masthmagaa.com:
ಶ್ರೀರಾಮಜನ್ಮಭೂಮಿಯ ರಾಮಲಲ್ಲಾ ಮಂದಿರ ಉದ್ಘಾಟನೆ ಆಗೋ ಹೊಸ್ತಿಲಲ್ಲಿರೋವಾಗ್ಲೆ ಶ್ರೀಕೃಷ್ಣ ಜನ್ಮಭೂಮಿ ವಿಚಾರ ಸದ್ದು ಮಾಡಿದೆ. ಮಥುರಾದ ಶ್ರೀ ಕೃಷ್ಣಜನ್ಮಭೂಮಿ ಶಾಹಿ-ಈದ್ಗಾ ಮಸೀದಿ ಕೇಸ್ಗೆ ಸಂಬಂಧಿಸಿದಂತೆ ಸರ್ವೇ ನಡೆಸಲು ಸಮಿತಿ ರಚಿಸೋಕೆ ಅಲಹಾಬಾದ್ ಕೋರ್ಟ್ ಅಪ್ರೂವಲ್ ನೀಡಿದೆ. ಈ ವಿಚಾರವಾಗಿ ಮೂವರು ಕಮೀಷನರ್ಗಳ ಸಮಿತಿ ರಚಿಸೋದಾಗಿ ಕೋರ್ಟ್ ಹೇಳಿದೆ. ಡಿಸೆಂಬರ್ 18ರ ವಿಚಾರಣೆಯಲ್ಲಿ ಈ ವಿಚಾರವನ್ನ ಅಂತಿಮಗೊಳಿಸೋದಾಗಿ ತಿಳಿಸಲಾಗಿದೆ. ಮಸೀದಿಯಲ್ಲಿ ಶೇಷನಾಗನ ಚಿತ್ರ ಹೊಂದಿರೊ ಕಮಲದ ಹೂವಿನ ಆಕಾರದ ಕಂಬ ಒಂದು ಪತ್ತೆಯಾಗಿ ಈ ವಿವಾದ ಶುರುವಾಗಿತ್ತು. ಈ ಬಗ್ಗೆ ಹಲವಾರು ಅರ್ಜಿಗಳು ಮಥುರಾ ಕೋರ್ಟ್ಗೆ ಸಲ್ಲಿಕೆಯಾಗಿದ್ವು, ನಂತರ ಈ ಅರ್ಜಿಗಳು ಅಲಹಾಬಾದ್ ಹೈ-ಕೋರ್ಟ್ಗೆ ವರ್ಗಾವಣೆ ಆಗಿವೆ.
-masthmagaa.com
Contact Us for Advertisement