masthmagaa.com:
ಅಯೋಧ್ಯೆಯಲ್ಲಿ ಉದ್ಘಾಟನೆಗೆ ಸಿದ್ಧವಾಗಿರೋ ಶ್ರೀ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರೊ ರಾಮ ಲಲ್ಲ ಮೂರ್ತಿಯ ಕೆತ್ತನೆಯಲ್ಲಿ ಕನ್ನಡಿಗರು ಭಾಗಿಯಾಗಿದ್ದಾರೆ ಅಂತ ವರದಿಯಾಗಿದೆ. ಮೈಸೂರಿನ ಅರುಣ್, ಬೆಂಗಳೂರಿನ ಜಿ ಎಲ್ ಭಟ್ ಹಾಗೂ ರಾಜಸ್ಥಾನದ ಸತ್ಯನಾರಾಯಣ ಪಾಂಡೇ ಸೇರಿ ಈ 51 ಇಂಚು ಎತ್ತರದ ರಾಮ ಲಲ್ಲ ಮೂರ್ತಿ ಕೆತ್ತನೆ ಮಾಡಿದ್ದಾರೆ. ಈ ಮೂರ್ತಿ ಪ್ರಭಾವಳಿಯನ್ನೂ ಒಳಗೊಂಡಂತೆ ಮೂರು ಅಡಿ ಅಗಲ ಇದೆ. ಈ ಬಗ್ಗೆ ಮಾತನಾಡಿರುವ ಅರುಣ್, ರಾಮಲಲ್ಲಾ ಕಲ್ಲಿನ ವಿಗ್ರಹ ಕೆತ್ತನೆಗೆ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಅಂತ ಸಂತಸ ವ್ಯಕ್ತ ಪಡಿಸಿದ್ದಾರೆ.
-masthmagaa.com
Contact Us for Advertisement