masthmagaa.com:
ರಾಜ್ಯದಲ್ಲಿ ಬಜರಂಗದಳ ಬ್ಯಾನ್ ವಿಚಾರ ರಾಜಕೀಯವಾಗಿ ತೀವ್ರ ಕೋಲಾಹಲಕ್ಕೆ ಕಾರಣವಾಗ್ತಿರೋ ಹೊತ್ತಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಪ್ರಮುಖ ಬೆಳವಣಿಗೆಯಾಗಿದೆ. ಹಿಂದೂ ಯುವತಿಯ ಜೊತೆಯಲ್ಲಿದ್ದ ಅನ್ನೋ ಕಾರಣಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಭಜರಂಗದಳದ ಕಾರ್ಯಕರ್ತರು ಎನ್ನಲಾದ 4 ಜನರನ್ನ ಬಂಧಿಸಲಾಗಿದೆ. ಬಂಧಿತರನ್ನು ಎಸ್ ಪ್ರದೀಪ್, ದಿನೇಶ್ ಗೌಡ, ನಿಶಾಂತ್ ಕುಮಾರ್ ಮತ್ತು ಪ್ರಜ್ವಲ್ ಅಂತ ಗುರುತಿಸಲಾಗಿದೆ. ಮೊಹಮ್ಮದ್ ಫರೀಷ್ ಅನ್ನೋ 18 ವರ್ಷದ ಹುಡುಗನ ಜೊತೆಗೆ ಹಿಂದೂ ಯುವತಿ ಜ್ಯೂಸ್ ಕುಡಿಯುತ್ತಿದ್ದಾಗ ಇಬ್ರ ಮೇಲೆ ದಾಳಿಯಾಗಿದೆ ಅಂತ ಹೇಳಲಾಗ್ತಿದೆ. ಇನ್ನು ಬಜರಂಗ ದಳ ನಿಷೇಧ ಬಿಸಿ ಕೇವಲ ರಾಜ್ಯದಲ್ಲಿ ಮಾತ್ರವಲ್ದೇ ರಾಷ್ಟ್ರಮಟ್ಟದಲ್ಲೂ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ. ಇದೀಗ ಮಧ್ಯ ಪ್ರದೇಶದ ಜಬಲ್ಪುರದಲ್ಲಿ ಬಜರಂಗದಳ ಕಾರ್ಯಕರ್ತರು ಅಲ್ಲಿನ ಕಾಂಗ್ರೆಸ್ ಕಚೇರಿ ಮೇಲೆ ದಾಳಿ ಮಾಡಿ, ಕಚೇರಿಯನ್ನ ಧ್ವಂಸಗೊಳಿಸಿದ್ದಾರೆ.
-masthmagaa.com
Contact Us for Advertisement