masthmagaa.com:
ಹಿರಿಯ IAS ಅಧಿಕಾರಿಯೊಬ್ರು ಬಿಜೆಪಿ ಪಕ್ಷ ಸೇರಿದ್ದಕ್ಕೆ ಪಂಜಾಬ್ ಸಿಎಂ ಭಗವಂತ್ ಮಾನ್ ಗರಂ ಆಗಿದ್ದಾರೆ. ಶಿರೋಮಣಿ ಅಕಾಲಿದಳದ ನಾಯಕ ಸಿಖಂದರ್ ಸಿಂಗ್ ಮಲುಕಾ ಅವ್ರ ಮೊಮ್ಮಗಳು ಪರಂಪಲ್ ಕೌರ್ ದಿಲ್ಲಿಯಲ್ಲಿ ಕೇಂದ್ರ ಸಚಿವ ಹರ್ದಿಪ್ ಸಿಂಗ್ ಪುರಿ ನೇತೃತ್ವದಲ್ಲಿ ತಮ್ಮ ಪತಿಯೊಂದಿಗೆ ಬಿಜೆಪಿ ಸೇರಿದ್ದಾರೆ. ಇನ್ನು ಕಳೆದ ವಾರವೇ ತನ್ನ IAS ಹುದ್ದೆಗೆ ರಾಜೀನಾಮೆ ಪತ್ರ ನೀಡಿದ್ರು. ಆದ್ರೆ ಸಿಎಂರಿಂದ ಆ ರಾಜೀನಾಮೆ ಪತ್ರ ಇನ್ನು ಅಂಗೀಕಾರವಾಗಿರಲಿಲ್ಲ. ಹೀಗಾಗಿ ಸಿಎಂ ಮಾನ್, ಕೌರ್ ವಿರುದ್ದ ಸಿಡಿಮಿಡಿಗೊಂಡಿದ್ದಾರೆ. IAS ಅಧಿಕಾರಿಯಾಗಲು ಎಷ್ಟು ಹಂಬಲಿಸ್ತಿರೀ ಹಾಗೇ ಆ ಹುದ್ದೆಗೆ ರಾಜೀನಾಮೆ ನೀಡಲು ನಿರ್ದಿಷ್ಟ ವಿಧಾನ ಒಂದಿದೆ. ದಯವಿಟ್ಟು ಅದನ್ನ ಅರ್ಥ ಮಾಡ್ಕೊಳ್ಳಿ, ಇಲ್ದಿದ್ರೆ ನಿಮ್ಮ ಜೀವಮಾನ ಆದಾಯ ಗಳಿಕೆ ಅಪಾಯದಲ್ಲಿರುತ್ತೆ ಅಂತ ಎಕ್ಸ್ನಲ್ಲಿ ತಿಳಿಸಿದ್ದಾರೆ.
-masthmagaa.com
Contact Us for Advertisement