬೆಳಗಾವಿಯಲ್ಲಿ ಮತ್ತೊಮ್ಮೆ ಉದ್ಘಾಟನೆ ಮಾಡಲಾಗಿದೆ. ರಾಜಹಂಸಗಡ ಕೋಟೆಯಲ್ಲಿ ಶಿವಾಜಿಯವರ ವಂಶಸ್ಥ ಯುವರಾಜ ಸಂಭಾಜಿರಾಜೇ ಅವರಿಂದ ಅದ್ದೂರಿಯಾಗಿ 2ನೇ ಬಾರಿ ಪ್ರತಿಮೆಯನ್ನ ಲೋಕಾರ್ಪಣೆ ಮಾಡಲಾಗಿದೆ. ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿದೆ. ಇದಕ್ಕೆ ಪ್ರತಿಕ್ರಿಯಿಸಿರೊ ಬೊಮ್ಮಾಯಿ, ಶಿವಾಜಿ ಪ್ರತಿಮೆಯನ್ನ ಮತ್ತೆ ಲೋಕಾರ್ಪಣೆ ಮಾಡ್ತಿರೋದು ಹಾಸ್ಯಾಸ್ಪದ. ಸರ್ಕಾರದಿಂದ ನಿರ್ಮಾಣಗೊಂಡಿರೊ ಶಿವಾಜಿ ಪ್ರತಿಮೆಯನ್ನ ಸರ್ಕಾರ ಅಧಕೃತವಾಗಿ ಉದ್ಘಾಟಿಸಿದೆ. ಆದ್ರೆ ಮತ್ತೆ ಉದ್ಘಾಟನೆ ಮಾಡ್ತಿರೋದನ್ನ ಎಲ್ಲೂ ಕೇಳಿರಲಿಲ್ಲ, ನೋಡಿರಲಿಲ್ಲ ಅಂತ ವ್ಯಂಗ್ಯ ಹಾಡಿದ್ದಾರೆ.
-masthmagaa.com
Contact Us for Advertisement